2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.
ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಯುವತಿಯ ಕಿಡ್ನಾಪ್ಗೆ ಯತ್ನ, ಪೊಲೀಸ್-ಜಡ್ಜ್ ಕಾರು ಸೇರಿ ನೂರಾರು ವಾಹನಗಳಿಗೆ ಡಿಕ್ಕಿ!
ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯಲ್ಲಿ ಪ್ರೇಮ ವಿವಾಹವಾಗಿದ್ದ 21 ವರ್ಷದ ಯುವತಿಯನ್ನು ಅಪಹರಿಸಲು ಯತ್ನಿಸಿದ ಆರೋಪಿಗಳು, ಪರಾರಿಯಾಗುವ ವೇಳೆ 35ಕ್ಕೂ ಹೆಚ್ಚು ವಾಹನಗಳು ಹಾಗೂ 100ಕ್ಕೂ ಹೆಚ್ಚು ಬೈಕ್ಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಯುವತಿಯನ್ನು ರಕ್ಷಿಸಿ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
- Shivaprasad B
- Updated on: Sep 17, 2026
- 6:58 am
ಮಲ್ಲತ್ತಹಳ್ಳಿಯಲ್ಲಿ ರಸ್ತೆಗೆ ಉರುಳಿದ ಬೃಹತ್ ಮರ: ನಜ್ಜುಗುಜ್ಜಾದ ಆಟೋ, ರಾಜಧಾನಿಯಲ್ಲಿ ಮಳೆಯ ಅವಾಂತರ
ಬೆಂಗಳೂರಿನಲ್ಲಿ ಸುರಿದ ರಣ ಮಳೆಗೆ ಮಲ್ಲತ್ತಹಳ್ಳಿ ಬಳಿ ಬೃಹತ್ ಮರ ರಸ್ತೆಗೆ ಉರುಳಿ ಬಿದ್ದಿದೆ. ಈ ಘಟನೆಯಲ್ಲಿ ಅಲ್ಲೇ ನಿಲ್ಲಿಸಿದ್ದ ಆಟೋ ರಿಕ್ಷಾ ಜಖಂ ಆಗಿದೆ. ಅದೃಷ್ಟವಶಾತ್ ಆಟೋದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ನಡೆಸಿದರು. ನಗರದಲ್ಲಿ ಮಳೆಯಿಂದಾಗಿ ಹಲವು ಅವಾಂತರಗಳು ಸೃಷ್ಟಿಯಾಗಿವೆ.
- Shivaprasad B
- Updated on: Sep 16, 2026
- 6:00 am
ಗಣೇಶ ಚತುರ್ಥಿ 2026: ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ, ಹೂವು, ಹಣ್ಣು ತುಸು ದುಬಾರಿ
ಗೌರಿ ಗಣೇಶ ಹಬ್ಬ 2026: ಗಣೇಶ ಚತುರ್ಥಿ 2026 ರ ಸಂಭ್ರಮದಲ್ಲಿ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಹೂವು-ಹಣ್ಣುಗಳ ಖರೀದಿ ಭರಾಟೆ ಜೋರಾಗಿದೆ. ಬೆಲೆ ತುಸು ದುಬಾರಿಯಾದರೂ ಸಹ ಗ್ರಾಹಕರು ಲೆಕ್ಕಿಸದೆ ಉತ್ಸಾಹದಿಂದ ಖರೀದಿ ನಡೆಸುತ್ತಿದ್ದಾರೆ. ಒಂದೇ ದಿನ ಗೌರಿ-ಗಣೇಶ ಹಬ್ಬ ಬಂದಿರುವುದರಿಂದ ಸಂಭ್ರಮ ದುಪ್ಪಟ್ಟಾಗಿದೆ. ಹಬ್ಬದ ಸಡಗರ ನಗರದೆಲ್ಲೆಡೆ ಮನೆ ಮಾಡಿದೆ.
- Shivaprasad B
- Updated on: Sep 14, 2026
- 7:00 am
ಇಡಿ ದಾಳಿ ವೇಳೆ PWD ಅಕ್ರಮದ ದಾಖಲೆ ಪತ್ತೆ: ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲಿನ ಇಡಿ ದಾಳಿ ವೇಳೆ ಲೋಕೋಪಯೋಗಿ ಇಲಾಖೆಯ ಅಕ್ರಮದ ದಾಖಲೆಗಳು ಪತ್ತೆಯಾಗಿವೆ. BVEPL ಕಂಪನಿಯಿಂದ ಕಿಕ್ ಬ್ಯಾಕ್ ಪಡೆದ ಆರೋಪದ ಹಿನ್ನೆಲೆಯಲ್ಲಿ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆಗೆ ಅವಕಾಶವಿಲ್ಲದ ಕಾರಣ ಇಡಿ, ಲೋಕಾಯುಕ್ತ ಎಡಿಜಿಪಿಗೆ ಪತ್ರ ಬರೆದು ಪ್ರಕರಣದ ತನಿಖೆಗೆ ಕೋರಲಿದೆ.
- Shivaprasad B
- Updated on: Sep 12, 2026
- 3:42 pm
ಲೋಕೋಪಯೋಗಿ ಇಲಾಖೆಯ ಅಕ್ರಮ, ಲಂಚ ಸಂಗ್ರಹ ದಾಖಲೆ ಪತ್ತೆ: ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಇಡಿ
ಕಳೆದ 2 ದಿನಗಳಿಂದ ಕಾಂಗ್ರೆಸ್ ಪಾಳಯದಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿರೋದು ಇಡಿ ದಾಳಿ. ಸಚಿವ ಸತೀಶ್ ಜಾರಕಿಹೋಳಿ ನಿವಾಸದ ಮೇಲೆ 36 ಗಂಟೆಗೂ ಹೆಚ್ಚು ಕಾಲ ಇಡಿ ಅಧಿಕಾರಿಗಳು ದಾಳಿಯನ್ನು ನಡೆಸಿದರು. ಈ ದಾಳಿಯ ಬಳಿಕ ರಾಜಕೀಯ ಸಮರ ಬಿಜೆಪಿಯ ವಿರುದ್ಧ ಶುರುವಾಗಿದ್ದು, ಬೇರೆ ಬೇರೆ ಕೆಸರೇರಚಾಟಕ್ಕೆ ವೇದಿಕೆಯಾಗಿದೆ. ಇನ್ನೊಂದೆಡೆ ದಾಳಿಯಲ್ಲಿ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಏನೇನು ಪತ್ತೆಯಾಯ್ತು ಎನ್ನುವುದನ್ನು ಸ್ವತಃ ಇಡಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
- Shivaprasad B
- Updated on: Sep 11, 2026
- 10:40 pm
ಟ್ರಾಲಿ ಬ್ಯಾಗ್ನಲ್ಲಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳನ್ನು ವಶಕ್ಕೆ ಪಡೆದ ಡಿಆರ್ಐ ಅಧಿಕಾರಿಗಳು
ಡಿಆರ್ ಐ ಅಧಿಕಾರಿಗಳು ಬೆಂಗಳೂರಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ 180 ಸ್ಟಾರ್ ಆಮೆಗಳನ್ನು ಜಪ್ತಿ ಮಾಡಿದ್ದಾರೆ. ಗಾಂಧಿನಗರದಲ್ಲಿ ಆಪರೇಷನ್ ಕೂರ್ಮಾ ಅಡಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಹಸಿರು ಟ್ರಾಲಿ ಬ್ಯಾಗ್ನಲ್ಲಿ ಬಟ್ಟೆ ಕವರ್ಗಳಲ್ಲಿ ಬಚ್ಚಿಟ್ಟಿದ್ದ ಆಮೆಗಳನ್ನು ಮೆಜೆಸ್ಟಿಕ್ನಲ್ಲಿ ಮತ್ತೊಬ್ಬರಿಗೆ ಹಸ್ತಾಂತರಿಸಲು ಯತ್ನಿಸುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ. ಅಕ್ರಮ ಸಾಗಾಣಿಕೆಗೆ ಯತ್ನಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
- Shivaprasad B
- Updated on: Sep 8, 2026
- 7:12 pm
ಚಿಕ್ಕ ಮಕ್ಕಳಿಂದ ದುಡಿಮೆ ಮಾಡಿಸಿದರೆ ಜೈಲು ಗ್ಯಾರಂಟಿ: ಪೊಲೀಸ್ ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಡೆಡ್ಲೈನ್
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಚಿಕ್ಕ ಮಕ್ಕಳು ಕೆಲಸ ಮಾಡುತ್ತಿರುವುದನ್ನು ಗಮನಿಸಿ ಆಕ್ರೋಶ ವ್ಯಕ್ತಪಡಿಸಿದರು. ಮಕ್ಕಳ ಕಾರ್ಮಿಕರನ್ನು ಬಂಧಿಸದಿದ್ದರೆ ಪೊಲೀಸರನ್ನು ಅಮಾನತುಗೊಳಿಸುವುದಾಗಿ ಎಚ್ಚರಿಸಿದರು. ರೈತರು, ವರ್ತಕರು ಮತ್ತು ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿ ಮಾರುಕಟ್ಟೆಯ ಸೌಲಭ್ಯಗಳು ಮತ್ತು ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.
- Shivaprasad B
- Updated on: Sep 8, 2026
- 8:27 pm
ವೈರಲ್ ವಿಡಿಯೋ: ಯಶವಂತಪುರ ಮಾರುಕಟ್ಟೆಯಲ್ಲಿ ವೇಯಿಂಗ್ ಮಷಿನ್ ಏರಿ ಖುದ್ದು ತೂಕ ನೋಡಿದ ಸಿಎಂ ಡಿಕೆ ಶಿವಕುಮಾರ್
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಅನಿರೀಕ್ಷಿತ ಭೇಟಿ ನೀಡಿದರು. ಈರುಳ್ಳಿ ಮಾರುಕಟ್ಟೆಯಲ್ಲಿ ತೂಕದ ಮೋಸದ ಬಗ್ಗೆ ರೈತರು ಮತ್ತು ವರ್ತಕರೊಂದಿಗೆ ಚರ್ಚಿಸಿದರು. ಸ್ವತಃ ತೂಕದ ಯಂತ್ರದ ಮೇಲೆ ನಿಂತು ಅದರ ನಿಖರತೆಯನ್ನು ಪರಿಶೀಲಿಸಿದರು. ಇದೇ ವೇಳೆ ಎಪಿಎಂಸಿ ಅಕ್ರಮದ ಬಗ್ಗೆ ಮಾಜಿ ಸದಸ್ಯ ಅರುಣ್ ಪರಮೇಶ್ವರ್ ಸಿಎಂಗೆ ದೂರು ನೀಡಿದ್ದು, ಮೂಲಸೌಕರ್ಯ ವಿಚಾರದಲ್ಲಿ ಎಪಿಎಂಸಿ ಅವ್ಯವಸ್ಥೆ ಗೂಡಾಗಿದೆ ಎಂದು ಆರೋಪಿಸಿದ್ದಾರೆ.
- Shivaprasad B
- Updated on: Sep 8, 2026
- 12:20 pm
ಯಶವಂತಪುರ APMC ಆವರಣದಲ್ಲಿ ತಿಂಡಿ ಸವಿದ ಸಿಎಂ ಡಿಕೆಶಿ: ಪುಟ್ಟ ಹೋಟೆಲ್ನ ಮಾಲೀಕನಿಗೆ ಪಾವತಿಸಿದ ಹಣ ಎಷ್ಟು ಗೊತ್ತಾ?
ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ ನೀಡಿದ್ದು, ರೈತರು ಮತ್ತು ವರ್ತಕರೊಂದಿಗೆ ಮಾರುಕಟ್ಟೆ ಸ್ಥಿತಿ, ತೂಕದಲ್ಲಿ ಮೋಸದ ಕುರಿತು ಮಾಹಿತಿ ಪಡೆದಿದ್ದಾರೆ. ಈ ವೇಳೆ ಮಾರುಕಟ್ಟೆ ಆವರಣದ ಪುಟ್ಟ ಹೋಟೆಲ್ನಲ್ಲಿ ಸರಳ ಉಪಾಹಾರ ಸೇವಿಸುವ ಮೂಲಕ ಸಿಎಂ, ಸಾರ್ವಜನಿಕರೊಂದಿಗೆ ಬೆರೆತರು. ಇಡ್ಲಿ, ಚಿತ್ರಾನ್ನದ ಬೆಲೆ ಹಾಗೂ ಹೋಟೆಲ್ ಮಾಲೀಕರ ದಿನನಿತ್ಯದ ವ್ಯಾಪಾರದ ಬಗ್ಗೆಯೂ ವಿಚಾರಿಸಿದರು.
- Shivaprasad B
- Updated on: Sep 8, 2026
- 11:55 am
ಸಾರ್ವಜನಿಕರ ಮೆಚ್ಚುಗೆಗೆ ಡಿಕೆಶಿ ಫುಲ್ ಖುಷ್: ಉಚಿತ ಬಸ್-ವಿದ್ಯುತ್ ಯೋಜನೆಗೆ ಹೆಣ್ಣುಮಕ್ಕಳ ಜೈಕಾರ
ಸಿಎಂ ಡಿ.ಕೆ. ಶಿವಕುಮಾರ್ ಅವರು ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿದರು. ಚಿಕ್ಕಬಳ್ಳಾಪುರದಿಂದ ಬಂದ ಈರುಳ್ಳಿ ವ್ಯಾಪಾರಸ್ಥೆಯೊಂದಿಗೆ ಸಂವಾದ ನಡೆಸಿದ ಅವರು, ಮಾರುಕಟ್ಟೆಯ ಆಯೋಗ (ಕಮಿಷನ್) ದರ, ತೂಕದಲ್ಲಿ ಮೋಸದ ಕುರಿತು ವಿಚಾರಿಸಿದರು. ಮಹಿಳೆ 40 ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದು, ಸರ್ಕಾರಿ ಯೋಜನೆಗಳಾದ ಉಚಿತ ವಿದ್ಯುತ್ ಮತ್ತು ಉಚಿತ ಬಸ್ ಪ್ರಯಾಣದಿಂದ ತಮಗೆ ಅನುಕೂಲವಾಗಿದೆ ಎಂದು ತಿಳಿಸಿದರು.
- Shivaprasad B
- Updated on: Sep 8, 2026
- 11:46 am
ಯಶವಂತಪುರ ಎಪಿಎಂಸಿಗೆ ಸಿಎಂ ಭೇಟಿ: ಖುದ್ದು ಆಲೂಗಡ್ಡೆ ಕತ್ತರಿಸಿ ಪರಿಶೀಲನೆ ನಡೆಸಿದ ಡಿಕೆ ಶಿವಕುಮಾರ್
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ, ಆಲೂಗಡ್ಡೆ ಬೆಳೆ ಬೆಳೆದಿರುವ ರೈತರೊಂದಿಗೆ ಸಂವಾದ ನಡೆಸಿದರು. ಮಳೆಯ ಅಭಾವದಿಂದ ಇಳುವರಿ ಕುಂಠಿತ, ಕೀಟಬಾಧೆ ಹಾಗೂ ಸ್ಥಳೀಯ ಆಲೂಗಡ್ಡೆಗೆ ಕಡಿಮೆ ಬೆಲೆ ಸಿಗುತ್ತಿರುವ ಬಗ್ಗೆ ರೈತರು ತಮ್ಮ ಅಳಲು ತೋಡಿಕೊಂಡರು. ಇದರಿಂದ ಬಂಡವಾಳವೂ ವಾಪಸ್ ಬರುತ್ತಿಲ್ಲ ಎಂದು ರೈತರು ಸಿಎಂಗೆ ವಿವರಿಸಿದರು.
- Shivaprasad B
- Updated on: Sep 8, 2026
- 11:41 am
ಬೆಂಗಳೂರಿನಲ್ಲಿ ಮಹಿಳೆ ಅಪಹರಣ, ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ ಆರೋಪ: ಮೂವರ ಬಂಧನ
ಬೆಂಗಳೂರಿನಲ್ಲಿ ಮಹಿಳೆಯೊಬ್ಬರನ್ನು ಅಪಹರಿಸಿ ಹಲ್ಲೆ ನಡೆಸಿ, ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ. ಸಾಲದ ಹಣದ ವಿಚಾರದಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಸದ್ಯ, ಘಟನೆ ಸಂಬಂಧ ತನಿಖೆ ನಡೆಯುತ್ತಿದೆ.
- Shivaprasad B
- Updated on: Sep 4, 2026
- 9:23 am