Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಗ್ಗಾವಿ ಕ್ಷೇತ್ರದಿಂದ ಖಾದ್ರಿ ನಾಮಪತ್ರ ಹಿಂಪಡೆಯುವಲ್ಲಿ ಯಶ ಸಾಧಿಸಿರುವ ಜಮೀರ್ ಮುಖದಲ್ಲಿ ಬತ್ತದ ನಗು

ಶಿಗ್ಗಾವಿ ಕ್ಷೇತ್ರದಿಂದ ಖಾದ್ರಿ ನಾಮಪತ್ರ ಹಿಂಪಡೆಯುವಲ್ಲಿ ಯಶ ಸಾಧಿಸಿರುವ ಜಮೀರ್ ಮುಖದಲ್ಲಿ ಬತ್ತದ ನಗು

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 30, 2024 | 3:59 PM

ಅಜ್ಜಂಪೀರ್ ಖಾದ್ರಿಯವರನ್ನು ಸ್ಪರ್ಧೆಯಿಂದ ಹಿಂದೆ ಸರಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ನಾಮಪತ್ರ ಸಲ್ಲಿಸಿದ ದಿನದಿಂದ ಖಾದ್ರಿಯನ್ನು ಸಚಿವ ಜಮೀರ್ ತಮ್ಮ ಜೊತೆಯಲ್ಲೇ ಇಟ್ಟುಕೊಂಡಿದ್ದರು. ಖಾದ್ರಿ ನಾಮಪತ್ರ ಹಿಂಪಡೆಯದಿದ್ದರೆ ಎನ್​ಡಿಎ ಅಭ್ಯರ್ಥಿ ಭರತ್ ಬೊಮ್ಮಾಯಿ ಸುಲಭ ಜಯ ಸಾಧಿಸುತ್ತಿದ್ದರು.

ಹಾವೇರಿ: ಶಿಗ್ಗಾವಿಯಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್, ದರ್ಶನ್​ಗೆ ಜಾಮೀನು ಸಿಕ್ಕಿರುವುದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿ ಮಾಹಿತಿ ಪಡೆದು ಮಾತಾಡುವುದಾಗಿ ಹೇಳಿದರು. ಶಿಗ್ಗಾವಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ವಾಪಸ್ಸು ಪಡೆದು ಅಧಿಕೃತ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರ ಪರವಾಗಿ ಕೆಲಸ ಮಾಡಲು ಒಪ್ಪಿಸುವಲ್ಲಿ ಸಫಲರಾಗಿರುವ ಜಮೀರ್ ಅಹ್ಮದ್ ಖುಷಿಯಿಂದ ಬೀಗುತಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಜೆಪಿ ಸಮಿತಿ ಕೇಳುವ ಎಲ್ಲ ದಾಖಲೆಗಳನ್ನು ಕೊಡಲು ಎಂಬಿ ಪಾಟೀಲ್ ಡಿಸಿಗೆ ಹೇಳಿದ್ದಾರೆ: ಜಮೀರ್