ಬಿಗ್​ ಬಾಸ್​ ಮನೆಯ ವಸ್ತುಗಳು ಚೆಲ್ಲಾಪಿಲ್ಲಿ; ಏನೂ ಮಾಡಲಾಗದೇ ಅಸಹಾಯಕ ಸ್ಥಿತಿಗೆ ತಲುಪಿದ ವಿನಯ್​

|

Updated on: Dec 05, 2023 | 3:09 PM

ಮೊದಲೆಲ್ಲ ಬೇರೆಯವರ ತಪ್ಪು ಕಂಡಾಗ ಕೂಗಾಡುತ್ತಿದ್ದ ವಿನಯ್​ ಗೌಡ ಅವರು ಈಗ ಸುಮ್ಮನಾಗಿದ್ದಾರೆ. ಇಡೀ ಬಿಗ್​ ಬಾಸ್​ ಮನೆಯ ವಸ್ತುಗಳು ಚೆಲ್ಲಾಪಿಲ್ಲಿ ಆಗಿವೆ. ಹಾಗಿದ್ದರೂ ಕೂಡ ವಿನಯ್​ ಗೌಡ ಕೈ ಕಟ್ಟಿ ಸುಮ್ಮನೆ ನೋಡಬೇಕಾದ ಪರಿಸ್ಥಿತಿ ಬಂದಿದೆ. ಅದಕ್ಕೆ ಸಾಕ್ಷಿ ಒದಗಿಸುವ ಪ್ರೋಮೋ ಇಲ್ಲಿದೆ..

‘ಬಿಗ್ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ಶೋನಲ್ಲಿ ಹೊಸ ಟಾಸ್ಕ್​ ನೀಡಲಾಗಿದೆ. ರಾಕ್ಷಸರು ಮತ್ತು ಗಂಧರ್ವರು ಎಂದು ಎರಡು ಗುಂಪು ಮಾಡಲಾಗಿದೆ. ರಾಕ್ಷಸರು ಮಾಡಿದ ಎಲ್ಲ ಕೆಡುಕುಗಳನ್ನು ಗಂಧರ್ವರು ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ವಿನಯ್​ ಗೌಡ (Vinay Gowda) ಅವರು ಗಂಧರ್ವರ ಟೀಮ್​ನಲ್ಲಿ ಇದ್ದಾರೆ. ರಾಕ್ಷಸರ ಟೀಮ್​ನಲ್ಲಿ ಇರುವ ಕಾರ್ತಿಕ್​ ಮಹೇಶ್ (Karthik Mahesh)​, ಸಂಗೀತಾ ಶೃಂಗೇರಿ ಮುಂತಾದವರು ಮಾಡಿದ ಕಿರಿಕ್​ಗಳನ್ನು ವಿನಯ್​ ಗೌಡ ಮುಂತಾದವರು ಸಹಿಸಿಕೊಳ್ಳಬೇಕಾಗಿದೆ. ಏನೂ ಮಾಡಲಾಗದ ಅಸಹಾಯಕ ಸ್ಥಿತಿಗೆ ಅವರು ತಲುಪಿದ್ದಾರೆ. ಈ ಸಂಚಿಕೆ ಡಿಸೆಂಬರ್​ 5ರಂದು ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಬಿತ್ತರ ಆಗಲಿದೆ. ಜಿಯೋ ಸಿನಿಮಾದಲ್ಲಿ ದಿನದ 24 ಗಂಟೆಯೂ ಬಿಗ್ ಬಾಸ್ ಲೈವ್​ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on