ಬೆಳಗಾವಿ: ಈ ಜಲಪಾತವನ್ನು ನೋಡಿದರೆ ಪಿಬಿ ಶ್ರೀನಿವಾಸ್ ಮತ್ತು ಪಿ ಸುಶೀಲಾ ಹಾಡಿರುವ …ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲೂ ದುಂಬಿಯ ಹಾಡಿನ ಝೇಂಕಾರದಲ್ಲೂ….. ಹಾಡಿನ ಸಾಲುಗಳು ನೆನಪಾಗಬೇಕು. ಇದು ಪುಟ್ಟಣ ಕಣಗಾಲ್ ನಿರ್ದೇಶನದ ‘ಒಲವೇ ಜೀವನ ಸಾಕ್ಷಾತ್ಕಾರ’ ಚಿತ್ರ ಮತ್ತು ಆ ಜಮಾನಾದ ಸುಮಧುರ ಸೂಪರ್ ಹಿಟ್ ಹಾಡು. ಚಿತ್ರದ ಸನ್ನಿವೇಶ ಬೇರೆ ಇದೆ ಆ ವಿಚಾರ ಬೇರೆ. ಅಲ್ಲಿ ಜಲಪಾತ ನಮಗೆ ಕಾಣಲಾರದು, ನಾಯಕಿಯ ಕಣ್ಣೀರು ಕಾಣುತ್ತದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಗೋಡಚಿನಮಲ್ಕಿ ಜಲಪಾತ ನೋಡುವಾಗ ಈ ಹಾಡು ನೆನಪಾದರೆ ಆಶ್ಚರ್ಯವಿಲ್ಲ. ಅದರೆ ರಭಸದಿಂದ ಧುಮ್ಮುಕ್ಕುತ್ತಿರುವ ಜಲಪಾತದಲ್ಲಿ ಯುವಕನೊಬ್ಬ ಹುಚ್ಚು ಸಾಹಸಕ್ಕಿಳಿದಿದ್ದಾನೆ. ಮತ್ತೂ ಸೋಜಿಗದ ಸಂಗತಿಯೆಂದರೆ ಅವನು ಮೀನು ಹಿಡಿಯುವ ಉದ್ದೇಶದಿಂದ ಈ ಕಸರತ್ತು ಮಾಡುತ್ತಿದ್ದಾನೆ. ಹಿಡಿದ ಮೀನುಗಳನ್ನು ಅವನು ಬ್ಯಾಗೊಂದರಲ್ಲಿ ಹಾಕುತ್ತಿರುವುದು ವಿಡಿಯೋದಲ್ಲಿ ಕಾಣುತ್ತದೆ. ಮೀನು ಹಿಡಿಯಲು ಅವನಿಗೆ ಯಾವುದೇ ಕೆರೆ, ಹಳ್ಳ-ಕೊಳ್ಳ ಸಿಗಲಿಲ್ಲವೇ? ಬಹಳ ಅಪಾಯಕಾರಿ ರಿಸ್ಕ್ ಯುವಕ ತೆಗೆದುಕೊಂಡಿದ್ದಾನೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Shocking Video: ಪಿಕ್ನಿಕ್ ಹೋದ ಒಂದೇ ಕುಟುಂಬದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
Published On - 2:32 pm, Thu, 4 July 24