ಯಾದಗಿರಿ: ದಾರಿಯಲ್ಲಿ ಸಿಕ್ಕ 1.45 ಲಕ್ಷ ರೂ. ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್

Edited By:

Updated on: Nov 13, 2025 | 10:34 AM

ಸುರಪುರ ಪೊಲೀಸ್ ಠಾಣೆಯ ಕಾನ್​ಸ್ಟೇಬಲ್ ದಯಾನಂದ ಅವರು ದಾರಿಯಲ್ಲಿ ಸಿಕ್ಕಿದ್ದ ಹಣವನ್ನು ರೈತ ಗಾದಪ್ಪ ಅವರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಹತ್ತಿ ಬೆಳೆ ಮಾರಿ ಮನೆಗೆ ಹೋಗುವಾಗ ರೈತ ಗೌಡಪ್ಪ ಪಾಟೀಲ್ ರಸ್ತೆಯಲ್ಲಿ 1 ಲಕ್ಷದ 47 ಸಾವಿರ ರೂ. ಹಣವನ್ನು ಕಳೆದುಕೊಂಡಿದ್ದರು.

ಯಾದಗಿರಿ, ನವೆಂಬರ್​ 13: ದಾರಿಯಲ್ಲಿ ಸಿಕ್ಕ ಹಣವನ್ನು ವಾರಸುದಾರರಿಗೆ ಮರಳಿಸಿ ಪೊಲೀಸ್​​ ಕಾನ್ಸ್​ಟೇಬಲ್​ ಪ್ರಾಮಾಣಿಕತೆ ಮೆರೆದ ಪ್ರಸಂಗ ಯಾದಗಿರಿ ಜಿಲ್ಲೆಯ ಸುರಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹತ್ತಿ ಬೆಳೆ ಮಾರಿ ಮನೆಗೆ ಹೋಗುವಾಗ ರೈತ ಗೌಡಪ್ಪ ಪಾಟೀಲ್ ರಸ್ತೆಯಲ್ಲಿ 1 ಲಕ್ಷದ 47 ಸಾವಿರ ರೂ. ಹಣವನ್ನು ಕಳೆದುಕೊಂಡಿದ್ದರು. ಅದೇ ದಾರಿಯಲ್ಲಿ ಆಗಮಿಸಿದ ಸುರಪುರ ಪೋಲಿಸ್ ಠಾಣೆಯ ಕಾನ್ಸ್​ಟೇಬಲ್​ ದಯಾನಂದ ಜಮಾದರ್​​ ಅವರಿಗೆ ಆ ಹಣ ಸಿಕ್ಕಿದ್ದು, ಠಾಣೆ ಪಿಐ ಉಮೇಶ್​ ನಾಯಕ ನೇತೃತ್ವದಲ್ಲಿ ರೈತ ಗೌಡಪ್ಪಗೆ ಹಣ ವಾಪಸ್​ ಮಾಡಿದ್ದಾರೆ. ಸುರಪುರ ಪೋಲಿಸರ ಕಾರ್ಯಕ್ಕೆ ರೈತ ಗೌಡಪ್ಪ ಮತ್ತು ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 13, 2025 10:30 AM
Follow Us
ಅಮೀನ್​ ಸಾಬ್​

ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದೆನೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ‌ ನಿರ್ವಹಿದ್ದೆನೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದೆನೆ.. ನನ್ನ ಹವ್ಯಾಸ ಕ್ರಿಕೆಟ್ ಆಡೋದು,ಮಾನವೀಯ ಮೌಲ್ಯ ಮೌಲ್ಯಯುಳ್ಳ ಸುದ್ದಿಗಳನ್ನ ಮಾಡೋದು.

Read More