AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುನಿಸಿಕೊಂಡಿರುವ ಎಲ್ಲ ನಾಯಕರ ಮನವೊಲಿಸುವ ಪ್ರಯತ್ನ ಜಾರಿಯಲ್ಲಿದೆ: ಆರ್ ಅಶೋಕ, ನಿಯೋಜಿತ ವಿರೋಧ ಪಕ್ಷ ನಾಯಕ

ಮುನಿಸಿಕೊಂಡಿರುವ ಎಲ್ಲ ನಾಯಕರ ಮನವೊಲಿಸುವ ಪ್ರಯತ್ನ ಜಾರಿಯಲ್ಲಿದೆ: ಆರ್ ಅಶೋಕ, ನಿಯೋಜಿತ ವಿರೋಧ ಪಕ್ಷ ನಾಯಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 20, 2023 | 4:07 PM

ತಾವು ಕೆಲವರನ್ನು ಸಂಪರ್ಕಿಸುವ ಪ್ರಯತ್ನದಲ್ಲಿದ್ದು, ಅವರನ್ನು ಯಾರ ಮುಖಾಂತರ ಸಂಪರ್ಕಿಸಿದರೆ ಉತ್ತಮ ಅನ್ನೋದರ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದ ಅಶೋಕ ಪಕ್ಷದ ನಾಯಕರಲ್ಲಿ ಏನೇ ಅಸಮಾಧಾನಗಳಿದ್ದರೂ ಎಲ್ಲರ ಗುರಿ ಒಂದೇ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಆ ಸ್ಥಾನದಲ್ಲಿ ಕೂರಿಸುವುದು ಎಂದರು.

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನ ಆಯ್ಕೆ ಬಗ್ಗೆ ಕೆಲ ಬಿಜೆಪಿ ನಾಯಕರಲ್ಲಿ ಹುಟ್ಟಿಕೊಂಡಿರುವ ಅಸಮಾಧಾನವನ್ನು ಅದಷ್ಟು ಬೇಗ ದೂರ ಮಾಡುವುದಾಗಿ ನಿಯೋಜಿತ ವಿರೋಧ ಪಕ್ಷದ ನಾಯಕ ಅರ್ ಅಶೋಕ ಹೇಳಿದರು (R Ashoka). ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅಶೋಕ, ಹಿರಿಯ ನಾಯಕರಾದ ವಿ ಸೋಮಣ್ಣ (V Somanna), ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ಡಿವಿ ಸದಾನಂದ ಗೌಡ (DV Sadananda Gowda), ರಮೇಶ್ ಜಾರಕಿಹೊಳಿ (Ramesh Jarkiholi) ಮೊದಲಾದರವರ ಹೆಸರು ಉಲ್ಲೇಖಿಸದೆ ಅವರನ್ನು ಸಮಾಧಾನ ಪಡಿಸುವ ಕಾರ್ಯ ಜಾರಿಯಲ್ಲಿದೆ ಅಂತ ಹೇಳಿದರು. ಅಸಮಾಧಾನಗೊಂಡಿರುವರಲ್ಲಿ ಯಾರೊಬ್ಬರೂ ಪಕ್ಷದ ವಿರುದ್ಧ ಮಾತಾಡಿಲ್ಲ, ಅವರಿಗೆ ಅಸಮಾಧಾನಗಳಿರೋದು ಬೇರೆ ವಿಚಾರಗಳಲ್ಲಿ, ಕೆಲ ನಾಯಕರೊಂದಿಗೆ ಅಧ್ಯಕ್ಷರು ಮಾತಾಡುತ್ತಿದ್ದಾರೆ ಮತ್ತು ತಾವು ಕೆಲವರನ್ನು ಸಂಪರ್ಕಿಸುವ ಪ್ರಯತ್ನದಲ್ಲಿದ್ದು, ಅವರನ್ನು ಯಾರ ಮುಖಾಂತರ ಸಂಪರ್ಕಿಸಿದರೆ ಉತ್ತಮ ಅನ್ನೋದರ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದರು. ಪಕ್ಷದ ನಾಯಕರಲ್ಲಿ ಏನೇ ಅಸಮಾಧಾನಗಳಿದ್ದರೂ ಎಲ್ಲರ ಗುರಿ ಒಂದೇ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಆ ಸ್ಥಾನದಲ್ಲಿ ಕೂರಿಸುವುದು ಎಂದು ಅಶೋಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ