ಅಪ್ಪು ಹೋದಮೇಲೆ ಏರಿಯಾನಲ್ಲಿ ಗಣೇಶ ಇಡುತ್ತಿಲ್ಲ: ವಿನಯ್ ರಾಜ್ಕುಮಾರ್
Ganesha Festival: ಸದಾಶಿವನಗರದಲ್ಲಿ ಏರಿಯಾ ಹುಡುಗರು ಗಣೇಶ ಇಡುತ್ತಿದ್ದರಂತೆ. ಆ ಗಣೇಶನಿಗೆ ವಿಶೇಷ ಪೂಜೆ ಮಾಡಿಸಿ ವಿಸರ್ಜನೆ ವೇಳೆ ಪುನೀತ್ ರಾಜ್ಕುಮಾರ್ ಅವರು ಡ್ಯಾನ್ಸ್ ಮಾಡುತ್ತಿದ್ದರಂತೆ. ಆದರೆ ಅಪ್ಪು ಕಾಲವಾದ ಬಳಿಕ ಏರಿಯಾನಲ್ಲಿ ಗಣೇಶ ಇಡುವುದು ನಿಲ್ಲಿಸಿದ್ದಾರಂತೆ. ಈ ಬಗ್ಗೆ ನಟ ವಿನಯ್ ರಾಜ್ಕುಮಾರ್ ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ. ಇಲ್ಲಿದೆ ವಿಡಿಯೋ...
ವಿನಯ್ ರಾಜ್ಕುಮಾರ್ (Vinay Rajkumar) ನಟನೆಯ ‘ಅಂದೊಂದಿತ್ತು ಕಾಲ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇದೀಗ ಇಡೀ ಚಿತ್ರತಂಡ ಗೌರಿ-ಗಣೇಶ ಹಬ್ಬ ಆಚರಣೆ ಮಾಡಿದೆ. ಈ ಸಂದರ್ಭದಲ್ಲಿ ಟಿವಿ9 ಜೊತೆಗೆ ಮಾತನಾಡಿದ ವಿನಯ್ ರಾಜ್ಕುಮಾರ್, ತಮ್ಮ ಕುಟುಂಬಕ್ಕೆ ಗಣೇಶ ಹಬ್ಬದೊಟ್ಟಿಗೆ ಇರುವ ವಿಶೇಷ ನಂಟಿನ ಬಗ್ಗೆ ಮಾತನಾಡಿದರು. ಸದಾಶಿವನಗರದಲ್ಲಿ ಏರಿಯಾ ಹುಡುಗರು ಗಣೇಶ ಇಡುತ್ತಿದ್ದರಂತೆ. ಆ ಗಣೇಶನಿಗೆ ವಿಶೇಷ ಪೂಜೆ ಮಾಡಿಸಿ ವಿಸರ್ಜನೆ ವೇಳೆ ಪುನೀತ್ ರಾಜ್ಕುಮಾರ್ ಅವರು ಡ್ಯಾನ್ಸ್ ಮಾಡುತ್ತಿದ್ದರಂತೆ. ಆದರೆ ಅಪ್ಪು ಕಾಲವಾದ ಬಳಿಕ ಏರಿಯಾನಲ್ಲಿ ಗಣೇಶ ಇಡುವುದು ನಿಲ್ಲಿಸಿದ್ದಾರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
