ಬಂದ್ ದಿನವೂ ಸಿನಿಮಾ ಶೂಟಿಂಗ್? ಸ್ಪಷ್ಟನೆ ನೀಡಿದ ಯುವ ರಾಜ್ಕುಮಾರ್
ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿತ್ತು. ಈ ಬಂದ್ ಯಶಸ್ವಿ ಆಗಿದೆ. ಈ ಬಂದ್ಗೆ ಚಿತ್ರರಂಗದವರೂ ಬೆಂಬಲ ನೀಡಿದ್ದರು. ಮೈಸೂರಿನಲ್ಲಿ ಯುವ ರಾಜ್ಕುಮಾರ್ ಸಿನಿಮಾ ತಂಡದವರು ಶೂಟಿಂಗ್ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂತು. ಇದಕ್ಕೆ ಯುವ ರಾಜ್ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿತ್ತು. ಈ ಬಂದ್ ಯಶಸ್ವಿ ಆಗಿದೆ. ಈ ಬಂದ್ಗೆ ಚಿತ್ರರಂಗದವರೂ ಬೆಂಬಲ ನೀಡಿದ್ದರು. ಹೀಗಾಗಿ ಎಲ್ಲಿಯೂ ಚಿತ್ರೀಕರಣ ನಡೆದಿಲ್ಲ. ಸಿನಿಮಾ ಪ್ರದರ್ಶನ ಕೂಡ ರದ್ದಾಗಿತ್ತು. ಆದರೆ, ಮೈಸೂರಿನಲ್ಲಿ ಯುವ ರಾಜ್ಕುಮಾರ್ ಸಿನಿಮಾ ತಂಡದವರು ಶೂಟಿಂಗ್ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂತು. ಇದಕ್ಕೆ ಯುವ ರಾಜ್ಕುಮಾರ್ (Yuva Rajkumar) ಸ್ಪಷ್ಟನೆ ನೀಡಿದ್ದಾರೆ. ‘ಹೋರಾಟಕ್ಕೆ ಸಂಪೂರ್ಣ ಬೆಂಬಲ ಇದೆ. ಸೆಪ್ಟೆಂಬರ್ 28ರಂದು ಶೂಟಿಂಗ್ ಮಾಡುವಾಗ ಲೈಟ್ ಸುಟ್ಟೋಗಿತ್ತು. ಅದನ್ನು ನೋಡೋಕೆ ಬಂದಿದ್ವಿ ಅಷ್ಟೇ’ ಎಂದು ಯುವ ರಾಜ್ಕುಮಾರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us