
ಡಾಕಾ, ಏಪ್ರಿಲ್ 30: ಬಾಂಗ್ಲಾದೇಶ ಹೈಕೋರ್ಟ್ (Bangladesh High Court) ದೇಶದ್ರೋಹ ಪ್ರಕರಣದಲ್ಲಿ ಜೈಲಿನಲ್ಲಿದ್ದ ಹಿಂದೂ ಆಧ್ಯಾತ್ಮಿಕ ನಾಯಕ ಚಿನ್ಮಯ್ ಕೃಷ್ಣ ದಾಸ್ ಅವರಿಗೆ ಇಂದು ಜಾಮೀನು ನೀಡಿದೆ. ನವೆಂಬರ್ 25ರಂದು ಢಾಕಾದ ಹಜರತ್ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲ್ಪಟ್ಟ ಚಿನ್ಮಯ್ ಕೃಷ್ಣ ಪ್ರಭು ಅವರನ್ನು 5 ತಿಂಗಳ ನಂತರ ಜೈಲಿನಿಂದ ಬಿಡುಗಡೆ ಮಾಡಲಾಯಿತು.
ಚಿನ್ಮಯ್ ದಾಸ್ ಅವರ ಪ್ರತಿವಾದಿ ತಂಡವು ಚಿನ್ಮಯ್ ದಾಸ್ ಅವರು ತಮ್ಮ ತಾಯಿಯ ಮೇಲಿನ ಗೌರವಕ್ಕೆ ಹೋಲಿಸಬಹುದಾದ ಮಾತೃಭೂಮಿಯ ಬಗ್ಗೆ ಆಳವಾದ ಗೌರವವನ್ನು ಹೊಂದಿದ್ದಾರೆ. ಅವರು ದೇಶದ್ರೋಹಿ ಅಲ್ಲ ಎಂದು ವಾದಿಸಿದರೂ ನ್ಯಾಯಾಲಯವು ಜನವರಿಯಲ್ಲಿ ಜಾಮೀನು ಅರ್ಜಿಯನ್ನು ನಿರಾಕರಿಸಿತ್ತು. ಫೆಬ್ರವರಿಯಲ್ಲಿ, ಬಾಂಗ್ಲಾದೇಶ ಹೈಕೋರ್ಟ್ ಬಾಂಗ್ಲಾದೇಶ ಸರ್ಕಾರವನ್ನು ಅವರ ವಕೀಲರು ಚಿನ್ಮಯ್ ದಾಸ್ ಅವರಿಗೆ ಜಾಮೀನು ಏಕೆ ನೀಡಬಾರದು ಎಂಬುದನ್ನು ವಿವರಿಸುವಂತೆ ಕೇಳಿದ್ದರು.
ಇದನ್ನೂ ಓದಿ: ಬಾಂಗ್ಲಾದೇಶ: ಕೋರ್ಟ್ಗೆ ಹಾಜರಾಗದ ಚಿನ್ಮಯ್ ದಾಸ್ ಪರ ವಕೀಲರು, ಜಾಮೀನು ಅರ್ಜಿ ವಿಚಾರಣೆ ಮುಂದಿನ ತಿಂಗಳಿಗೆ ಮುಂದೂಡಿಕೆ
ಢಾಕಾ ಟ್ರಿಬ್ಯೂನ್ ಪತ್ರಿಕೆಯ ಪ್ರಕಾರ, ಈ ಪ್ರಕರಣದಲ್ಲಿ ಹಿಂದೂ ನಾಯಕ ಚಿನ್ಮಯ್ ದಾಸ್ ಅವರನ್ನು ಪ್ರಮುಖ ಆರೋಪಿಯನ್ನಾಗಿ, 164 ಗುರುತಿಸಲಾದ ವ್ಯಕ್ತಿಗಳು ಮತ್ತು 400ರಿಂದ 500 ಗುರುತಿಸಲಾಗದ ಜನರನ್ನು ಹೆಸರಿಸಿದೆ. ಅವರು ಈಗಾಗಲೇ ದೇಶದ್ರೋಹದ ಆರೋಪದ ಮೇಲೆ ಜೈಲಿನಲ್ಲಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ