AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾವು ಅಂಥ ಕೆಲಸ ಮಾಡುವವರಲ್ಲ’; ರೇಣುಕಾ ಸ್ವಾಮಿ ಕುಟುಂಬ ಭೇಟಿ ಬಳಿಕ ವಿನೋದ್ ರಾಜ್ ಸ್ಪಷ್ಟನೆ

‘ನಾವು ಅಂಥ ಕೆಲಸ ಮಾಡುವವರಲ್ಲ’; ರೇಣುಕಾ ಸ್ವಾಮಿ ಕುಟುಂಬ ಭೇಟಿ ಬಳಿಕ ವಿನೋದ್ ರಾಜ್ ಸ್ಪಷ್ಟನೆ

ರಾಜೇಶ್ ದುಗ್ಗುಮನೆ
|

Updated on: Jul 29, 2024 | 10:37 AM

Share

ನಟ ವಿನೋದ್ ರಾಜ್ ಅವರು ದರ್ಶನ್ ಅವರನ್ನು ಜೈಲಲ್ಲಿ ಭೇಟಿ ಆಗಿದ್ದರು. ಆ ಬಳಿಕ ರೇಣುಕಾ ಸ್ವಾಮಿ ಕುಟುಂಬದವರನ್ನೂ ಮೀಟ್ ಮಾಡಿದ್ದರು. ವಿನೋದ್ ರಾಜ್ ರಾಜಿ ಸಂಧಾನ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ವಿನೋದ್ ರಾಜ್ ಅವರ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ.

ವಿನೋದ್ ರಾಜ್ ಅವರು ಇತ್ತೀಚೆಗೆ ದರ್ಶನ್ ಅವರನ್ನು ಜೈಲಲ್ಲಿ ಭೇಟಿ ಆಗಿದ್ದರು. ಆ ಬಳಿಕ ರೇಣುಕಾ ಸ್ವಾಮಿ ಕುಟುಂಬದವರನ್ನೂ ಮೀಟ್ ಮಾಡಿದ್ದರು. ವಿನೋದ್ ರಾಜ್ ರಾಜಿ ಸಂಧಾನ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ವಿನೋದ್ ರಾಜ್ ಅವರ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ. ‘ಇತ್ತೀಚೆಗೆ ಜೈಲಿನಲ್ಲಿ ನಾನು ದರ್ಶನ್ ಅವರನ್ನು ಭೇಟಿ ಮಾಡಿದ್ದೆ. ಇದಾದ ಎರಡು ದಿನಗಳ ಬಳಿಕ ರೇಣುಕಾ ಸ್ವಾಮಿ ಅವರ ಕುಟುಂಬವನ್ನು ಭೇಟಿ ಮಾಡಿದೆ. ನಾನು ರಾಜಿ ಸಂಧಾನ ಮಾಡೋಕೆ ಹೋಗಿದ್ದೇನೆ ಎಂದು ಕೆಲವು ಕಡೆಗಳಲ್ಲಿ ವರದಿ ಆಗಿದೆ. ದರ್ಶನ್ ಅವರನ್ನು ಓರ್ವ ಕಲಾವಿದ ಎಂಬ ಕಾರಣಕ್ಕೆ ಭೇಟಿ ಮಾಡಿದೆ. ಅಲ್ಲಿ ಏಕೆ ಹೋದೆ ಎಂದರೆ ರೇಣುಕಾ ಸ್ವಾಮಿ ಪತ್ನಿ ಗರ್ಭಿಣಿ. ಹುಟ್ಟುವ ಮಗುವಿಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಹೋದೆ. ನಮ್ಮಿಂದಾದ ಸಣ್ಣ ಕಾಣಿಕೆ ನೀಡಿದ್ದೇವೆ. ರಾಜಿ ಸಂಧಾನದ ರೀತಿಯ ಕೆಲಸವನ್ನು ನಾವು ಮಾಡುವಂಥವರಲ್ಲ’ ಎಂದಿದ್ದಾರೆ ವಿನೋದ್ ರಾಜ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More