ಟರ್ಕಿಯಲ್ಲಿ ಸಿಕತ ಮಾರುತದ ಅಬ್ಬರ.. ಆರು ಜನರಿಗೆ ಗಾಯ, ಜನಜೀವನ ಅಸ್ತವ್ಯಸ್ತ

ಟರ್ಕಿ ದೇಶದ ರಾಜಧಾನಿ ಅಂಕಾರಾಗೆ ಕಳೆದ ಶನಿವಾರದಂದು ಸಿಕತ ಮಾರುತ (Sandstorm) ಅಪ್ಪಳಿಸಿದ್ದು ದೈನಂದಿನ ಜನಜೀವನದ ಮೇಲೆ ಪರಿಣಾಮ ಬೀರಿದೆ. ನಗರದಲ್ಲಿ ಬೀಸಿದ ಮರಳಿನ ಬಿರುಗಾಳಿಯ ಪರಿಣಾಮವಾಗಿ ಆರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸದ್ಯ, ಪ್ರಾಣ ಹಾಗೂ ಆಸ್ತಿಪಾಸ್ತಿ ನಷ್ಟದ ಬಗ್ಗೆ ಯಾವುದೇ ವರದಿಯಾಗಿಲ್ಲ. ಕಳೆದ ತಿಂಗಳ ಅಂತ್ಯದಿಂದ ರಾಜಧಾನಿಯಲ್ಲಿ 1,600 ಜಿಎಂಟಿ ವರೆಗೆ ಮರಳಿನ ಬಿರುಗಾಳಿ ಹಾಗೂ ಧಾರಾಕಾರ ಮಳೆ ಮುಂದುವರೆದಿದೆ. ಮರಳಿನ ಬಿರುಗಾಳಿ ಮೊದಲು ಅಂಕಾರಾದ ಪೋಲಾಟ್ಲಿ ಜಿಲ್ಲೆಯನ್ನು ಅಪ್ಪಳಿಸಿದ್ದು ನಂತರ ಇಡೀ […]

ಟರ್ಕಿಯಲ್ಲಿ ಸಿಕತ ಮಾರುತದ ಅಬ್ಬರ.. ಆರು ಜನರಿಗೆ ಗಾಯ, ಜನಜೀವನ ಅಸ್ತವ್ಯಸ್ತ
ಸಾಧು ಶ್ರೀನಾಥ್​ Edited By:

Updated on: Sep 13, 2020 | 3:14 PM

ಟರ್ಕಿ ದೇಶದ ರಾಜಧಾನಿ ಅಂಕಾರಾಗೆ ಕಳೆದ ಶನಿವಾರದಂದು ಸಿಕತ ಮಾರುತ (Sandstorm) ಅಪ್ಪಳಿಸಿದ್ದು ದೈನಂದಿನ ಜನಜೀವನದ ಮೇಲೆ ಪರಿಣಾಮ ಬೀರಿದೆ. ನಗರದಲ್ಲಿ ಬೀಸಿದ ಮರಳಿನ ಬಿರುಗಾಳಿಯ ಪರಿಣಾಮವಾಗಿ ಆರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸದ್ಯ, ಪ್ರಾಣ ಹಾಗೂ ಆಸ್ತಿಪಾಸ್ತಿ ನಷ್ಟದ ಬಗ್ಗೆ ಯಾವುದೇ ವರದಿಯಾಗಿಲ್ಲ. ಕಳೆದ ತಿಂಗಳ ಅಂತ್ಯದಿಂದ ರಾಜಧಾನಿಯಲ್ಲಿ 1,600 ಜಿಎಂಟಿ ವರೆಗೆ ಮರಳಿನ ಬಿರುಗಾಳಿ ಹಾಗೂ ಧಾರಾಕಾರ ಮಳೆ ಮುಂದುವರೆದಿದೆ. ಮರಳಿನ ಬಿರುಗಾಳಿ ಮೊದಲು ಅಂಕಾರಾದ ಪೋಲಾಟ್ಲಿ ಜಿಲ್ಲೆಯನ್ನು ಅಪ್ಪಳಿಸಿದ್ದು ನಂತರ ಇಡೀ ರಾಜಧಾನಿಯನ್ನು ಆವರಿಸಿಕೊಂಡುಬಿಟ್ಟಿತು ಎಂದು ಹೇಳಲಾಗಿದೆ.

ಇಡೀ, ಜಿಲ್ಲೆ ಧೂಳಿನ ಮೋಡದಿಂದ ಆವೃತವಾಗಿದ್ದು ಸಿಡಿಲಿನ ಬಡಿತದಿಂದಾಗಿ ಸಣ್ಣ ಪ್ರಮಾಣದ ಬೆಂಕಿ ಸಹ ಕಾಣಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us