ವರಮಹಾಲಕ್ಷ್ಮಿ ಹಬ್ಬ: ಕೆಆರ್ ಮಾರ್ಕೆಟ್​ನಲ್ಲಿ ಹೂವಿನ ವ್ಯಾಪಾರಿಗಳ ಜೊತೆ ಗ್ರಾಹಕ ಮಹಿಳೆಯರೂ ಖುಷ್!

Updated on: Aug 08, 2025 | 11:44 AM

ಖರೀದಿಗೆ ಅಂತ ಬಂದವರು ತಮ್ಮ ಅನುಭವವನ್ನು ಹಾಗೆ ಹೇಳಿಕೊಂಡರೆ ವ್ಯಾಪಾರಿಗಳ ಭಾರೀ ಸಂತಸದಲ್ಲಿದ್ದಾರೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ವ್ಯಾಪಾರಿ ಅನ್ನಪೂರ್ಣ ರಾತ್ರಿ 10 ಗಂಟೆಗೆ ಬಂದು ಇದುವರೆಗೆ ಒಂದು ಲಕ್ಷ ರೂ. ಮೌಲ್ಯದ ಹೂ ಮಾರಿದ್ದಾರೆ. ಪೀಣ್ಯ 2 ನೇ ಹಂತದಿಂದ ಬರುವ ಇನ್ನೊಬ್ಬ ಮಹಿಳಾ ವ್ಯಾಪಾರಿ ನಿನ್ನೆ ಸುರಿದ ಮಳೆಯಿಂದ ಹೂವು ಸ್ವಲ್ಪ ಹಾಳಾಗಿದೆ, ಹಾಕಿದ ಬಂಡವಾಳ ಬಂದಿದೆ ಎನ್ನುತ್ತಾರೆ. ಈ ವ್ಯಾಪಾರಿಗಳೆಲ್ಲ ಮುಂದಿನ ವಾರ ಹಬ್ಬ ಮಾಡುತ್ತಾರಂತೆ.

ಬೆಂಗಳೂರು, ಆಗಸ್ಟ್ 8: ಇವತ್ತು ವರಮಹಾಲಕ್ಷ್ಮಿ ಹಬ್ಬ. ನಗರದ ಕೆಆರ್ ಮಾರ್ಕೆಟ್​ನಲ್ಲಿ (KR Market) ಹೂವು, ಹಣ್ಣು ಮತ್ತು ಬೇರೆ ಪೂಜಾ ಸಾಮಗ್ರಿಗಳ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಹೂಮಾರುವವರು ನಿನ್ನೆ ರಾತ್ರಿ 10 ಗಂಟೆಯಿಂದಲೇ ಮಾರ್ಕೆಟ್​ಗೆ ಬಂದು ವ್ಯಾಪಾರ ಆರಂಭಿಸಿದ್ದಾರೆ. ಗೃಹಿಣಿಯರು ಸುವಾಸನೆಭರಿತ ಹೂವುಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಮಲ್ಲಿಗೆ ಎಲ್ಲರಿಗೂ ಸಿಗುತ್ತಿದೆ, ಆದರೆ ಸಂಪಿಗೆ, ಜಾಜಿ, ಕನಕಾಂಬರ ಮೊದಲಾದ ಹೂಗಳು ಸಿಗುತ್ತಿಲ್ಲ ಎಂದು ಕಬ್ಬನ್ ಪೇಟೆಯ ಸೌಮ್ಯ ಹೇಳುತ್ತಾರೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಎಲ್ಲ ಅಗತ್ಯ ವಸ್ತುಗಳ ಬೆಲೆ ಜಾಸ್ತಿಯೆಂದು ಬಹಳಷ್ಟು ಜನ ಹೇಳುತ್ತಿದ್ದಾರೆ. ಆದರೆ ಹಬ್ಬದ ಸಂತೆ ಮಾಡಲು ಬಂದಿರುವ ಡಾ ಅಶ್ವಥಾ ಅವರಿಗೆ ಬೆಲೆಗಳು ಹೆಚ್ಚು ಅನಿಸುತ್ತಿಲ್ಲ. ಹೊರಗಡೆ ಸಿಗುವ ವಸ್ತುಗಳ ಬೆಲೆಗೆ ಕಂಪೇರ್ ಮಾಡಿದರೆ ಕೆಅರ್ ಮಾರ್ಕೆಟ್​ನಲ್ಲಿ ಕಡಿಮೆ ಎನ್ನುತ್ತಾರೆ.

ಇದನ್ನೂ ಓದಿ:  Varamahalakshmi Festival 2025: ವರಮಹಾಲಕ್ಷ್ಮಿ ಹಬ್ಬದ ದಿನ ಮುತ್ತೈದೆಯರಿಗೆ ಹಸಿರು ಬಣ್ಣದ ಬಳೆಗಳನ್ನೇ ಕೊಡುವುದೇಕೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More