Prajadhvani Yatre: ಪ್ರಳಯವಾದರೂ ಜಮೀರ್ ಅಹ್ಮದ್ ಬಾಯಲ್ಲಿ ಕ್ಷೀರಭಾಗ್ಯ ಪದ ಶೀಲಭಾಗ್ಯವಾಗೇ ಉಳಿದುಬಿಡುತ್ತದೆ!

ಅರುಣ್​ ಕುಮಾರ್​ ಬೆಳ್ಳಿ

Updated on: Mar 13, 2023 | 4:12 PM

ಎಲ್ಲ ಭಾಗ್ಯಗಳನ್ನು ಸರಿಯಾಗಿ ಉಚ್ಛರಿಸುವ ಜಮೀರ್ ಕ್ಷೀರಭಾಗ್ಯ ಅನ್ನುವಾಗ ಮಾತ್ರ ಎಡವುತ್ತಾರೆ. ಕ್ಷೀರಭಾಗ್ಯವನ್ನು ಅವರು ಯಾವಾಗಲೂ ‘ಶೀಲಭಾಗ್ಯ’ ಅಂತ ಉಚ್ಛರಿಸುತ್ತಾರೆ. ಸದನದಲ್ಲಿ ಎಲ್ಲರ ವ್ಯಾಕರಣ ಸರಿಮಾಡುವ ಸಿದ್ದರಾಮಯ್ಯ ಮೇಷ್ಟ್ರು ತಮ್ಮ ಪಟ್ಟದ ಶಿಷ್ಯನನ್ನು ಯಾಕೆ ತಿದ್ದುತ್ತಿಲ್ಲವೋ?

ದಾವಣಗೆರೆ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ನೇತೃತ್ವದ ಪ್ರಜಾಧ್ವನಿ ಯಾತ್ರೆ ದಾವಣೆಗೆರೆ ಜಿಲ್ಲೆಯಲ್ಲಿ ಮುಂದುವರಿದಿದೆ. ಹೊನ್ನಾಳಿಯಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ (Zameer Ahmed) ಮಾತಾಡಿದರು. ಅವರು ಕನ್ನಡ ಚೆನ್ನಾಗೇ ಮಾತಾಡುತ್ತಾರೆ, ಅದರಲ್ಲಿ ಅನುಮಾನ ಬೇಡ. ಆದರೆ ಕೆಲ ಪದಗಳ ಉಚ್ಛಾರಣೆ ಅಪಭ್ರಂಶಗೊಳ್ಳುವುದನ್ನು ನೀವೆಲ್ಲ ಹಲವಾರು ಬಾರಿ ಕೇಳಿಸಿಕೊಂಡಿರಬಹುದು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಘೋಷಿಸಿದ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿ ಹೇಳುವಾಗ ಎಲ್ಲ ಭಾಗ್ಯಗಳನ್ನು ಸರಿಯಾಗಿ ಉಚ್ಛರಿಸುವ ಜಮೀರ್ ಕ್ಷೀರಭಾಗ್ಯ ಅನ್ನುವಾಗ ಮಾತ್ರ ಎಡವುತ್ತಾರೆ. ಕ್ಷೀರಭಾಗ್ಯವನ್ನು ಅವರು ಯಾವಾಗಲೂ ‘ಶೀಲಭಾಗ್ಯ’ ಅಂತ ಉಚ್ಛರಿಸುತ್ತಾರೆ. ಸದನದಲ್ಲಿ ಎಲ್ಲರ ವ್ಯಾಕರಣ ಸರಿಮಾಡುವ ಸಿದ್ದರಾಮಯ್ಯ ಮೇಷ್ಟ್ರು ತಮ್ಮ ಪಟ್ಟದ ಶಿಷ್ಯನನ್ನು ಯಾಕೆ ತಿದ್ದುತ್ತಿಲ್ಲವೋ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.