Vaikuntha Ekadashi: ಬೆಂಗಳೂರು ರಾಜಾಜಿನಗರದ ಇಸ್ಕಾನ್ ದೇವಸ್ಥಾನಕ್ಕೆ ಹರಿದು ಬರುತ್ತಿರುವ ಭಕ್ತಸಾಗರ

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Jan 02, 2023 | 12:26 PM

ಕೊರೋನಾ ವೈರಸ್ ಸೋಂಕಿನ ಭೀತಿ ಪುನಃ ಆರಂಭವಾಗಿರುವದರಿಂದ ದೇವಸ್ಥಾನದೊಳಗೆ ಪ್ರವೇಶಿಸುವಾಗ ಮಾಸ್ಕ್ ಧರಿಸಿರಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಅಂತ ಭಕ್ತರಿಗೆ ತಿಳಿಸಲಾಗುತ್ತಿದೆ.

ಬೆಂಗಳೂರು: ಇವತ್ತು ವೈಕುಂಠ ಏಕಾದಶಿ (Vaikuntha Ekadashi). ನಗರದ ರಾಜಾಜಿನಗರದಲ್ಲರುವ ಇಸ್ಕಾನ್ ದೇವಾಲಯಕ್ಕೆ (ISKCON Temple) ಭಕ್ತಗಣ ಬೆಳಗಿನ ಜಾವದಿಂದ ಹರಿದು ಬರುತ್ತಿದೆ. ದೇವಸ್ಥಾನದ ಆಡಳಿತ ಮಂಡಳಿ ಹೇಳುವ ಪ್ರಕಾರ ಸುಮಾರು ಒಂದೂವರೆ ಲಕ್ಷ ಭಕ್ತರು (devotess) ಇಂದು ಶ್ರೀನಿವಾಸನ ದರ್ಶನ ಪಡೆಯಲಿದ್ದಾರೆ. ಕೊರೋನಾ ವೈರಸ್ ಸೋಂಕಿನ ಭೀತಿ ಪುನಃ ಆರಂಭವಾಗಿರುವದರಿಂದ ದೇವರ ದರ್ಶನಕ್ಕೆ ಬರುವಾಗ ಮತ್ತು ದೇವಸ್ಥಾನದೊಳಗೆ ಪ್ರವೇಶಿಸುವಾಗ ಮಾಸ್ಕ್ ಧರಿಸಿರಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಅಂತ ಭಕ್ತರಿಗೆ ತಿಳಿಸಲಾಗುತ್ತಿದೆ. ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ಇಸ್ಕಾನ್ ದೇವಸ್ಥಾನದಿಂದ ಕಳಿಸಿರುವ ಈ ಪ್ರತ್ಯಕ್ಷ ವರದಿಯನ್ನು ಆಲಿಸಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow Us
Web contact

TV9 Kannada

Read More