Video ದುಬೈ ಪ್ರಿನ್ಸ್​ನ ದುಬಾರಿ ಕಾರಿನ ಮೇಲೆ ಗೂಡು ಕಟ್ಟಿ, ಮರಿ ಮಾಡಿದ ಹಕ್ಕಿ! ಪ್ರಿನ್ಸ್ ಮಾಡಿದ್ದೇನು ಗೊತ್ತಾ?

ತನ್ನ ದುಬಾರಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಕಾರಿನ ಮೇಲೆ ಹಕ್ಕಿಯೊಂದು ಮೊಟ್ಟೆ ಇಟ್ಟಿರುವುದರಿಂದ, ಆ ಹಕ್ಕಿಗೆ ಯಾವುದೆ ತೊಂದರೆಯಾಗದಂತೆ ನೋಡಿಕೊಳ್ಳಲು ನಿಶ್ಚಯಿಸಿರುವ ದುಬೈನ ಕ್ರೌನ್ ಪ್ರಿನ್ಸ್, ತಮ್ಮ ಕಾರನ್ನು ಬಳಸದೆ ಇರಲು ನಿರ್ಧರಿಸಿದ್ದಾರೆ. ಈ ವಿಚಾರ ಸಾಮಾಜಿಕ ತಾಣಗಳಲ್ಲಿ ಭಾರಿ ವೈರಲ್​ ಆಗಿದ್ದು, ಕ್ರೌನ್ ಪ್ರಿನ್ಸ್ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಪ್ರಾಣಿಪ್ರಿಯ ಹಾಗೂ ಪರಿಸರವಾದಿ ಎಂದು ಖ್ಯಾತಿಯಾಗಿರುವ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ತಮ್ಮ ಕಾರಿನ ಮೇಲೆ ಮಾಮ […]

Video ದುಬೈ ಪ್ರಿನ್ಸ್​ನ ದುಬಾರಿ ಕಾರಿನ ಮೇಲೆ ಗೂಡು ಕಟ್ಟಿ, ಮರಿ ಮಾಡಿದ ಹಕ್ಕಿ! ಪ್ರಿನ್ಸ್ ಮಾಡಿದ್ದೇನು ಗೊತ್ತಾ?
ಸಾಧು ಶ್ರೀನಾಥ್​

Updated on: Aug 14, 2020 | 4:11 PM

ತನ್ನ ದುಬಾರಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಕಾರಿನ ಮೇಲೆ ಹಕ್ಕಿಯೊಂದು ಮೊಟ್ಟೆ ಇಟ್ಟಿರುವುದರಿಂದ, ಆ ಹಕ್ಕಿಗೆ ಯಾವುದೆ ತೊಂದರೆಯಾಗದಂತೆ ನೋಡಿಕೊಳ್ಳಲು ನಿಶ್ಚಯಿಸಿರುವ ದುಬೈನ ಕ್ರೌನ್ ಪ್ರಿನ್ಸ್, ತಮ್ಮ ಕಾರನ್ನು ಬಳಸದೆ ಇರಲು ನಿರ್ಧರಿಸಿದ್ದಾರೆ. ಈ ವಿಚಾರ ಸಾಮಾಜಿಕ ತಾಣಗಳಲ್ಲಿ ಭಾರಿ ವೈರಲ್​ ಆಗಿದ್ದು, ಕ್ರೌನ್ ಪ್ರಿನ್ಸ್ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಪ್ರಾಣಿಪ್ರಿಯ ಹಾಗೂ ಪರಿಸರವಾದಿ ಎಂದು ಖ್ಯಾತಿಯಾಗಿರುವ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ತಮ್ಮ ಕಾರಿನ ಮೇಲೆ ಮಾಮ ಹಕ್ಕಿಯು ಮೊಟ್ಟೆ ಇಟ್ಟಿರುವುದರಿಂದ ಆ ಕಾರನ್ನು ಬಳಸದಿರಲು ನಿಶ್ಚಯಿಸಿದ್ದಾರೆ.

ಜೊತೆಗೆ ಆ ಪಕ್ಷಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಕ್ಕಾಗಿ ಯಾರು ಸಹ ಆ ಪಕ್ಷಿಯ ಹತ್ತಿರ ಸುಳಿಯಬಾರದು ಎಂದು ಪ್ರಿನ್ಸ್ ತಮ್ಮ ಸಿಬ್ಬಂದಿಗೆ ಎಚ್ಚರಿಸಿ, ತಿಳಿಸಿದ್ದಾರೆ. ಈ ವಿಚಾರವನ್ನು ಸ್ವತಹ ಪ್ರಿನ್ಸ್ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಫಜ್ಜಾ ಎಂದು ಜನಪ್ರಿಯವಾಗಿರುವ ದುಬೈನ ಕ್ರೌನ್ ಪ್ರಿನ್ಸ್ ಕೆಲವು ದಿನಗಳ ನಂತರ ಮತ್ತೆ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮೊಟ್ಟೆಗಳಿಂದ ಹೊರಬಂದಿರುವ ತನ್ನ ಮಕ್ಕಳನ್ನು ಮಾಮ ಹಕ್ಕಿಯು ಐಷಾರಾಮಿ ವಾಹನದ ಮೇಲೆ ನೋಡಿಕೊಳ್ಳುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

 

 

Published On - 2:51 pm, Fri, 14 August 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us