Sign In

By signing in or creating an account, you agree with Associated Broadcasting Company's Terms & Conditions and Privacy Policy.

Kolar: ಮಾಲೂರಲ್ಲಿ ನಡೆದ ಅನ್ನಭಾಗ್ಯ ಫಲಾನುಭವಿಗಳ ಸಮಾವೇಶದಲ್ಲಿ ಎಲ್ಲ ಪಕ್ಷಗಳ ಪ್ರತಿನಿಧಿಗಳು ವೇದಿಕೆ ಮೇಲೆ ಒಟ್ಟಿಗೆ ಕಂಡರು!

Kolar: ಮಾಲೂರಲ್ಲಿ ನಡೆದ ಅನ್ನಭಾಗ್ಯ ಫಲಾನುಭವಿಗಳ ಸಮಾವೇಶದಲ್ಲಿ ಎಲ್ಲ ಪಕ್ಷಗಳ ಪ್ರತಿನಿಧಿಗಳು ವೇದಿಕೆ ಮೇಲೆ ಒಟ್ಟಿಗೆ ಕಂಡರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 15, 2023 | 5:28 PM

ವೇದಿಕೆ ಮೇಲಿದ್ದವವರು ಬೇರೆ ಬೇರೆ ಪಕ್ಷಗಳ ಪ್ರತಿನಿಧಿಗಳಾದರೂ, ಎಲ್ಲರೂ ಒಟ್ಟಿಗೆ ನಗುತ್ತಾ, ಸಾಮರಸ್ಯದೊಂದಿಗೆ ಸಮಾವೇಶದಲ್ಲಿ ಪಾಲ್ಗೊಂಡರು.

ಕೋಲಾರ: ಮಂಡ್ಯದಲ್ಲಿ ವಿಶ್ವವಿದ್ಯಾಲಯದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕಿಂತ ಭಿನ್ನವಾದ ಕಾರ್ಯಕ್ರಮ ಇಂದು ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ನಡೆಯಿತು. ಈಗಾಗಲೇ ತಿಳಿಸಿದಂತೆ ಮಂಡ್ಯದ ಕಾರ್ಯಕ್ರಮದಲ್ಲಿ ಆಹ್ವಾನಿತ ಗಣ್ಯರಾದ ಸಂಸದೆ ಸುಮಲತಾ ಅಂಬರೀಷ್ ಮತ್ತು ಸಚಿವ ಎಮ ಚೆಲುವರಾಯ ಸ್ವಾಮಿ ವೇದಿಕೆ ಮೇಲೆ ಒಟ್ಟಿಗೆ ಕಾಣಿಸಲಿಲ್ಲ. ಆದರೆ ಮಾಲೂರಲ್ಲಿ ನಡೆದ ಅನ್ನಭಾಗ್ಯ ನೇರ ನಗದು ಸಂದಾಯ, ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಹಣ ಜಮೆಯಾದ ಫಲಾನಿಭವಿಗಳ ಸಮಾವೇಶದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆಹೆಚ್ ಮುನಿಯಪ್ಪ (KH Muniyappa), ಕೋಲಾರ ಉಸ್ತುವಾರಿ ಸಚಿವ ಭೈರತಿ ಸುರೇಶ್ (Byrathi Suresh), ಕೋಲಾರ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ (S Muniswamy) ಮತ್ತು ಸ್ಥಳೀಯ ಕಾಂಗ್ರೆಸ್ ಶಾಸಕ ಕೆ ವೈ ನಂಜೇಗೌಡ (KY Nanjegowda) ಮೊದಲಾದವರ ಜೊತೆ ಬೇರೆ ನಾಯಕರು ಕೂಡ ಇದ್ದರು. ವೇದಿಕೆ ಮೇಲಿದ್ದವವರು ಬೇರೆ ಬೇರೆ ಪಕ್ಷಗಳ ಪ್ರತಿನಿಧಿಗಳಾದರೂ, ಎಲ್ಲರೂ ಒಟ್ಟಿಗೆ ನಗುತ್ತಾ, ಸಾಮರಸ್ಯದೊಂದಿಗೆ ಸಮಾವೇಶದಲ್ಲಿ ಪಾಲ್ಗೊಂಡರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ