
[lazy-load-videos-and-sticky-control id=”jXPxD8uPPeI”]
ಮೈಸೂರು: ಕಬಿನಿ ಡ್ಯಾಂನಿಂದ ತಡರಾತ್ರಿ ಅಪಾರ ಪ್ರಮಾಣದ ನೀರನ್ನು ಬಿಡುಗಡೆ ಮಾಡಿರುವುದರಿಂದ ನಂಜನಗೂಡಿನಲ್ಲಿ 50ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.
ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದ ಹಿಂಭಾಗದಲ್ಲಿರುವ ತೋಪಿನ ಬೀದಿ, ಕುರುಬಗೆರೆ ಹಾಗೂ ಹಳ್ಳದಕೇರಿ ಸಂಪೂರ್ಣ ಜಲಾವೃತಗೊಂಡಿವೆ. ಇದರಿಂದ ಆ ಭಾಗದ 50ಕ್ಕೂ ಹೆಚ್ಚು ಮನೆಗಳು ನೀರಿನಿಂದ ತುಂಬಿಹೋಗಿದ್ದು, ಹಾನಿಗೊಳಗಾದ ಮನೆಯ ನಿವಾಸಿಗಳನ್ನು ತಾಲ್ಲೂಕು ಆಡಳಿತ ಮಂಡಳಿ ನಿರಾಶ್ರಿತರ ಕೇಂದ್ರಕ್ಕೆ ಶಿಫ್ಟ್ ಮಾಡಿದೆ.
Published On - 4:02 pm, Sat, 8 August 20