ಭಾರತದ ವಿಮಾನ ಪ್ರಯಾಣಿಕರಿಗೆ ನಿಷೇಧ ತೆಗೆದುಹಾಕಿದ ಯುಎಇ; ದುಬೈಗೆ ಪ್ರಯಾಣಿಸಲು ಮಾರ್ಗಸೂಚಿ ಇಲ್ಲಿದೆ

UAE: ಎಲ್ಲಾ ಪ್ರಯಾಣಿಕರು ಅಬುಧಾಬಿಯನ್ನು ತಲುಪಿದ ನಂತರ ಕಡ್ಡಾಯವಾಗಿ 10 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕು. ಹೆಚ್ಚುವರಿಯಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ನೀಡುವ ಕ್ವಾರಂಟೈನ್ ಅವಧಿಯಲ್ಲಿ ಪ್ರಯಾಣಿಕರು ವೈದ್ಯಕೀಯವಾಗಿ ಅನುಮೋದಿತ ಟ್ರ್ಯಾಕಿಂಗ್ ರಿಸ್ಟ್ ಬ್ಯಾಂಡ್ ಧರಿಸಬೇಕು

ಭಾರತದ ವಿಮಾನ ಪ್ರಯಾಣಿಕರಿಗೆ ನಿಷೇಧ ತೆಗೆದುಹಾಕಿದ ಯುಎಇ; ದುಬೈಗೆ ಪ್ರಯಾಣಿಸಲು ಮಾರ್ಗಸೂಚಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Edited By: ರಶ್ಮಿ ಕಲ್ಲಕಟ್ಟ

Updated on: Aug 11, 2021 | 12:04 PM

ದೆಹಲಿ: ಯುನೈಟೆಡ್ ಅರಬ್ ಆಫ್ ಎಮಿರೇಟ್ಸ್ (UAE) ಭಾರತದಿಂದ ವಿಮಾನ ಮೂಲಕ ಪ್ರಯಾಣಿಸುವ ಪ್ರಯಾಣಿಕರ ಮೇಲಿನ ನಿಷೇಧವನ್ನು ತೆಗೆದುಹಾಕಿದ್ದು, ಇದು ಎರಡು ದೇಶಗಳ ನಡುವೆ ಹೆಚ್ಚಿನ ವಿಮಾನ ಸೇವೆಗಳನ್ನು ಸುಗಮಗೊಳಿಸಿದೆ. ಸಾಂಕ್ರಾಮಿಕ ರೋಗದ ಎರಡನೇ ಅಲೆಯಿಂದ ಮಧ್ಯಪ್ರಾಚ್ಯ ರಾಷ್ಟ್ರಕ್ಕೆ ಮೊದಲ ವಿಮಾನ ಶುಕ್ರವಾರ ಬೆಳಿಗ್ಗೆ ಗೋವಾ ವಿಮಾನ ನಿಲ್ದಾಣದಿಂದ ಹೊರಡಲಿದೆ. ಬಜೆಟ್ ಕ್ಯಾರಿಯರ್ ಇಂಡಿಗೋ ರಾಷ್ಟ್ರೀಯ ರಾಜಧಾನಿ ಪ್ರದೇಶದಿಂದ (NCR) ದುಬೈಗೆ ತೆರಳುವ ವಿಮಾನಗಳ ವೇಳಾಪಟ್ಟಿಯನ್ನು ನೀಡಿದೆ. ಆದಾಗ್ಯೂ, ಎಲ್ಲಾ ಪ್ರಯಾಣಿಕರಿಗೆ ಭಾರತದಿಂದ ದುಬೈಗೆ ಪ್ರಯಾಣಿಸಲು ಸಾಧ್ಯವಿಲ್ಲ, ಪ್ರಸ್ತುತ ಭಾರತದಿಂದ ಯುಎಇ ನಿವಾಸಿಗಳಿಗೆ ಮಾತ್ರ ದುಬೈಗೆ ಪ್ರಯಾಣಿಸಲು ಅನುಮತಿ ಇದೆ.

ಈ ಬಗ್ಗೆ ಟ್ವೀಟ್ ಮಾಡಿದ ಇಂಡಿಗೋ ಪ್ರಯಾಣವನ್ನು ಸುರಕ್ಷಿತವಾಗಿಸಲು ಸಹಾಯ ಮಾಡಲು ನಿಮ್ಮ #SuperHabits ಅನ್ನು ಯಾವಾಗಲೂ ಅಭ್ಯಾಸ ಮಾಡಿ ಎಂದಿದೆ. ಇಂಡಿಗೋ ಯುಎಇಗೆ ಹೋಗುವ ಮೂರು ವಿಮಾನಗಳನ್ನು ಘೋಷಿಸಿದೆ. ಈ ತಿಂಗಳು ದೆಹಲಿಯಿಂದ ದುಬೈಗೆ ಎರಡು ಆಗಸ್ಟ್ 9 ಮತ್ತು ಆಗಸ್ಟ್ 10 ರಂದು, ದುಬೈನಿಂದ ಒಂದು ವಿಮಾನ ಆಗಸ್ಟ್ 10 ರಂದು ಪ್ರಯಾಣಿಸುವುದಾಗಿ ಸಂಸ್ಥೆ ಹೇಳಿದೆ.


ನ್ಯಾಷನಲ್ ಎಮರ್ಜೆನ್ಸಿ ಅಂಡ್ ಕ್ರೈಸಿಸ್ ಮ್ಯಾನೇಜ್‌ಮೆಂಟ್ ಅಥಾರಿಟಿ (NCEMA) ಯುಎಇ ಹೊರಡಿಸಿದ ಇತ್ತೀಚಿನ ಪ್ರಯಾಣ ಮಾರ್ಗಸೂಚಿಗಳನ್ನು ಅಪ್‌ಡೇಟ್ ಮಾಡಿದೆ. ಅದರ ಪ್ರಕಾರ ಯುಎಇಯಲ್ಲಿ ಪೂರ್ಣ ವ್ಯಾಕ್ಸಿನೇಷನ್ ಡೋಸ್ ಪಡೆದ ಮಾನ್ಯ ರೆಸಿಡೆನ್ಸಿ ಪರ್ಮಿಟ್ ಹೊಂದಿರುವವರು ಮತ್ತು ಎರಡನೇ ಡೋಸ್ ಪಡೆದ ನಂತರ 14 ದಿನಗಳು ಕಳೆದವರಿಗೆ ಪ್ರಯಾಣಿಸಬಹುದು.


ಎಲ್ಲಾ ಪ್ರಯಾಣಿಕರು ಅಬುಧಾಬಿಯನ್ನು ತಲುಪಿದ ನಂತರ ಕಡ್ಡಾಯವಾಗಿ 10 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕು. ಹೆಚ್ಚುವರಿಯಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ನೀಡುವ ಕ್ವಾರಂಟೈನ್ ಅವಧಿಯಲ್ಲಿ ಪ್ರಯಾಣಿಕರು ವೈದ್ಯಕೀಯವಾಗಿ ಅನುಮೋದಿತ ಟ್ರ್ಯಾಕಿಂಗ್ ರಿಸ್ಟ್ ಬ್ಯಾಂಡ್ ಧರಿಸಬೇಕು. ಪ್ರಸ್ತುತ, ಭಾರತವು ವಂದೇ ಭಾರತ್ ಮಿಷನ್ ಮತ್ತು ಏರ್ ಬಬಲ್ ಅಡಿಯಲ್ಲಿ ಅನೇಕ ದೇಶಗಳೊಂದಿಗೆ ಅಂತರಾಷ್ಟ್ರೀಯ ವಿಮಾನಗಳನ್ನು ನಿರ್ವಹಿಸುತ್ತಿದೆ. ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ನೈಜೀರಿಯಾ ಮತ್ತು ಉಗಾಂಡಾ ಸೇರಿದಂತೆ ಇನ್ನೂ ಐದು ದೇಶಗಳ ಪ್ರಯಾಣಿಕರ ಪ್ರಯಾಣ ನಿಷೇಧವನ್ನು ಯುಎಇ ತೆಗೆದುಹಾಕಿದೆ. ಭಾರತದಲ್ಲಿ ವಾಣಿಜ್ಯ ಅಂತಾರಾಷ್ಟ್ರೀಯ ವಿಮಾನಗಳು ಸ್ಥಗಿತಗೊಳ್ಳಲಿವೆ.

ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ ಆಗಮಿಸುವ ಪ್ರಯಾಣಿಕರಿಗೆ ದೆಹಲಿಯು ಪ್ರಯಾಣ ನಿರ್ಬಂಧಗಳನ್ನು ಸಡಿಲಗೊಳಿಸಿದೆ. ಹೊಸ ಪ್ರಯಾಣ ಮಾರ್ಗಸೂಚಿಗಳ ಪ್ರಕಾರ, ಮೇಲೆ ತಿಳಿಸಿದ ರಾಜ್ಯಗಳಿಂದ ದೆಹಲಿಗೆ ಬರುವವರು ಇನ್ನು ಮುಂದೆ ಕ ಆರ್‌ಟಿ-ಪಿಸಿಆರ್ ನೆಗೆಟಿವ್ ಪರೀಕ್ಷಾ ವರದಿಯನ್ನು ನೀಡುವ ಅಗತ್ಯವಿಲ್ಲ.

ಇದನ್ನೂ ಓದಿ:  Coronavirus cases in India: ದೇಶದಲ್ಲಿ 38,353 ಹೊಸ ಕೊವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಇಳಿಮುಖ

(United Arab of Emirates UAE lifted the ban for transit travellers from India )

 

Web contact

TV9 Kannada

Read More
Follow Us