Karnataka Assembly Polls: ಸಿದ್ದರಾಮಯ್ಯರಂತೆ ಸಾರ್ವಜನಿಕವಾಗಿ ಮುತ್ತಿಡುವ ಮಹಿಳಾ ಅಭಿಮಾನಿಗಳು ಹೆಚ್ ಡಿ ಕುಮಾರಸ್ವಾಮಿಗೂ ಇದ್ದಾರೆ!

Updated on: Apr 01, 2023 | 7:00 PM

ಕುಮಾರಸ್ವಾಮಿಯವರು ಕೆಮೆರಾಗೆ ಬೆನ್ನು ಮಾಡಿದ್ದರಿಂದ ಕಾರ್ಯಕರ್ತೆಯ ಮುತ್ತಿನಿಂದ ಮುಜುಗರಕ್ಕೊಳಗಾದರೋ ಅಥವಾ ಪುಳಕಿತರಾದರೋ ಅಂತ ಗೊತ್ತಾಗಲಿಲ್ಲ.

ಬೆಂಗಳೂರು: ಸಿದ್ದರಾಮಯ್ಯನವರೇ, ಸಾರ್ವಜನಿಕ ವೇದಿಕೆಗಳಲ್ಲಿ ಮಹಿಳೆಯರು ನಿಮಗಷ್ಟೇ ಮುತ್ತಿಡುತ್ತಾರೆ ಅಂತ ಬೀಗಬೇಡಿ, ನನಗೂ ಅಂಥ ಮಹಿಳಾ ಅಭಿಮಾನಿಗಳಿದ್ದಾರೆ ಅಂತ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಇನ್ನು ನಿರ್ಭಿಡೆಯಿಂದ ಹೇಳಬಹುದು ಮಾರಾಯ್ರೇ! ಪಂಚರತ್ನ ಯಾತ್ರೆ (Pancharatna Yatre) ಕಾರ್ಯಕ್ರಮದ ಭಾಗವಾಗಿ ರಾಜ್ಯದೆಲ್ಲೆಡೆ ಸುತ್ತಿ ಬಳಲುತ್ತಿರುವ ಕುಮಾರಸ್ವಾಮಿಯವರಿಗೆ ಇಂದು ಯಶವಂತಪುರದ (Yeshwanthpur) ವಿಧಾನಸಭಾ ಕ್ಷೇತ್ರದ ಮಾರುತಿ ನಗರದಲ್ಲಿ ಯಾತ್ರೆ ಮುಂದುವರಿಸಿಕೊಂಡು ಹೋಗುತ್ತಿದ್ದಾಗ ಮಹಿಳಾ ಕಾರ್ಯಕರ್ತೆಯೊಬ್ಬರು ಕೆನ್ನೆಗೆ ಮುದ್ದಿಸಿದರು. ಕುಮಾರಸ್ವಾಮಿಯವರು ಕೆಮೆರಾಗೆ ಬೆನ್ನು ಮಾಡಿದ್ದರಿಂದ ಕಾರ್ಯಕರ್ತೆಯ ಮುತ್ತಿನಿಂದ ಮುಜುಗರಕ್ಕೊಳಗಾದರೋ ಅಥವಾ ಪುಳಕಿತರಾದರೋ ಅಂತ ಗೊತ್ತಾಗಲಿಲ್ಲ. ಎನಿವೇಸ್, ಸಿದ್ದರಾಮಯ್ಯನವರ ಜೊತೆ ವಾದ ಮಾಡಲು ಅವರಿಗೊಂದು ಹೊಸ ಆಯಾಮ ಸಿಕ್ಕಿದ್ದು ಮಾತ್ರ ಸುಳ್ಳಲ್ಲ!

ಮತ್ತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More