ನಾಯಿ ಕಡಿತ ಪ್ರಕರಣ: ದರ್ಶನ್ ವಿರುದ್ಧ ದೂರು ನೀಡಿದ ಮಹಿಳೆ ಹೇಳಿದ್ದೇನು?

|

Updated on: Nov 01, 2023 | 3:27 PM

Darshan: ನಟ ದರ್ಶನ್​ರ ಸಾಕು ನಾಯಿಗಳು ಮಹಿಳೆ ಮೇಲೆ ದಾಳಿ ನಡೆಸಿ ಕಡಿದು ಗಾಯಗೊಳಿಸಿದ ಪ್ರಕರಣದ ಕುರಿತಾಗಿ ಮಹಿಳೆ ಅಮಿತಾ ಜಿಂದಾಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಟ ದರ್ಶನ್ ಹೆಸರನ್ನೂ ಸಹ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ಸಂಬಂಧ ಎಫ್​ಐಆರ್ ದಾಖಲಾಗಿದೆ. ಅಂದು ನೆಡೆದಿದ್ದೇನು ಎಂಬ ಬಗ್ಗೆ ಅಮಿತಾ ವಿವರಿಸಿದ್ದಾರೆ.

ನಟ ದರ್ಶನ್​ರ (Darshan) ಸಾಕು ನಾಯಿಗಳು ಮಹಿಳೆ ಮೇಲೆ ದಾಳಿ ನಡೆಸಿ ಕಡಿದು ಗಾಯಗೊಳಿಸಿದ ಪ್ರಕರಣದ ಕುರಿತಾಗಿ ಮಹಿಳೆ ಅಮಿತಾ ಜಿಂದಾಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಟ ದರ್ಶನ್ ಹೆಸರನ್ನೂ ಸಹ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ಸಂಬಂಧ ಎಫ್​ಐಆರ್ ದಾಖಲಾಗಿದೆ. ಅಮಿತಾ ಜಿಂದಾಲ್ ಹೇಳುವಂತೆ, ದರ್ಶನ್​ರ ಮನೆಯ ಬಳಿ ಕಾರು ಪಾರ್ಕ್ ಮಾಡಿದ್ದಕ್ಕೆ ಅವರ ಸಿಬ್ಬಂದಿ ಉದ್ದೇಶಪೂರ್ವವಾಗಿ ತಮ್ಮ ಮೇಲೆ ನಾಯಿಗಳನ್ನು ಬಿಟ್ಟರು ಎಂದಿದ್ದಾರೆ. ಅಂದು ಏನಾಯ್ತು ಎಂಬುದರ ಬಗ್ಗೆ ಅಮಿತಾ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:09 pm, Tue, 31 October 23

Follow us on