ಬಡವರಿಗೆ ‘ಸರಿಗಮಪ’ದಲ್ಲಿ ಮಣೆ ಎಂದವರಿಗೆ ಪ್ರೋಮೋದಲ್ಲೇ ಖಡಕ್ ಉತ್ತರ
‘ಸರಿಗಮಪ’ ಶೋನಲ್ಲಿ ಬಡವರಿಗೆ, ಸಿಂಪತಿ ಕಾರ್ಡ್ ಮೇಲೆ ಮಣೆ ಹಾಕಲಾಗುತ್ತದೆ ಎಂಬ ವರದಿ ಇದೆ. ಈ ಬಗ್ಗೆ ಸೋಶೀಯಲ್ ಮೀಡಿಯಾದಲ್ಲಿ ವಿಡಿಯೋಗಳು ಹರಿದಾಡುತ್ತವೆ. ಈ ವಿಡಿಯೋಗೆ ಈ ಮೊದಲು ಅನುಪಮಾ ಗೌಡ ಅವರು ಮಾತನಾಡಿದ್ದರು. ಈ ವಿಡಿಯೋಗೆ ಸ್ಪಷ್ಟನೆ ನೀಡಿದ್ದಾರೆ ಅವರು.
‘ಸರಿಗಮಪ’ ಶೋನಲ್ಲಿ ಪ್ರತಿ ಬಾರಿಯೂ ಸಿಂಪತಿಗಾಗಿ ಅನೇಕರನ್ನು ತರುತ್ತಾರೆ, ಆಡಿಷನ್ ನಡೆಸುವಾಗಲೇ ಆ ರೀತಿಯಲ್ಲಿ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂಬ ಆರೋಪ ಇದೆ. ಈಗ ಸರಿಗಮಪ ಹೊಸ ಸೀಸನ್ ಬರುತ್ತಿದೆ. ಪ್ರೋಮೋದಲ್ಲೇ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಗಾಯಕ ಹಾಗೂ ಶೋ ಜಡ್ಜ್ ವಿಜಯ್ ಪ್ರಕಾಶ್ ಅವರು ಈ ವಿಷಯವಾಗಿ ಸ್ಪಷ್ಟನೆ ನೀಡುವ ರೀತಿಯಲ್ಲಿ ಪ್ರೋಮೋ ಮಾಡಲಾಗಿದೆ. ಶೀಘ್ರದಲ್ಲಿ ಜೀ ಕನ್ನಡದಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ಆರಂಭ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us