AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೃತ ವೃದ್ಧನ ಮನೆಯನ್ನ ದರೋಡೆ ಮಾಡಿದ ಪೊಲೀಸ್​ ಅಧಿಕಾರಿ ಅರೆಸ್ಟ್

ಮೃತ ವೃದ್ಧನ ಮನೆಯಲ್ಲಿ ಪೊಲೀಸ್​ ಅಧಿಕಾರಿಯೊಬ್ಬ ದರೋಡೆ ಮಾಡಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಆರೆಂಜ್​ ಕೌಂಟಿಯಲ್ಲಿ ಬೆಳಕಿಗೆ ಬಂದಿದೆ. ಪೊಲೀಸ್​ ಇಲಾಖೆಯಲ್ಲಿ ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಅಧಿಕಾರಿ ಸ್ಟೀವ್ ಹೋರ್ಟ್ಸ್​ ಕೆಲವು ದಿನಗಳ ಹಿಂದೆ ಗಸ್ತು ತಿರುಗುವ ವೇಳೆ ತನ್ನ ಏರಿಯಾದಲ್ಲಿ ವೃದ್ಧನೊಬ್ಬ ಸಾವನ್ನಪ್ಪಿರೋ ಘಟನೆ ವರದಿಯಾಗಿತ್ತು. ಈ ವೇಳೆ ಮೃತನ ಮನೆಗೆ ಭೇಟಿಕೊಟ್ಟಿದ್ದ ಅಧಿಕಾರಿಗೆ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳ ಮೇಲೆ ಕಣ್ಣುಬಿದ್ದಿದೆ. ಹಾಗಾಗಿ, ಮೃತನ ಕುಟುಂಬದವರ ಬಗ್ಗೆ ವಿಚಾರಿಸಿದ್ದಾನೆ. ವೃದ್ಧನಿಗೆ ಕುಟುಂಬಸ್ಥರು […]

ಮೃತ ವೃದ್ಧನ ಮನೆಯನ್ನ ದರೋಡೆ ಮಾಡಿದ ಪೊಲೀಸ್​ ಅಧಿಕಾರಿ ಅರೆಸ್ಟ್
KUSHAL V
|

Updated on:Sep 13, 2020 | 6:42 PM

Share

ಮೃತ ವೃದ್ಧನ ಮನೆಯಲ್ಲಿ ಪೊಲೀಸ್​ ಅಧಿಕಾರಿಯೊಬ್ಬ ದರೋಡೆ ಮಾಡಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಆರೆಂಜ್​ ಕೌಂಟಿಯಲ್ಲಿ ಬೆಳಕಿಗೆ ಬಂದಿದೆ.

ಪೊಲೀಸ್​ ಇಲಾಖೆಯಲ್ಲಿ ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಅಧಿಕಾರಿ ಸ್ಟೀವ್ ಹೋರ್ಟ್ಸ್​ ಕೆಲವು ದಿನಗಳ ಹಿಂದೆ ಗಸ್ತು ತಿರುಗುವ ವೇಳೆ ತನ್ನ ಏರಿಯಾದಲ್ಲಿ ವೃದ್ಧನೊಬ್ಬ ಸಾವನ್ನಪ್ಪಿರೋ ಘಟನೆ ವರದಿಯಾಗಿತ್ತು. ಈ ವೇಳೆ ಮೃತನ ಮನೆಗೆ ಭೇಟಿಕೊಟ್ಟಿದ್ದ ಅಧಿಕಾರಿಗೆ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳ ಮೇಲೆ ಕಣ್ಣುಬಿದ್ದಿದೆ.

ಹಾಗಾಗಿ, ಮೃತನ ಕುಟುಂಬದವರ ಬಗ್ಗೆ ವಿಚಾರಿಸಿದ್ದಾನೆ. ವೃದ್ಧನಿಗೆ ಕುಟುಂಬಸ್ಥರು ಇಲ್ಲ ಎಂದು ತಿಳಿದ ಸ್ಟೀವ್​ ಕೆಲವು ದಿನಗಳ ಬಳಿಕ ರಾತ್ರಿವೇಳೆ ಮೃತನ ಮನೆಗೆ ಎಂಟ್ರಿ ಕೊಟ್ಟು ಮನೆಯಲ್ಲಿದ್ದ ಬಂದೂಕು ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಹೊತ್ತೊಯ್ದಿದ್ದಾನೆ. ಮನೆಯಲ್ಲಿದ್ದ ಸೀಲಿಂಗ್​ ಫ್ಯಾನ್​ ಸಹ ಬಿಟ್ಟಿಲ್ಲವಂತೆ.

ಆದರೆ, ದುರದೃಷ್ಟಕ್ಕೆ ಪೊಲೀಸಪ್ಪನ ಕುಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿಬಿಟ್ಟಿದೆ. ಇನ್ನೂ ಈತನ ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಆತನ ಇಲಾಖೆಯವರೇ ಸ್ಟೀವ್​ನ ಬಂಧಿಸಿದ್ದಾರೆ. ಒಟ್ನಲ್ಲಿ, ಪೊಲೀಸ್​ ಅಧಿಕಾರಿ ವರ್ತನೆಯಿಂದ ಬೇಲಿಯೇ ಎದ್ದು ಹೊಲ ಮೇಯ್ದಿದೆ ಅಂತಾ ಜನರು ಮಾತನಾಡಿಕೊಂಡಿದ್ದಾರೆ.

Published On - 6:37 pm, Sun, 13 September 20

Follow Us
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್