Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​​ನಿಂದ ಜಗತ್ತೇ ಕಂಗೆಟ್ಟಿದೆ, ಆದ್ರೆ ಇಲ್ಲೊಬ್ಬ ರಾತ್ರೋರಾತ್ರಿ ಕರೋಡ್​ಪತಿ ಆಗಿಬಿಟ್ಟ!

ಅದೃಷ್ಟ ಅನ್ನೋದು ಯಾವಾಗ, ಹೇಗೆ ಬರುತ್ತೆ ಅಂತಾ ಹೇಳೋಕೆ ಆಗಲ್ಲ. ಕೊರೊನಾ ಲಾಕ್​ಡೌನ್​​ನಿಂದ ಇಡೀ ಜಗತ್ತೇ ಆರ್ಥಿಕ ಹೊಡೆತದಿಂದ ಕಂಗೆಟ್ಟಿದೆ. ಇಂಥಾ ಟೈಮಲ್ಲಿ ತಾಂಜೇನಿಯಾದ ಗಣಿಗಾರಿಕೆ ವ್ಯಕ್ತಿಯೋರ್ವ, ರಾತ್ರೋ ರಾತ್ರಿ 30 ಲಕ್ಷದ 33 ಸಾವಿರ ಅಮೆರಿಕನ್ ಡಾಲರ್​ ಅಂದ್ರೆ ಸುಮಾರು 25 ಕೋಟಿ ರೂ. ಸಂಪಾದಿಸುವ ಮೂಲಕ ಕರೋಡ್ ಪತಿಯಾಗಿದ್ದಾನೆ. ಈಸ್ಟ್ ಆಫ್ರಿಕಾದಲ್ಲಿ ಸೈನಿನು ಲೈಜರ್​ಗೆ ಎರಡು ಜೆಮ್ಸ್ ಕಲ್ಲುಗಳು ಸಿಕ್ಕಿದ್ದಕ್ಕೆ ಗಣಿ ಖಾತೆ ಸಚಿವರೇ ಚೆಕ್ ವಿತರಿಸಿದ್ದಾರೆ. ಹಳಿ ಮೇಲೆ ಹೆರಿಗೆ ಕೊರೊನಾದಿಂದಾಗಿ ಅಲ್ಲಲ್ಲಿ […]

ಲಾಕ್​ಡೌನ್​​ನಿಂದ ಜಗತ್ತೇ ಕಂಗೆಟ್ಟಿದೆ, ಆದ್ರೆ ಇಲ್ಲೊಬ್ಬ ರಾತ್ರೋರಾತ್ರಿ ಕರೋಡ್​ಪತಿ ಆಗಿಬಿಟ್ಟ!
Follow us
ಸಾಧು ಶ್ರೀನಾಥ್​
|

Updated on:Jun 27, 2020 | 5:44 PM

ಅದೃಷ್ಟ ಅನ್ನೋದು ಯಾವಾಗ, ಹೇಗೆ ಬರುತ್ತೆ ಅಂತಾ ಹೇಳೋಕೆ ಆಗಲ್ಲ. ಕೊರೊನಾ ಲಾಕ್​ಡೌನ್​​ನಿಂದ ಇಡೀ ಜಗತ್ತೇ ಆರ್ಥಿಕ ಹೊಡೆತದಿಂದ ಕಂಗೆಟ್ಟಿದೆ. ಇಂಥಾ ಟೈಮಲ್ಲಿ ತಾಂಜೇನಿಯಾದ ಗಣಿಗಾರಿಕೆ ವ್ಯಕ್ತಿಯೋರ್ವ, ರಾತ್ರೋ ರಾತ್ರಿ 30 ಲಕ್ಷದ 33 ಸಾವಿರ ಅಮೆರಿಕನ್ ಡಾಲರ್​ ಅಂದ್ರೆ ಸುಮಾರು 25 ಕೋಟಿ ರೂ. ಸಂಪಾದಿಸುವ ಮೂಲಕ ಕರೋಡ್ ಪತಿಯಾಗಿದ್ದಾನೆ. ಈಸ್ಟ್ ಆಫ್ರಿಕಾದಲ್ಲಿ ಸೈನಿನು ಲೈಜರ್​ಗೆ ಎರಡು ಜೆಮ್ಸ್ ಕಲ್ಲುಗಳು ಸಿಕ್ಕಿದ್ದಕ್ಕೆ ಗಣಿ ಖಾತೆ ಸಚಿವರೇ ಚೆಕ್ ವಿತರಿಸಿದ್ದಾರೆ.

ಹಳಿ ಮೇಲೆ ಹೆರಿಗೆ ಕೊರೊನಾದಿಂದಾಗಿ ಅಲ್ಲಲ್ಲಿ ಲಾಕ್​ ಆಗಿದ್ದ ಕಾರ್ಮಿಕರಿಗೆ ಶ್ರಮಿಕ್ ರೈಲಿನ ಮೂಲಕ ಹುಟ್ಟೂರಿನತ್ತ ಸೇರಿಸಲಾಗ್ತಿದೆ. ಆದ್ರೆ, ಇದೇ ಟೈಮಲ್ಲಿ ಗರ್ಭಿಣಿಯೊಬ್ಬರು ಸಂಚರಿಸುತ್ತಿದ್ದ ರೈಲಿನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 32 ವರ್ಷದ ಸೈರಾ ಫಾತಿಮಾ ಒಡಿಶಾದ ಖುರ್ದಾ ರಸ್ತೆ ಮಾರ್ಗದಲ್ಲಿ ಸಂಚರಿಸುವಾಗ ರೈಲಿನಲ್ಲಿ ಜನ್ಮ ನೀಡಿದ್ದು, ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿರೋದಾಗಿ ರೈಲ್ವೆ ಸಚಿವ ಪಿಯೂಷ್ ಘೋಯಲ್ ಹೇಳಿದ್ದಾರೆ.

ಕೃಷಿ ದಂಪತಿ ಗಾನ ಖುಷಿ ಕಲೆ ಎಲ್ಲರನ್ನ ಕೈ ಬೀಸಿ ಕರೆಯುತ್ತೆ ಆದ್ರೆ ಕೆಲವರನ್ನ ಮಾತ್ರ ಆಯ್ಕೆ ಮಾಡಿಕೊಳ್ಳುತ್ತೆ ಅನ್ನೋ ಮಾತಿದೆ. ಆದ್ರೆ, ಪಂಜಾಬ್​ನ ಗ್ರಾಮವೊಂದರ ಈ ಕೃಷಿ ದಂಪತಿ 1962ರಲ್ಲಿ ರಿಲೀಸ್ ಆದ ಪ್ರೊಫೆಷರ್​ ಸಿನಿಮಾದ ‘ಆವಾಜ್ ದೇಖೇ ಹಮೇ ತುಮ್ ಬುಲಾವೋ..’ ಹಾಡನ್ನ ಹೊಲದ ಬಳಿ ಇಬ್ಬರೂ ಹಾಡಿದ್ದಾರೆ. ಇವರ ಗಾನಸುಧೆಗೆ ಗಾಯಕಿ ರೇಖಾ ಭಾರಧ್ವಜ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಗುಲ್ ಪನಾಗ್​ ಪುತ್ರನ ಸ್ಟೆಪ್ಸ್ ಬಿಟೌನ್ ನಟಿ ಗುಲ್ ಪನಾಗ್ ಮನೆಯಲ್ಲಿ ವರ್ಕೌಟ್ ಮಾಡ್ತಿದ್ದು, ಮಗನ ಜೊತೆ ಸೇರಿ ಡ್ಯಾನ್ಸ್ ಕೂಡ ಮಾಡ್ತಿದ್ದಾರೆ. 2 ವರ್ಷದ ನಿಹಾಲ್​ ಅಮೆರಿಕದ ರಾಕ್ ಬಾಂಡ್​ರ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ನಿಹಾಲ್​ ಕೆಲ ಅಚ್ಚುಮೆಚ್ಚಿನ ಹಾಡುಗಳಿಗೆ ಮಾತ್ರ ಸ್ಟೆಪ್ಸ್ ಹಾಕ್ತಾನಂತೆ. ಇನ್​ಸ್ಟಾಗ್ರಾಮ್​ನಲ್ಲಿ ನಟಿ ವಿಡಿಯೋ ಷೇರ್ ಮಾಡಿದ್ದು, ಸಿಕ್ಕಾಪಟ್ಟೆ ಹಲ್​ಚಲ್ ಎಬ್ಬಿಸಿದೆ.

ಡೆಲಿವರಿ ಮಹಿಳೆಯ ಮ್ಯಾರಥಾನ್ ಆನ್​ಲೈನ್​ನಲ್ಲಿ ಐಟಮ್ಸ್ ಡೆಲಿವರಿ ಮಾಡಲು ನಾನಾ ಆಫರ್​ಗಳನ್ನ ಕಂಪನಿಯವರು ನೀಡ್ತಾರೆ. ಆದ್ರೆ, ಇಲ್ಲೊಬ್ಬ ಬಾಲಕ ಡೆಲಿವರಿ ಮಹಿಳೆಗೆ ಒಂದು ಸವಾಲ್ ಹಾಕಿದ್ದ. ಮನೆಯ ಹತ್ತಿರ ಡೆಲಿವರಿ ತಂದ ಮೇಲೆ, ಮೂರು ಬಾರಿ ಡೋರ್ ಬಡಿದು, ಅಬರಕ ಡಬರಾ ಅಂತಾ ಹೇಳಿ ಓಡಿ ಹೋಗಬೇಕು ಅಂತಾ. ಬಾಲಕನ ಸವಾಲು ಸ್ವೀಕರಿಸಿದ ಅಮೇಜನ್ ಡೆಲಿವರಿ ಮಹಿಳೆ, ಬಾಗಿಲು ಬಡಿದು ಮ್ಯಾರಥಾನ್​ನಂತೆ ಓಡಿದ್ದು, ಸದ್ಯ ಈ ವಿಡಿಯೋ ವೈರಲ್ ಆಗ್ತಿದೆ.

Published On - 5:41 pm, Sat, 27 June 20

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್