AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jagadish Shettar: ಲೋಕಸಭಾ ಎಲೆಕ್ಷನ್‌ಗೆ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡುವ ಬಗ್ಗೆ ಶೆಟ್ಟರ್ ಹೇಳಿದ್ದಿಷ್ಟು

Jagadish Shettar: ಲೋಕಸಭಾ ಎಲೆಕ್ಷನ್‌ಗೆ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡುವ ಬಗ್ಗೆ ಶೆಟ್ಟರ್ ಹೇಳಿದ್ದಿಷ್ಟು

ಶಿವಕುಮಾರ್ ಪತ್ತಾರ್
| Updated By: ಸಾಧು ಶ್ರೀನಾಥ್​|

Updated on: Aug 01, 2023 | 4:10 PM

Share

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 15ರಿಂದ 20 ಸ್ಥಾನ ಗೆಲ್ಲಲಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು. ಆ ವೇಳೆ, ಎಂಪಿ ಎಲೆಕ್ಷನ್​​ಗೆ ನೀವು ಟಿಕೆಟ್​ ಕೇಳಕ್ಕೆ ಹೋಗ್ತೀರಾ ಸಾರ್? ಎಂದು ಸುದ್ದಿಗಾರರು ಕೇಳಿದ್ದಕ್ಕೆ ಶೆಟ್ಟರ್ ಹೇಳಿದ್ದಿಷ್ಟು...

ಹುಬ್ಬಳ್ಳಿ, ಆಗಸ್ಟ್​​ 1: ಕಾಂಗ್ರೆಸ್ ಹೈಕಮಾಂಡ್​​ ಬುಲಾವ್​ ಮೇರೆಗೆ ಕರ್ನಾಟಕ ವಿಧಾನ ಪರಿಷತ್​​ ಸದಸ್ಯ, ಕಾಂಗ್ರೆಸ್​​ ನಾಯಕ ಜಗದೀಶ್ ಶೆಟ್ಟರ್​​ (Jagadish Shettar) ಅವರು ಇಂದು ದೆಹಲಿಗೆ ತೆರಳಲಿದ್ದಾರೆ. 3-4 ದಿನಗಳ ಹಿಂದೆ ಎಐಸಿಸಿ ( AICC) ಕಚೇರಿಯಿಂದ ಕರೆ ಬಂದಿತ್ತು ಎಂದು ಹುಬ್ಬಳ್ಳಿಯಲ್ಲಿ ಜಗದೀಶ್​ ಶೆಟ್ಟರ್ ಹೇಳಿದರು. ಶಾಸಕರ ಅಸಮಾಧಾನಕ್ಕೂ, ಈಗನ ದೆಹಲಿ ಸಭೆಗೂ ಸಂಬಂಧ ಇಲ್ಲ. ಶಾಸಕಾಂಗ ಸಭೆಗೂ ಮುನ್ನವೇ ದೆಹಲಿಗೆ ಬರಲು ಕರೆ ಬಂದಿತ್ತು. ಲೋಕಸಭೆ ಚುನಾವಣೆ, ಸಂಘಟನೆ ದೃಷ್ಟಿಯಿಂದ ಸಭೆ ಕರೆದಿದ್ದಾರೆ. ಸರ್ಕಾರ ಬಂದ ಮೇಲೆ ಸಂಘಟನೆ, ಪಕ್ಷದ ಬೆಳವಣಿಗೆ ಬಗ್ಗೆ ಚರ್ಚೆಯಾಗಲಿದೆ. ಹಾಗಾಗಿ ಕಾಂಗ್ರೆಸ್ ನಾಯಕರ (Congress) ಸಭೆಗೆ ದೆಹಲಿಗೆ ಹೋಗುತ್ತಿದ್ದೇನೆ ಎಂದು ಶೆಟ್ಟರ್​ ಹೇಳಿದರು.

ರಾಜ್ಯ ಬಿಜೆಪಿ ಲೀಡರ್ ಲೆಸ್ ಪಾರ್ಟಿ ಎಂದು MLC ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು. ಬಿಜೆಪಿಗೆ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಲು ಆಗಿಲ್ಲ. ಪ್ರಧಾನಿ ಮೋದಿ ಬಂದು ನೂರಾರು ಕಡೆ ಪ್ರಚಾರ ಮಾಡಿದ್ದರು. ಪ್ರಧಾನಿ ಮೋದಿ‌ ಬಂದು ಪ್ರಚಾರ ಮಾಡಿದ ಕಡೆ ಏನಾಯಿತು? ಲೋಕಸಭೆ ಚುನಾವಣೆಯಲ್ಲೂ ಇದೇ ರೀತಿ ಆಗುತ್ತೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 15ರಿಂದ 20 ಸ್ಥಾನ ಗೆಲ್ಲಲಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು. ಎಂಪಿ ಎಲೆಕ್ಷನ್​​ಗೆ ನೀವು ಟಿಕೆಟ್​ ಕೇಳಕ್ಕೆ ಹೋಗ್ತೀರಾ ಸಾರ್? ಲೋಕಸಭಾ ಎಲೆಕ್ಷನ್‌ಗೆ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡ್ತೀರಾ ಎಂದು ಕೇಳಿದ್ದಕ್ಕೆ ಶೆಟ್ಟರ್ ಹೇಳಿದ್ದಿಷ್ಟು… ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ