AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ಕ್ಷೇತ್ರಗಳಿಂದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನಾಮಪತ್ರ ಸಲ್ಲಿಕೆ ವಿಡಿಯೋ ಇಲ್ಲಿದೆ ನೋಡಿ

ಎರಡು ಕ್ಷೇತ್ರಗಳಿಂದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನಾಮಪತ್ರ ಸಲ್ಲಿಕೆ ವಿಡಿಯೋ ಇಲ್ಲಿದೆ ನೋಡಿ

ಸಾಧು ಶ್ರೀನಾಥ್​
|

Updated on:Nov 09, 2023 | 3:15 PM

K Chandrashekar Rao Nomination: ಇದಾದಮೇಲೆ, CM ಕೆಸಿಆರ್ ಗಜ್ವೆಲ್‌ನಿಂದ ನೇರವಾಗಿ ಕಾಮರೆಡ್ಡಿಗೆ ತೆರಳಿದರು. ಅಲ್ಲಿನ ಆರ್‌ಡಿಒ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಬಳಿಕ.. ಡಿಗ್ರಿ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಸಾರ್ವಜನಿಕ ಆಶೀರ್ವಾದ ಸಮಾವೇಶದಲ್ಲಿ ಕೆಸಿಆರ್ ಭಾಷಣ ಮಾಡಿದರು.

ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನಾಮಪತ್ರ ಸಲ್ಲಿಕೆ: ಭಾರತ್ ರಾಷ್ಟ್ರ ಸಮಿತಿ ಮುಖಂಡ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಗಜ್ವೆಲ್ ಮತ್ತು ಕಾಮರೆಡ್ಡಿಯಿಂದ ಸ್ಪರ್ಧಿಸುತ್ತಿರುವುದಾಗಿ ಈ ಹಿಂದೆಯೇ ಘೋಷಿಸಿದ್ದರು. ಹಾಗಾಗಿ ಗಜ್ವೇಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸಿಎಂ ಕೆಸಿಆರ್ ಗುರುವಾರ ನಾಮಪತ್ರ ಸಲ್ಲಿಸಿದರು. ಅಲ್ಲಿನ ಆರ್‌ಡಿಒ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಲಾಯಿತು. ಮೊದಲು ಹೈದರಾಬಾದ್‌ನಿಂದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಗಜ್ವೆಲ್ ತಲುಪಿದರು. ಅವರನ್ನು ಪಿಂಕ್​​ ಗುಲಾಬಿ ಹೂಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಂತರ ಕೆಸಿಆರ್ ಅವರು ರ್ಯಾಲಿಯಲ್ಲಿ ಆರ್‌ಡಿಒ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ಇದಾದಮೇಲೆ, CM ಕೆಸಿಆರ್ ಗಜ್ವೆಲ್‌ನಿಂದ ನೇರವಾಗಿ ಕಾಮರೆಡ್ಡಿಗೆ ತೆರಳಿದರು. ಅಲ್ಲಿನ ಆರ್‌ಡಿಒ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಬಳಿಕ.. ಡಿಗ್ರಿ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಸಾರ್ವಜನಿಕ ಆಶೀರ್ವಾದ ಸಮಾವೇಶದಲ್ಲಿ ಕೆಸಿಆರ್ ಭಾಷಣ ಮಾಡಲಿದ್ದಾರೆ. ಕೆಸಿಆರ್ ಅವರೇ ಕಾಮರೆಡ್ಡಿ ವಿಧಾನಸಭಾ ಸ್ಥಾನದಿಂದ ಕಣಕ್ಕೆ ಇಳಿಯುತ್ತಿರುವುದರಿಂದ.. ಗುಲಾಬಿ ಬಾಸ್ ಆಗಮನಕ್ಕೆ ಎಲ್ಲರಲ್ಲೂ ಕುತೂಹಲ ಮೂಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 09, 2023 03:07 PM