AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijayapura Siddeshwara Swamiji: ತಮ್ಮ ಎದುರು ಹಾಡಿದ್ದ ಬಾಲಕನ ಹಾಡಿಗೆ ಮುಗುಳ್ನಕ್ಕಿದ್ದ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿ

Vijayapura Siddeshwara Swamiji: ತಮ್ಮ ಎದುರು ಹಾಡಿದ್ದ ಬಾಲಕನ ಹಾಡಿಗೆ ಮುಗುಳ್ನಕ್ಕಿದ್ದ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿ

TV9 Web
| Updated By: Rakesh Nayak Manchi|

Updated on:Jan 03, 2023 | 9:35 AM

Share

ಅಪಾರ ಭಕ್ತವೃಂದವನ್ನ ಹೊಂದಿದ್ದ ಸಿದ್ದೇಶ್ವರ ಶ್ರೀಗಳು ಸರಳ ತಮ್ಮ ಸರಳ ಜೀವನ ಮತ್ತು ಆಚಾರ ವಿಚಾರಗಳಿಂದ ಜನಸಾಮನ್ಯರಾದಿಯಾಗಿ ಕೋಟ್ಯಂತರ ಭಕ್ತರ ಮನಗೆದ್ದಿದ್ದರು.

ವಿಜಯಪುರ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ (Siddeshwara Swamiji) ಎದುರು ಬಾಲಕನೊಬ್ಬ ಹಾಡು ಹಾಡಿದ್ದಾನೆ. ಕೈಕಟ್ಟಿ ಬಾಲಕ ಹಾಡುವ ಶೈಲಿಯನ್ನು ಆನಂದಿಸುತ್ತಿದ್ದ ಸ್ವಾಮೀಜಿ ಮುಗುಳ್ನಕ್ಕಿದ್ದಾರೆ. ಇದರ ವಿಡಿಯೋ ಇಲ್ಲಿದೆ ನೋಡಿ. ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಸೋಮವಾರ ಅಂದರೆ ಡಿಸೆಂಬರ್‌ 2ರಂದು ಸಂಜೆ ಶ್ರೀಗಳು ಇಹಲೋಕ ತ್ಯಜಿಸಿದ್ದಾರೆ. ಅಪಾರ ಭಕ್ತವೃಂದವನ್ನ ಹೊಂದಿದ್ದ ಸಿದ್ದೇಶ್ವರ ಶ್ರೀಗಳು ಸರಳ ತಮ್ಮ ಸರಳ ಜೀವನ ಮತ್ತು ಆಚಾರ ವಿಚಾರಗಳಿಂದ ಜನಸಾಮನ್ಯರಾದಿಯಾಗಿ ಕೋಟ್ಯಂತರ ಭಕ್ತರ ಮನಗೆದ್ದಿದ್ದರು. ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀಗಳು ಈಗ ಅಪಾರ ಭಕ್ತರನ್ನ ಅಗಲಿದ್ದಾರೆ. ಶ್ರೀಗಳು ಲಿಂಗೈಕ್ಯರಾದ ನಂತರ ಅವರ ಅಂತಿಮ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ.

ಸಿದ್ದೇಶ್ವರ ಶ್ರೀಗಳಿಗೆ ಶಿವಭಕ್ತಿಗೀತೆಗಳೆಂದರೆ ಅಚ್ಚುಮೆಚ್ಚು. ನಿಜಗುಣಾನಂದ ಸ್ವಾಮೀಜಿ ಹಾಡುಗಳಂದರೆ ಬಲುಪ್ರೀತಿ. ವಾರದ ಹಿಂದಷ್ಟೇ ಸಿದ್ದೇಶ್ವರ ಶ್ರೀಗಳಿಗಾಗಿ ಹಾಡು ಹಾಡಿ ಸಿದ್ದೇಶ್ವರ ಶ್ರೀಗೆ ಗೌರವ ಸಲ್ಲಿಸಿದ್ದರು. ಹಾಸಿಗೆ ಹಿಡಿದಿದ್ದ ಸಿದ್ದೇಶ್ವರ ಶ್ರೀ ಮುಂದೆ ನಿಜಗುಣಾನಂದ ಸ್ವಾಮೀಜಿಯವರು ಮೂರು ಭಕ್ತಿ ಗೀತೆಗಳನ್ನು ಹಾಡಿದ್ದರು. ನಿಜಗುಣಾನಂದರ ಗಾಯನಕ್ಕೆ ಶ್ರೀಗಳು ತಲೆದೂಗಿದ್ದರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Jan 03, 2023 09:29 AM