2 ಮಕ್ಕಳ ಜೊತೆ ಜೀವ ಬಿಟ್ಟ ತಾಯಿ: ಈ ಹೃದಯ ವಿದ್ರಾವಕ ಘಟನೆಗೆ ಕಾರಣವೇನು?

Edited By:

Updated on: Sep 21, 2025 | 9:07 PM

ಮಹಿಳೆ ತನ್ನ ಎರಡು ಮಕ್ಕಳ ಜೊತೆ ಸೇರಿ ತಾನು ಕೂಡ ಜೀವ ಬಿಟ್ಟಿದ್ದಾಳೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕಡಪಲಕೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಪತಿಯ ಅಜ್ಜಿ ಕಿರುಕುಳದಿಂದ ಈ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಕಡಪಲಕೆರೆ ಗ್ರಾಮದ ಸರಿತಾಳನ್ನ ಅದೇ ಗ್ರಾಮದ ಸಂತೋಷ್ ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು.

ತುಮಕೂರು, (ಸೆಪ್ಟೆಂಬರ್ 21): ಮಹಿಳೆ ತನ್ನ ಎರಡು ಮಕ್ಕಳ ಜೊತೆ ಸೇರಿ ತಾನು ಕೂಡ ಜೀವ ಬಿಟ್ಟಿದ್ದಾಳೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕಡಪಲಕೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಪತಿಯ ಅಜ್ಜಿ ಕಿರುಕುಳದಿಂದ ಈ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಕಡಪಲಕೆರೆ ಗ್ರಾಮದ ಸರಿತಾಳನ್ನ ಅದೇ ಗ್ರಾಮದ ಸಂತೋಷ್ ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಕಳೆದ 6 ವರ್ಷಗಳ ಹಿಂದೆ ಇವರ ಮದುವೆಯಾಗಿತ್ತು. ಆಟೋ ಚಾಲಕನಾಗಿದ್ದ ಸಂತೋಷ್, ಮದುವೆ ಆದಗಿಂದಲೂ ತನ್ನ ತಾಯಿ ಹಾಗೂ ಅಜ್ಜಿ ಜೊತೆ ಸೇರಿ ಕಿರುಕುಳ ಕೊಡುತ್ತಿದ್ದನು. ಹೀಗಾಗಿಯೇ ಮನನೊಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಸರಿತಾ ಜೀವ ಬಿಟ್ಟಿದ್ದಾಳೆ.

Loading...
Unable to load recommendations.
Follow Us