ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಮಾಡಿಕೊಂಡು ತುಕಾರಾಂ ಸಂಸದರಾದರು: ಪ್ರತಾಪ್ ಸಿಂಹ
ಸಿದ್ದರಾಮಯ್ಯ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರುವುದೇ ಉತ್ತಮ, ಅವರು ಮುಂದುವರಿದರೆ ಕಾಂಗ್ರೆಸ್ ಪಕ್ಷದ ದುರಾಡಳಿತ, ಭ್ರಷ್ಟಾಚಾರ ಎಲ್ಲ ಸಂಗತಿಗಳು ಜನಕ್ಕೆ ಗೊತ್ತಾಗುತ್ತವೆ, ಮುಡಾ ಹಗರಣದಲ್ಲಿ ದಲಿತನೊಬ್ಬನಿಗೆ ಸೇರಿದ ಜಮೀನು ಜಾತಿಯಲ್ಲಿ ಕುರುಬರಾಗಿರುವ ಸಿದ್ದರಾಮಯ್ಯನವರಿಗೆ ಹೇಗೆ ಸೇರುತ್ತದೆ ಎಂದು ಪ್ರತಾಙ್ ಸಿಂಹ ಕೇಳಿದರು.
ಬಳ್ಳಾರಿ: ಸಂಡೂರಿನ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹಣಮಂತು ಪರ ಪ್ರಚಾರ ಮಾಡುತ್ತಿರುವ ಮಾಜಿ ಸಂಸದ ಪ್ರತಾಪ್ ಸಿಂಹ ನಮ್ಮ ವರದಿಗಾರನೊಂದಿಗೆ ಮಾತಾಡಿ ಸಂಡೂರಿಗೆ ಉಪ ಚುನಾವಣೆ ನಡೆಯುವಂತಾಗಿದ್ದೇ ಅಕ್ರಮ, ಇಲ್ಲಿನ ಶಾಸಕರಾಗಿದ್ದ ಈ ತುಕಾರಾಂ ಸಂಸದರಾಗಿ ಅಯ್ಕೆಯಾಗಲು ವಾಲ್ಮೀಕಿ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಂಡರು, ಕ್ಷೇತ್ರದಿಂದ ವಿಧಾನಸಭೆಗೆ 4 ಬಾರಿ ಚುನಾಯಿತರಾದರೂ ಅಭಿವೃದ್ಧಿ ಕಾರ್ಯಗಳ್ಯಾವೂ ಮಾಡಿಲ್ಲ, ಬಿಜೆಪಿ ಅಭ್ಯರ್ಥಿ ಗೆಲ್ಲೋದು ನಿಶ್ಚಿತ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯಾರದೋ ಹೆಣ ತಂದು ಹೂತು ನಮ್ಮದು ಎನ್ನುತ್ತಾರೆ: ವಕ್ಫ್ ಆಸ್ತಿ ವಿಚಾರವಾಗಿ ಪ್ರತಾಪ್ ಸಿಂಹ ವಾಗ್ದಾಳಿ
Loading...
Unable to load recommendations.
Follow Us