ಕಾರವಾರಕ್ಕೆ ವಂದೇ ಭಾರತ್​ ರೈಲು; ಮೊಳಗಿದ ಮೋದಿ ಘೋಷ; ಇಲ್ಲಿದೆ ವಿಡಿಯೋ

Edited By: ಕಿರಣ್ ಹನುಮಂತ್​ ಮಾದಾರ್

Updated on: Dec 30, 2023 | 5:20 PM

ಕಾರವಾರ(Karwar)ಕ್ಕೆ ವಂದೇ ಭಾರತ್​ ರೈಲು ಬಂದಿದೆ. ಬಹುದಿನಗಳ ಕನಸು ನನಸಾದ ಬೆನ್ನಲ್ಲೇ ಕಾರವಾರ ನಗರವಾಸಿಗಳು ಅದ್ದೂರಿಯಾಗಿ ಸ್ವಾಗತಿಸಿದ್ದು, ಮೋದಿ, ಮೋದಿ ಎಂದು ಘೋಷಣೆ ಕೂಗಿದ್ದಾರೆ. ಇತ್ತ ಬಿಜೆಪಿ ಕಾರ್ಯಕರ್ತರು ಢೋಲು ಭಾರಿಸುತ್ತ ಭಗವಾನ್​ ಧ್ವಜ ಹಿಡಿದು ಸ್ವಾಗತಿಸಿದರು.

ಉತ್ತರ ಕನ್ನಡ, ಡಿ.30: ಮಂಗಳೂರು-ಗೋವಾ ವಂದೇ ಭಾರತ್ ರೈಲಿಗೆ (Mangaluru Goa Vande Bharat express Train)  ಚಾಲನೆ ಸಿಕ್ಕಿದ್ದು, ಅದರಂತೆ ಇಂದು(ಡಿ.30) ಕಾರವಾರ(Karwar)ಕ್ಕೆ ವಂದೇ ಭಾರತ್​ ರೈಲು ಬಂದಿದೆ. ಬಹುದಿನಗಳ ಕನಸು ನನಸಾದ ಬೆನ್ನಲ್ಲೇ ಕಾರವಾರ ನಗರವಾಸಿಗಳು ಅದ್ದೂರಿಯಾಗಿ ಸ್ವಾಗತಿಸಿದ್ದು, ಮೋದಿ, ಮೋದಿ ಎಂದು ಘೋಷಣೆ ಕೂಗಿದ್ದಾರೆ. ಇತ್ತ ಬಿಜೆಪಿ ಕಾರ್ಯಕರ್ತರು ಢೋಲು ಭಾರಿಸುತ್ತ ಭಗವಾನ್​ ಧ್ವಜ ಹಿಡಿದು ಸ್ವಾಗತಿಸಿದರು. ವಂದೇ ಭಾರತ್​ ರೈಲಿಗೆ ಕೈ ಶಾಸಕ ಸತೀಶ್ ಸೈಲ್ ಹಸಿರು ನಿಶಾನೆ ತೋರಿಸಿದರೆ, ಮಾಜಿ ಶಾಸಕಿ ರೂಪಾಲಿ ನಾಯ್ಕ್  ಪುಷ್ಪವೃಷ್ಟಿ ಮಾಡುವುದರ ಮೂಲಕ ರೈಲನ್ನು ಸ್ವಾಗತಿಸಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow Us
Suraj Mahaveer Utture

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More