AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೃತ ವೃದ್ಧನ ಮನೆಯನ್ನ ದರೋಡೆ ಮಾಡಿದ ಪೊಲೀಸ್​ ಅಧಿಕಾರಿ ಅರೆಸ್ಟ್

ಮೃತ ವೃದ್ಧನ ಮನೆಯಲ್ಲಿ ಪೊಲೀಸ್​ ಅಧಿಕಾರಿಯೊಬ್ಬ ದರೋಡೆ ಮಾಡಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಆರೆಂಜ್​ ಕೌಂಟಿಯಲ್ಲಿ ಬೆಳಕಿಗೆ ಬಂದಿದೆ. ಪೊಲೀಸ್​ ಇಲಾಖೆಯಲ್ಲಿ ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಅಧಿಕಾರಿ ಸ್ಟೀವ್ ಹೋರ್ಟ್ಸ್​ ಕೆಲವು ದಿನಗಳ ಹಿಂದೆ ಗಸ್ತು ತಿರುಗುವ ವೇಳೆ ತನ್ನ ಏರಿಯಾದಲ್ಲಿ ವೃದ್ಧನೊಬ್ಬ ಸಾವನ್ನಪ್ಪಿರೋ ಘಟನೆ ವರದಿಯಾಗಿತ್ತು. ಈ ವೇಳೆ ಮೃತನ ಮನೆಗೆ ಭೇಟಿಕೊಟ್ಟಿದ್ದ ಅಧಿಕಾರಿಗೆ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳ ಮೇಲೆ ಕಣ್ಣುಬಿದ್ದಿದೆ. ಹಾಗಾಗಿ, ಮೃತನ ಕುಟುಂಬದವರ ಬಗ್ಗೆ ವಿಚಾರಿಸಿದ್ದಾನೆ. ವೃದ್ಧನಿಗೆ ಕುಟುಂಬಸ್ಥರು […]

ಮೃತ ವೃದ್ಧನ ಮನೆಯನ್ನ ದರೋಡೆ ಮಾಡಿದ ಪೊಲೀಸ್​ ಅಧಿಕಾರಿ ಅರೆಸ್ಟ್
KUSHAL V
|

Updated on:Sep 13, 2020 | 6:42 PM

Share

ಮೃತ ವೃದ್ಧನ ಮನೆಯಲ್ಲಿ ಪೊಲೀಸ್​ ಅಧಿಕಾರಿಯೊಬ್ಬ ದರೋಡೆ ಮಾಡಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಆರೆಂಜ್​ ಕೌಂಟಿಯಲ್ಲಿ ಬೆಳಕಿಗೆ ಬಂದಿದೆ.

ಪೊಲೀಸ್​ ಇಲಾಖೆಯಲ್ಲಿ ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಅಧಿಕಾರಿ ಸ್ಟೀವ್ ಹೋರ್ಟ್ಸ್​ ಕೆಲವು ದಿನಗಳ ಹಿಂದೆ ಗಸ್ತು ತಿರುಗುವ ವೇಳೆ ತನ್ನ ಏರಿಯಾದಲ್ಲಿ ವೃದ್ಧನೊಬ್ಬ ಸಾವನ್ನಪ್ಪಿರೋ ಘಟನೆ ವರದಿಯಾಗಿತ್ತು. ಈ ವೇಳೆ ಮೃತನ ಮನೆಗೆ ಭೇಟಿಕೊಟ್ಟಿದ್ದ ಅಧಿಕಾರಿಗೆ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳ ಮೇಲೆ ಕಣ್ಣುಬಿದ್ದಿದೆ.

ಹಾಗಾಗಿ, ಮೃತನ ಕುಟುಂಬದವರ ಬಗ್ಗೆ ವಿಚಾರಿಸಿದ್ದಾನೆ. ವೃದ್ಧನಿಗೆ ಕುಟುಂಬಸ್ಥರು ಇಲ್ಲ ಎಂದು ತಿಳಿದ ಸ್ಟೀವ್​ ಕೆಲವು ದಿನಗಳ ಬಳಿಕ ರಾತ್ರಿವೇಳೆ ಮೃತನ ಮನೆಗೆ ಎಂಟ್ರಿ ಕೊಟ್ಟು ಮನೆಯಲ್ಲಿದ್ದ ಬಂದೂಕು ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಹೊತ್ತೊಯ್ದಿದ್ದಾನೆ. ಮನೆಯಲ್ಲಿದ್ದ ಸೀಲಿಂಗ್​ ಫ್ಯಾನ್​ ಸಹ ಬಿಟ್ಟಿಲ್ಲವಂತೆ.

ಆದರೆ, ದುರದೃಷ್ಟಕ್ಕೆ ಪೊಲೀಸಪ್ಪನ ಕುಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿಬಿಟ್ಟಿದೆ. ಇನ್ನೂ ಈತನ ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಆತನ ಇಲಾಖೆಯವರೇ ಸ್ಟೀವ್​ನ ಬಂಧಿಸಿದ್ದಾರೆ. ಒಟ್ನಲ್ಲಿ, ಪೊಲೀಸ್​ ಅಧಿಕಾರಿ ವರ್ತನೆಯಿಂದ ಬೇಲಿಯೇ ಎದ್ದು ಹೊಲ ಮೇಯ್ದಿದೆ ಅಂತಾ ಜನರು ಮಾತನಾಡಿಕೊಂಡಿದ್ದಾರೆ.

Published On - 6:37 pm, Sun, 13 September 20

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ