Karnataka Assembly Polls: ವಿಜಯೇಂದ್ರ ನಾಮಪತ್ರ ಸಲ್ಲಿಸಲು ಆಗಮಿಸಿದ್ದು ಯಡಿಯೂರಪ್ಪ ರಾಜಕೀಯ ಬದುಕಿನ ಆರಂಭದಲ್ಲಿ ಬಳಸುತ್ತಿದ್ದ ಹಳೇ ಕಾರಲ್ಲಿ!

ಸಿಕೆಆರ್ 45 ಕಾರಿನೊಂದಿಗೆ ಯಡಿಯೂರಪ್ಪನವರಿಗೆ ಅವಿನಾಭಾವ ಸಂಬಂಧವಿದೆ ಎಂದು ವಿಜಯೇಂದ್ರ ಹೇಳಿದರು.

Karnataka Assembly Polls: ವಿಜಯೇಂದ್ರ ನಾಮಪತ್ರ ಸಲ್ಲಿಸಲು ಆಗಮಿಸಿದ್ದು ಯಡಿಯೂರಪ್ಪ ರಾಜಕೀಯ ಬದುಕಿನ ಆರಂಭದಲ್ಲಿ ಬಳಸುತ್ತಿದ್ದ ಹಳೇ ಕಾರಲ್ಲಿ!
|

Updated on: Apr 19, 2023 | 3:54 PM

ಶಿವಮೊಗ್ಗ: ಬಿಜೆಪಿ ಕರ್ನಾಟಕ ಘಟಕದ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಒಂದು ಅದ್ದೂರಿ ರೋಡ್ ಶೋ ಬಳಿಕ ಶಿಕಾರಿಪುರದಲ್ಲಿ ನಾಮಪತ್ರ ಸಲ್ಲಿಸಿದರು. ತಮ್ಮ ತಂದೆ ಮತ್ತು ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಪ್ರತಿನಿಧಿಸಿದ್ದ ಕ್ಷೇತ್ರದಿಂದ ತಮಗೆ ಸ್ಪರ್ಧಿಸುವ ಅವಕಾಶವನ್ನು ಪಕ್ಷದ ವರಿಷ್ಠರು ನೀಡಿದ್ದು ತಮ್ಮ ಸೌಭಾಗ್ಯ ಎಂದು ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿಜಯೇಂದ್ರ ಹೇಳಿದರು. ನಾಮಪತ್ರ ಸಲ್ಲಿಸಲು ಅವರು ತಮ್ಮ ತಂದೆ ಹಾಗೂ ಇತರ ಮುಖಂಡರೊಂದಿಗೆ ಹಳೆಯ ಅಂಬ್ಯಾಸಿಡರ್ ಕಾರಲ್ಲಿ (ambassador car) ಆಗಮಿಸಿದರು. ಕಾರಿನ ಬಗ್ಗೆ ಭಾವುಕರಾಗಿ ಮಾತಾಡಿದ ಅವರು, ಅದು ಯಡಿಯೂರಪ್ಪನವರಿಗೆ ರಾಜಕೀಯವಾಗಿ ಬೆಳೆಯುವಾಗ, ಒಂದು ದೊಡ್ಡ ಶಕ್ತಿಯಾಗಿ ಗುರುತಿಸಿಕೊಳ್ಳುವಾಗ ಅದೇ ಕಾರನ್ನು ಬಳಸುತ್ತಿದ್ದರು. ಅದರಲ್ಲಿ ಅವರು ಇಡೀ ರಾಜ್ಯ ಸುತ್ತಾಡಿದ್ದಾರೆ, ಸಿಕೆಆರ್ 45 ಕಾರಿನೊಂದಿಗೆ ಅವರಿಗೆ ಅವಿನಾಭಾವ ಸಂಬಂಧವಿದೆ ಎಂದು ವಿಜಯೇಂದ್ರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us