ಅನಾಮಿಕ ವ್ಯಕ್ತಿ ಹೆಣ ಹೂಳುವುದನ್ನು ನೋಡಿದ್ದೇವೆ ಎನ್ನುತ್ತಿರುವ ಇಬ್ಬರು; ಮೈಕಟ್ಟಿನಿಂದ ಅನಾಮಿಕನ ಗುರುತು?

ಅರುಣ್​ ಕುಮಾರ್​ ಬೆಳ್ಳಿ

Updated on: Aug 13, 2025 | 2:54 PM

ಅಂಗಡಿಯನ್ನು ಸುಮಾರು 40 ವರ್ಷಗಳ ಕಾಲ ಅಂಗಡಿ ನಡೆಸಿದ್ದು 2016-17ರಲ್ಲಿ ಡೆಮಾಲಿಷ್ ಮಾಡಲಾಯಿತು, ಅನಾಮಿಕ ಹಣ ಹೂತಿಡುವುದನ್ನು ತಾನು 2003ರಿಂದ 2010ರವರೆಗೆ ನೋಡಿದ್ದಾಗಿ ಹೇಳುವ ಪುರಂದರ ಗೌಡರು, ಅಗೆಲ್ಲ ಇದರ ಬಗ್ಗೆ ಮಾತಾಡಲು ಭಯವಾಗುತಿತ್ತು, ಈಗ ಎಸ್ಐಟಿ ರಚನೆಯಾಗಿರುವುದರಿಂದ ಭಯವಿಲ್ಲ, ಹಾಗಾಗಿ ದೂರು ನೀಡಿದ್ದೇವೆ ಎಂದು ಹೇಳುತ್ತಾರೆ.

ದಕ್ಷಿಣ ಕನ್ನಡ, ಆಗಸ್ಟ್ 13: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿರುವ ಬಗ್ಗೆ ಅನಾಮಿಕ ವ್ಯಕ್ತಿಯೊಬ್ಬ ಹೇಳಿದ ಬಳಿಕ ಎಸ್ಐಟಿ ರಚನೆಯಾಗಿ ಅವನು ತೋರಿಸುತ್ತಿರುವ ಜಾಗದಲ್ಲೆಲ್ಲ ಭೂಮಿಯನ್ನು ಅಗೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅನಾಮಿಕ ನೀಡಿದ ಹೇಳಿಕೆಯನ್ನು ಪುಷ್ಠೀಕರಿಸುವ ಇಬ್ಬರು ವ್ಯಕ್ತಿಗಳು ಎಸ್ಐಟಿ ಕಚೇರಿಗೆ (SIT office) ಬಂದು ಅನಾಮಿಕ ಹೆಣ ಹೂತಿಡುವುದನ್ನು ತಾವು ನೋಡಿದ್ದಾಗಿ ಹೇಳುತ್ತಿದ್ದಾರೆ. ನಮ್ಮ ವರದಿಗಾರರ ಪುರಂದರ ಗೌಡ ಎನ್ನುವವರ ಜೊತೆ ಮಾತಾಡಿದ್ದು ಹೆಣಗಳನ್ನು ಹೂತ ಜಾಗದಿಂದ ಕೊಂಚ ದೂರದಲ್ಲಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರಂತೆ. ಇದೇ ವ್ಯಕ್ತಿ ಹೆಣಗಳನ್ನು ಹೂತಿಡುತ್ತಿದ್ದ ಅಂತ ಹೇಗೆ ಗುರುತು ಹಿಡಿದಿರಿ ಅಂತ ಕೇಳಿದರೆ ಮೈಕಟ್ಟನ್ನು ನೋಡಿ ಗುರುತು ಹಿಡಿದಿದ್ದೇವೆ ಎಂದು ಪುರಂದರ ಗೌಡರು ಹೇಳುತ್ತಾರೆ.

ಇದನ್ನೂ ಓದಿ: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ಎಸ್ಐಟಿ ತಂಡದ ದಿನದ ಖರ್ಚು ಎಷ್ಟು ಗೊತ್ತಾ?

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.