Video: ನೇಪಾಳದಲ್ಲಿ ಭಾರಿ ಮಳೆ, ತರಗತಿಗೆ ನುಗ್ಗಿದ ನೀರು, ವಿದ್ಯಾರ್ಥಿಗಳನ್ನು ರಕ್ಷಿಸಲು ಡೆಸ್ಕ್​ ಅಡ್ಡ ಹಿಡಿದು ನಿಂತ ಶಿಕ್ಷಕಿ

Updated on: May 27, 2026 | 7:44 AM

ನೇಪಾಳದ ಶ್ರೀ ರಾಮಶರಣ್ ಬೇಸಿಕ್ ಶಾಲೆಯಲ್ಲಿ ಭಾರಿ ಮಳೆ ಮತ್ತು ಬಿರುಗಾಳಿ ತಲ್ಲಣ ಸೃಷ್ಟಿಸಿತ್ತು. ಹಠಾತ್ ಬಂದ ಬಿರುಗಾಳಿಗೆ ಶಾಲೆಯ ತರಗತಿ ಕೊಠಡಿಯ ಮೇಲ್ಛಾವಣಿ ಕಿತ್ತುಹೋಗಿ, ಒಳಗಿದ್ದ ಪುಟ್ಟ ವಿದ್ಯಾರ್ಥಿಗಳ ಮೇಲೆ ಮಳೆ ನೀರು ನೇರವಾಗಿ ಸೋರಲು ಆರಂಭಿಸಿತ್ತು. ಇದನ್ನು ಕಂಡ ಶಂಭುವ್ ಬಿ.ಕೆ. ಅವರು ತಕ್ಷಣವೇ ಕಾರ್ಯಪ್ರವೃತ್ತರಾದರು. ವಿದ್ಯಾರ್ಥಿಗಳು ಮಳೆಯಲ್ಲಿ ನೆನೆದು ಅನಾರೋಗ್ಯಕ್ಕೆ ಒಳಗಾಗಬಾರದು ಎಂದು ನಿರ್ಧರಿಸಿದ ಅವರು, ತಮಗಾಗುತ್ತಿದ್ದ ತೊಂದರೆಯನ್ನು ಲೆಕ್ಕಿಸದೆ ಮಳೆಯಲ್ಲಿಯೇ ಭಾರವಾದ ಮರದ ಡೆಸ್ಕ್‌ಅನ್ನು ತಮ್ಮ ಕೈಗಳಿಂದ ಮೇಲಕ್ಕೆತ್ತಿ ಹಿಡಿದು, ಮಳೆಯ ನೀರು ಮಕ್ಕಳ ಮೇಲೆ ಬೀಳದಂತೆ ಭದ್ರವಾದ ಛತ್ರಿಯಂತೆ ರಕ್ಷಣೆ ನೀಡಿದರು.

ಕಠ್ಮಂಡು, ಮೇ 27: ನೇಪಾಳದ ಶ್ರೀ ರಾಮಶರಣ್ ಬೇಸಿಕ್ ಶಾಲೆಯಲ್ಲಿ ಭಾರಿ ಮಳೆ ಮತ್ತು ಬಿರುಗಾಳಿ ತಲ್ಲಣ ಸೃಷ್ಟಿಸಿತ್ತು. ಹಠಾತ್ ಬಂದ ಬಿರುಗಾಳಿಗೆ ಶಾಲೆಯ ತರಗತಿ ಕೊಠಡಿಯ ಮೇಲ್ಛಾವಣಿ ಕಿತ್ತುಹೋಗಿ, ಒಳಗಿದ್ದ ಪುಟ್ಟ ವಿದ್ಯಾರ್ಥಿಗಳ ಮೇಲೆ ಮಳೆ ನೀರು ನೇರವಾಗಿ ಸೋರಲು ಆರಂಭಿಸಿತ್ತು.

ಇದನ್ನು ಕಂಡ ಶಂಭುವ್ ಬಿ.ಕೆ. ಅವರು ತಕ್ಷಣವೇ ಕಾರ್ಯಪ್ರವೃತ್ತರಾದರು. ವಿದ್ಯಾರ್ಥಿಗಳು ಮಳೆಯಲ್ಲಿ ನೆನೆದು ಅನಾರೋಗ್ಯಕ್ಕೆ ಒಳಗಾಗಬಾರದು ಎಂದು ನಿರ್ಧರಿಸಿದ ಅವರು, ತಮಗಾಗುತ್ತಿದ್ದ ತೊಂದರೆಯನ್ನು ಲೆಕ್ಕಿಸದೆ ಮಳೆಯಲ್ಲಿಯೇ ಭಾರವಾದ ಮರದ ಡೆಸ್ಕ್‌ಅನ್ನು ತಮ್ಮ ಕೈಗಳಿಂದ ಮೇಲಕ್ಕೆತ್ತಿ ಹಿಡಿದು, ಮಳೆಯ ನೀರು ಮಕ್ಕಳ ಮೇಲೆ ಬೀಳದಂತೆ ಭದ್ರವಾದ ಛತ್ರಿಯಂತೆ ರಕ್ಷಣೆ ನೀಡಿದರು.

ತಮ್ಮ ಪ್ರಾಣ ಮತ್ತು ಆರೋಗ್ಯವನ್ನು ಪಣಕ್ಕಿಟ್ಟು, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಶ್ರಮಿಸಿದ ಈ ಶಿಕ್ಷಕಿಯ ಅದ್ಭುತ ಕರ್ತವ್ಯ ನಿಷ್ಠೆ ಹಾಗೂ ವಾತ್ಸಲ್ಯದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಜಗತ್ತಿನಾದ್ಯಂತ ಲಕ್ಷಾಂತರ ಜನರ ಹೃದಯ ಗೆದ್ದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More