AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವು ಮಧುಮೇಹಿಗಳ ಮಾವಿನಹಣ್ಣುಗಳು..; ಮೂರು ವಿಧದ ಸಕ್ಕರೆ ರಹಿತ ಮಾವು ಪರಿಚಯಿಸಿದ ಪಾಕಿಸ್ತಾನ ಕೃಷಿ ತಜ್ಞ

ಈ ಸಕ್ಕರೆ ಮುಕ್ತ ಮಾವಿನಹಣ್ಣುಗಳು ದುಬಾರಿಯಲ್ಲ. ಕೈಗೆಟಕುವ ದರವನ್ನೇ ನಿಗದಿಪಡಿಸಲಾಗಿದೆ. ಪಾಕಿಸ್ತಾನದ ಮಾರುಕಟ್ಟೆಗಳಲ್ಲಿ ಕೆಜಿಗೆ 150 ರೂ.ಪಾಕಿಸ್ತಾನ ಕರೆನ್ಸಿ ಅಂದರೆ, ಭಾರತರ ಕರೆನ್ಸಿ ಪ್ರಕಾರ ಕೆಜಿಗೆ 70 ರೂ. ಆಗಿದೆ.

ಇವು ಮಧುಮೇಹಿಗಳ ಮಾವಿನಹಣ್ಣುಗಳು..; ಮೂರು ವಿಧದ ಸಕ್ಕರೆ ರಹಿತ ಮಾವು ಪರಿಚಯಿಸಿದ ಪಾಕಿಸ್ತಾನ ಕೃಷಿ ತಜ್ಞ
ಪಾಕಿಸ್ತಾನದ ಸಕ್ಕರೆ ರಹಿತ ಮಾವಿನಹಣ್ಣು
TV9 Web
| Edited By: |

Updated on: Jun 27, 2021 | 3:05 PM

Share

ಕರಾಚಿ: ಮಧುಮೇಹ ರೋಗಿಗಳಿಗಾಗಿ ಮೂರು ವಿಧದ ಮಾವಿನ ಹಣ್ಣುಗಳನ್ನು ಪಾಕಿಸ್ತಾನದ ತಜ್ಞರೊಬ್ಬರು ಪರಿಚಯಿಸಿದ್ದಾರೆ. ಈ ಮೂರೂ ವಿಧದ ಹಣ್ಣುಗಳಲ್ಲಿ ಸಕ್ಕರೆ ಅಂಶ ತುಂಬ ಕಡಿಮೆ ಅಂದರೆ ಶೇ.4-6 ರಷ್ಟು ಮಾತ್ರ ಇರುತ್ತದೆ. ಹಾಗಾಗಿ ಇದನ್ನು ಮಧುಮೇಹಿಗಳು ಧೈರ್ಯವಾಗಿ ತಿನ್ನಬಹುದಾಗಿದೆ. ಅಂದಹಾಗೆ ಇದನ್ನು ಪರಿಚಯಿಸಿದ್ದು, ಖ್ಯಾತ ಕೃಷಿ ತಜ್ಞ ಎಂ.ಎಚ್​.ಪನ್ವಾರ್​​ ಅವರ ಫಾರ್ಮ್​​ನ ಗುಲಾಮ್​ ಸರ್ವಾರ್​ ಎಂಬುವರು. ಹಣ್ಣು, ತೋಟಗಾರಿಕೆ ಬೆಳೆಗಳಲ್ಲಿ ಪರಿಣಿತಿ ಪಡೆದಿದ್ದ ಎಂ.ಎಚ್​.ಪನ್ವಾರ್​ 1964ರಲ್ಲಿ ಈ ಫಾರ್ಮ್​ ನಿರ್ಮಿಸಿದ್ದು, ಇದು ತುಂಬ ಖ್ಯಾತಿ ಪಡೆದ ಫಾರ್ಮ್ ಆಗಿದೆ.

ಸಿಂಧ್‌ನ ತಾಂಡೋ ಅಲ್ಲಾಹಾರ್‌ನ ಖಾಸಗಿ ಕೃಷಿ ಫಾರ್ಮ್‌ನಲ್ಲಿ ಮಾವಿನ ವೈಜ್ಞಾನಿಕ ಮಾರ್ಪಾಡಿನ ನಂತರ ಪಾಕಿಸ್ತಾನದ ಮಾರುಕಟ್ಟೆಗಳಲ್ಲಿ ಈ ಸಕ್ಕರೆ ಮುಕ್ತ ಮಾವಿನ ಹಣ್ಣುಗಳನ್ನು ಪರಿಚಯಿಸಲಾಗಿದೆ. ಮೂರು ತಳಿಗಳಿಗೆ ಒಂದೊಂದು ಹೆಸರಿಡಲಾಗಿದ್ದು, ಒಂದು ಸೋನಾರೋ ಮಾವು, ಮತ್ತೊಂದು ಗ್ಲೆನ್​ ಮತ್ತು ಇನ್ನೊಂದು ಕೀಟ್ ಮಾವು.

ಈ ಹೊಸಬಗೆಯ ಮಾವಿನ ಹಣ್ಣುಗಳನ್ನು ಪರಿಚಯಿಸಿದ ಗುಲಾಮ್​ ಸರ್ವಾರ್​, ಎಂ.ಎಚ್​.ಪನ್ವಾರ್​ ಅವರ ಹತ್ತಿರದ ಸಂಬಂಧಿ. ಪನ್ವಾರ್​ ಸಾವಯವ ಕೃಷಿಯಲ್ಲಿ ಅದ್ಭುತ ಸಾಧನೆ ಮಾಡಿದ್ದರು. ಹಣ್ಣು ಮತ್ತಿತರ ಬೆಳೆಗಳ ಬಗ್ಗೆ ತುಂಬ ಸಂಶೋಧನೆಯನ್ನೂ ಮಾಡಿದವರಾಗಿದ್ದರು. ಈಗ ಅದೇ ಫಾರ್ಮ್​​ನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಗುಲಾಮ್ ಸಹ ಒಂದು ಹೊಸ ಪ್ರಯೋಗ ಮಾಡಿದ್ದಾರೆ. ಹಾಗೇ, ಸಕ್ಕರೆ ಮುಕ್ತ ಮಾವಿನ ತಳಿಯನ್ನು ಅಭಿವೃದ್ಧಿ ಪಡಿಸಲು, ಅದಕ್ಕೆ ಸಂಬಂಧಪಟ್ಟ ವೈಜ್ಞಾನಿಕ ರೂಪಾಂತರಗಳ ಮಾಡಲು 5 ವರ್ಷ ಬೇಕಾಯಿತು ಎಂದವರು ತಿಳಿಸಿದ್ದಾರೆ.

ಹಾಗಂತ ಈ ಸಕ್ಕರೆ ಮುಕ್ತ ಮಾವಿನಹಣ್ಣುಗಳು ದುಬಾರಿಯಲ್ಲ. ಕೈಗೆಟಕುವ ದರವನ್ನೇ ನಿಗದಿಪಡಿಸಲಾಗಿದೆ. ಪಾಕಿಸ್ತಾನದ ಮಾರುಕಟ್ಟೆಗಳಲ್ಲಿ ಕೆಜಿಗೆ 150 ರೂ.ಪಾಕಿಸ್ತಾನ ಕರೆನ್ಸಿ ಅಂದರೆ, ಭಾರತರ ಕರೆನ್ಸಿ ಪ್ರಕಾರ ಕೆಜಿಗೆ 70 ರೂ. ಆಗಿದೆ. ಗುಲಾಮ್​ ಅವರು ಈ ಮಾವಿನ ತಳಿಗಳ ಅಭಿವೃದ್ಧಿಗೆ ಸರ್ಕಾರದಿಂದ ನೆರವು ಪಡೆಯಲಿಲ್ಲ. ವೈಯಕ್ತಿಕವಾಗಿಯೇ ಖರ್ಚು ನಿಭಾಯಿಸಿದ್ದಾರೆ. ಈ ಮೂರರಲ್ಲಿ ಕೀಟ್​ ತಳಿಯ ಮಾವಿನಹಣ್ಣುಗಳಲ್ಲಿ, ಶೇ.4.7, ಸೊನಾರೊದಲ್ಲಿ ಶೇ.5.6 ಮತ್ತು ಗ್ಲೆನ್​​ನಲ್ಲಿ ಶೇ.6ರಷ್ಟು ಮಾತ್ರ ಸಕ್ಕರೆ ಅಂಶ ಇದೆ ಎಂದು ಗುಲಾಮ್ ತಿಳಿಸಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಹೆಸರು ಬದಲಿಸುವಂತೆ ಸಿಎಂ ಯಡಿಯೂರಪ್ಪಗೆ ನಂಜಾವಧೂತ ಸ್ವಾಮೀಜಿ

Sugar free mangoes for diabetic people In Pakistan

ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು