ಕೊರೊನಾಗೆ ಅಮೆರಿಕ ತತ್ತರ, ಸೋಂಕಿತರಿಗೆ ತುರ್ತಾಗಿ ಈ ಔಷಧಿ ನೀಡಲು ಸೂಚನೆ

ವಾಷಿಂಗ್ಟನ್: ಜನರ ದೇಹ ಹೊಕ್ಕಿ ಲಕ್ಷ ಲಕ್ಷ ಜನರ ಪ್ರಾಣ ತೆಗೆದ್ರೂ ಹೆಮ್ಮಾರಿ ಕೊರೊನಾ ಕೋಪ ಕಮ್ಮಿಯಾಗಿಲ್ಲ. ಎದುರಿಗಿರೋ ಕೋಟೆಯನ್ನ ಧೂಳಿಪಟ ಮಾಡಿ ಅಟ್ಟಹಾಸ ಮೆರೆಯುತ್ತಿದೆ. ಕ್ರೂರಿ ಕೊರೊನಾಗೆ ವಿಶ್ವದ ದೊಡ್ಡಣ ಅಮೆರಿಕ ಸಹ ತತ್ತರಿಸಿ ಹೋಗಿದೆ. ಅಮರಿಕದಲ್ಲಿ ಕೊರೊನಾ ದಿಂದ ದಿನಕ್ಕೆ ಸಾವಿರಾರು ಜನ ಸಾವಿಗೀಡಾಗುತ್ತಿದ್ದಾರೆ. ಹಾಗಾಗಿ ಕೊರೊನಾದಿಂದ ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ಗೀಲೆಡ್ ಸೈನ್ಸಸ್ ಕಂಪನಿಯ ರೆಮ್‌ಡಿಸಿವಿರ್ ಔಷಧಿ ನೀಡಲು ಅಮೆರಿಕದ FDA(ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್) ಒಪ್ಪಿಗೆ ನೀಡಿದೆ. ರೆಮ್‌ಡಿಸಿವಿರ್ ಔಷಧಿ ಸೇವಿಸಿದ […]

ಕೊರೊನಾಗೆ ಅಮೆರಿಕ ತತ್ತರ, ಸೋಂಕಿತರಿಗೆ ತುರ್ತಾಗಿ ಈ ಔಷಧಿ ನೀಡಲು ಸೂಚನೆ
ಸಾಧು ಶ್ರೀನಾಥ್​

Updated on: May 02, 2020 | 9:26 AM

ವಾಷಿಂಗ್ಟನ್: ಜನರ ದೇಹ ಹೊಕ್ಕಿ ಲಕ್ಷ ಲಕ್ಷ ಜನರ ಪ್ರಾಣ ತೆಗೆದ್ರೂ ಹೆಮ್ಮಾರಿ ಕೊರೊನಾ ಕೋಪ ಕಮ್ಮಿಯಾಗಿಲ್ಲ. ಎದುರಿಗಿರೋ ಕೋಟೆಯನ್ನ ಧೂಳಿಪಟ ಮಾಡಿ ಅಟ್ಟಹಾಸ ಮೆರೆಯುತ್ತಿದೆ. ಕ್ರೂರಿ ಕೊರೊನಾಗೆ ವಿಶ್ವದ ದೊಡ್ಡಣ ಅಮೆರಿಕ ಸಹ ತತ್ತರಿಸಿ ಹೋಗಿದೆ.

ಅಮರಿಕದಲ್ಲಿ ಕೊರೊನಾ ದಿಂದ ದಿನಕ್ಕೆ ಸಾವಿರಾರು ಜನ ಸಾವಿಗೀಡಾಗುತ್ತಿದ್ದಾರೆ. ಹಾಗಾಗಿ ಕೊರೊನಾದಿಂದ ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ಗೀಲೆಡ್ ಸೈನ್ಸಸ್ ಕಂಪನಿಯ ರೆಮ್‌ಡಿಸಿವಿರ್ ಔಷಧಿ ನೀಡಲು ಅಮೆರಿಕದ FDA(ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್) ಒಪ್ಪಿಗೆ ನೀಡಿದೆ.

ರೆಮ್‌ಡಿಸಿವಿರ್ ಔಷಧಿ ಸೇವಿಸಿದ ಶೇಕಡಾ 50 ರಷ್ಟು ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಹೀಗಾಗಿ ಗಂಭೀರ ಸ್ಥಿತಿಯಲ್ಲಿ ಇರುವ ರೋಗಿಗಳಿಗೆ ಐದು ದಿನಗಳ ಕಾಲ ರೆಮ್‌ಡಿಸಿವಿರ್ ಔಷಧಿ ನೀಡಲು ಎಫ್​ಡಿಎ ಒಪ್ಪಿಗೆ ನೀಡಿದೆ. ಇದರಿಂದ ಕ್ರೂರಿ ಕೊರೊನಾದಿಂದ ಮೃತಪಡುವವರ ಸಂಖ್ಯೆ ಇಳಿಕೆಯಾಗುವ ಸಾಧ್ಯತೆ ಇದೆ.

Published On - 9:25 am, Sat, 2 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us