ಕಾರವಾರ, ಸೆಪ್ಟೆಂಬರ್ 22: ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿ (Shivaji statue) ಗೆ ರಾಡಿನಿಂದ ಕುಡುಕ ಹೊಡೆದಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಸೋಮಾನಿ ವೃತ್ತದಲ್ಲಿ ನಡೆದಿದೆ. ದಾಂಡೇಲಿ ಟೌನ್ ಶಿಪ್ನ ಪ್ಯಾರಸಿಂಗ್ ರಜಪೂತ್ ಬಂಧಿತ ಮದ್ಯ ವ್ಯಸನಿ. ಕುಡಿದ ಅಮಲಿನಲ್ಲಿ ಶಿವಾಜಿ ಮೂರ್ತಿಯ ಕಾಲಿಗೆ ಹಾಕಿದ್ದ ಕಡಗ ಬಂಗಾರದ್ದು ಎಂದು ಕಬ್ಬಿಣದ ಸಲಾಕೆ ಹಿಡಿದು ಕೀಳಲು ಹೋಗಿದ್ದ. ಸದ್ಯ ಮದ್ಯ ವ್ಯಸನಿಯನ್ನ ಹಿಡಿದು ಸ್ಥಳೀಯರು ಪೋಲಿಸರಿಗೆ ಒಪ್ಪಿಸಿದ್ದಾರೆ. ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published On - 8:14 pm, Fri, 22 September 23