ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ

Edited By:

Updated on: Sep 17, 2026 | 9:52 PM

ಪ್ರಧಾನಿ ಮೋದಿ ಅವರ 76ನೇ ಹುಟ್ಟುಹಬ್ಬದ ಅಂಗವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಕ್ತದಾನ ಮಾಡಿದರು. ಆ ಮೂಲಕ ಸೇವಾ ಸಂಕಲ್ಪ ಅಭಿಯಾನಕ್ಕೆ ವಿಶೇಷ ಸ್ಪರ್ಶ ನೀಡಿದರು. ಧಾರವಾಡದ ಚನ್ನಯ್ಯನಗಿರಿಯಲ್ಲಿ ಬಸವಾನಂದ ಸ್ವಾಮೀಜಿ ಅವರಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಭಾಗಿಯಾಗಿ ಸಚಿವ ಪ್ರಲ್ಹಾದ್ ಜೋಶಿ ರಕ್ತದಾನ ಮಾಡಿದ್ದಾರೆ.

ಧಾರವಾಡ, ಸೆಪ್ಟೆಂಬರ್​ 17: ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ಬಿಜೆಪಿ ವತಿಯಿಂದ ಇಂದಿನಿಂದ ಆರಂಭಗೊಂಡಿರುವ ‘ಸೇವಾ ಸಂಕಲ್ಪ ಅಭಿಯಾನ’ದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಕ್ತದಾನ ಮಾಡಿದರು. ಧಾರವಾಡದ ಮಹಾಮನೆ ಮನಗುಂಡಿಯ ಚನ್ನಯ್ಯನಗಿರಿಯಲ್ಲಿ ಬಸವಾನಂದ ಸ್ವಾಮೀಜಿ ಅವರು ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ ಸಚಿವರು, ರಕ್ತದಾನ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಬಸವಾನಂದ ಸ್ವಾಮೀಜಿ, ‘ಪ್ರಧಾನಮಂತ್ರಿಗಳ 76ನೇ ಹುಟ್ಟುಹಬ್ಬದ ಸಂತೋಷ ಎಷ್ಟಿತ್ತೋ, ಪ್ರಲ್ಹಾದ್ ಜೋಶಿ ಅವರಿಗೆ ಶುಗರ್​​​, ಬಿಪಿ ಇಲ್ಲ ಎನ್ನುವುದನ್ನ ಕೇಳಿ ನನಗೆ ಹತ್ತು ಪಟ್ಟು ಸಂತೋಷವಾಯಿತು’ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Sep 17, 2026 09:50 PM
Loading...
Unable to load recommendations.
Follow Us