AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Who would be CM? ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಅಂತ ದೆಹಲಿಯ ಹಜರತ್ ನಿಜಾಮುದ್ದೀನ್ ದರ್ಗಾದಲ್ಲಿ ಜಮೀರ್ ಅಹ್ಮದ್ ಪ್ರಾರ್ಥನೆ

Who would be CM? ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಅಂತ ದೆಹಲಿಯ ಹಜರತ್ ನಿಜಾಮುದ್ದೀನ್ ದರ್ಗಾದಲ್ಲಿ ಜಮೀರ್ ಅಹ್ಮದ್ ಪ್ರಾರ್ಥನೆ

ಅರುಣ್​ ಕುಮಾರ್​ ಬೆಳ್ಳಿ
|

Updated on: May 16, 2023 | 4:33 PM

Share

ದರ್ಗಾದಲ್ಲಿ ಅವರು ಹಜರತ್ ನಿಜಾಮುದ್ದೀನ್ ಸಮಾಧಿಯ ಮೇಲೆ ಚಾದರ್ ಹೊದೆಸಿ, ಹೂಗಳನ್ನು ಚೆಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ನೋಡಬಹುದು.

ದೆಹಲಿ: ಚಾಮರಾಜಪೇಟೆಯಿಂದ ವಿಧಾನಸಭೆ ಆಯ್ಕೆಯಾಗಿರುವ ಜಮೀರ್ ಅಹ್ಮದ್ (Zameer Ahmed) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ. ಸಿದ್ದರಾಮಯ್ಯ ಜೊತೆ ಅವರಿಗೆ ಮುಖ್ಯಮಂತ್ರಿ ಹುದ್ದೆಗೆ ಲಾಬಿ ಮಾಡಲು ದೆಹಲಿಗೆ ಹೋಗಿರುವ ಗೆದ್ದ ಅಭ್ಯರ್ಥಿಗಳ ಪೈಕಿ ಜಮೀರ್ ಸಹ ಒಬ್ಬರು. ಜಮೀರ್ ದೆಹಲಿಗೆ ಹೋಗಿದ್ದೂ ಅಲ್ಲದೆ, ಮಹಾನಗರದಲ್ಲಿರುವ ಹಜರತ್ ನಿಜಾಮುದ್ದೀನ್ ದರ್ಗಾಗೆ (Hazarath Nizamuddin Dargah) ತೆರಳಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಅಂತ ಪ್ರಾರ್ಥನೆ ಕೂಡ ಸಲ್ಲಿಸಿದ್ದಾರೆ. ದರ್ಗಾದಲ್ಲಿ ಅವರು ಹಜರತ್ ನಿಜಾಮುದ್ದೀನ್ ಸಮಾಧಿಯ ಮೇಲೆ ಚಾದರ್ ಹೊದೆಸಿ, ಹೂಗಳನ್ನು ಚೆಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ನೋಡಬಹುದು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ