AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mahindra SUV: ನವರಾತ್ರಿ ಎಫೆಕ್ಟ್: ಮಹೀಂದ್ರಾ ಎಸ್‌ಯುವಿ ಮಾರಾಟದಲ್ಲಿ ಬರೋಬ್ಬರಿ ಶೇ. 60 ರಷ್ಟು ಏರಿಕೆ

Mahindra Car Sale Details: ಮಹೀಂದ್ರಾ & ಮಹೀಂದ್ರಾ (ಎಂ & ಎಂ) ಸೆಪ್ಟೆಂಬರ್‌ನಲ್ಲಿ ಭರ್ಜರಿ ಮಾರಾಟ ಕಂಡಿದೆ. ಹಬ್ಬದ ಋತುವಿನಿಂದ ಕಂಪನಿಯು ಗಮನಾರ್ಹವಾಗಿ ಲಾಭ ಗಳಿಸಿದೆ. ನವರಾತ್ರಿಯ ಮೊದಲ ಒಂಬತ್ತು ದಿನಗಳಲ್ಲಿ ಎಸ್‌ಯುವಿಗಳು ಮತ್ತು ವಾಣಿಜ್ಯ ವಾಹನಗಳ ಚಿಲ್ಲರೆ ಮಾರಾಟವು ಗಮನಾರ್ಹ ಏರಿಕೆಯನ್ನು ಕಂಡಿದೆ.

Mahindra SUV: ನವರಾತ್ರಿ ಎಫೆಕ್ಟ್: ಮಹೀಂದ್ರಾ ಎಸ್‌ಯುವಿ ಮಾರಾಟದಲ್ಲಿ ಬರೋಬ್ಬರಿ ಶೇ. 60 ರಷ್ಟು ಏರಿಕೆ
Mahibdra Thar
ಮಾಲಾಶ್ರೀ ಅಂಚನ್​
| Updated By: Vinay Bhat|

Updated on:Oct 01, 2025 | 3:53 PM

Share

ಬೆಂಗಳೂರು (ಅ. 01): ಮಹೀಂದ್ರಾ & ಮಹೀಂದ್ರಾ (Mahindra & Mahindra) ಸೆಪ್ಟೆಂಬರ್ ತಿಂಗಳ ವಾಹನ ಮಾರಾಟ ವರದಿಯನ್ನು ಬಿಡುಗಡೆ ಮಾಡಿದೆ. ಕಳೆದ ತಿಂಗಳು 30 ದಿನಗಳಲ್ಲಿ ದೇಶೀಯ ಕಂಪನಿಯು ಒಟ್ಟು 1,00,298 ವಾಹನಗಳನ್ನು ಮಾರಾಟ ಮಾಡಿದೆ, ಇದು ಕಳೆದ ವರ್ಷ ಸೆಪ್ಟೆಂಬರ್‌ಗಿಂತ ಶೇ. 16 ರಷ್ಟು ಹೆಚ್ಚಾಗಿದೆ. ನವರಾತ್ರಿಯ ಸಂದರ್ಭದಲ್ಲಿ ಮಹೀಂದ್ರಾ & ಮಹೀಂದ್ರಾ ತನ್ನ ವಾಹನಗಳ ಬಂಪರ್ ಮಾರಾಟವನ್ನು ಮಾಡಿದೆ ಮತ್ತು ಇದರಲ್ಲಿ ಹಬ್ಬದ ಪ್ರಯೋಜನಗಳ ಜೊತೆಗೆ, ಜಿಎಸ್‌ಟಿ ದರ ಇಳಿಕೆಯಿಂದ ಎಸ್‌ಯುವಿಗಳ ಬೆಲೆಗಳು ಕಡಿಮೆಯಾದ ಕಾರಣ ವಾಹನ ಪ್ರಿಯರು ಮಹೀಂದ್ರಾ ಶೋರೂಮ್‌ಗೆ ತೆರಳಿದ ದೊಡ್ಡ ಪ್ರಮಾಣದಲ್ಲಿ ಬುಕ್ ಮಾಡಿದ್ದಾರೆ.

ಮಹೀಂದ್ರಾ & ಮಹೀಂದ್ರಾ ಸೆಪ್ಟೆಂಬರ್‌ನಲ್ಲಿ ಒಟ್ಟು 100,298 ಯುನಿಟ್‌ಗಳ ಮಾರಾಟವನ್ನು ವರದಿ ಮಾಡಿದೆ, ಇದು ಸೆಪ್ಟೆಂಬರ್ 2024 ಕ್ಕೆ ಹೋಲಿಸಿದರೆ 16% ಹೆಚ್ಚಳವಾಗಿದೆ. ಹಬ್ಬದ ಋತುವಿನಲ್ಲಿ ವಾಹನ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಕಂಪನಿ ಹೇಳಿದೆ. ನವರಾತ್ರಿಯ ಮೊದಲ ಒಂಬತ್ತು ದಿನಗಳಲ್ಲಿ ಎಸ್‌ಯುವಿ ಚಿಲ್ಲರೆ ಮಾರಾಟವು 60% ಕ್ಕಿಂತ ಹೆಚ್ಚು ಹೆಚ್ಚಾಗಿದೆ. ಅದೇ ರೀತಿ, ವಾಣಿಜ್ಯ ವಾಹನಗಳ ಚಿಲ್ಲರೆ ಮಾರಾಟವು ಸಹ 70% ಕ್ಕಿಂತ ಹೆಚ್ಚು ಹೆಚ್ಚಾಗಿದೆ.

ನವರಾತ್ರಿ ಸಮಯದಲ್ಲಿ ಭಾರಿ ಮಾರಾಟ

“ಜಿಎಸ್‌ಟಿ 2.0 ಮತ್ತು ಹಬ್ಬದ ಋತುವಿಗೆ ಮುಂಚಿತವಾಗಿ ಹೆಚ್ಚಿದ ಬೇಡಿಕೆಯು ಈ ಬಲವಾದ ಬೆಳವಣಿಗೆಗೆ ಕಾರಣವಾಯಿತು” ಎಂದು ಮಹೀಂದ್ರಾ ಮತ್ತು ಮಹೀಂದ್ರಾದ ಆಟೋಮೋಟಿವ್ ವಿಭಾಗದ ಸಿಇಒ ನಳಿನಿಕಾಂತ್ ಗೊಲ್ಲಗುಂಟಾ ಹೇಳಿದರು. ನವರಾತ್ರಿಯ ಮೊದಲ ಒಂಬತ್ತು ದಿನಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ನಾವು ಎಸ್‌ಯುವಿ ಚಿಲ್ಲರೆ ಮಾರಾಟದಲ್ಲಿ 60% ಕ್ಕಿಂತ ಹೆಚ್ಚು ಮತ್ತು ವಾಣಿಜ್ಯ ವಾಹನ ಚಿಲ್ಲರೆ ಮಾರಾಟದಲ್ಲಿ 70% ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ಕಂಡಿದ್ದೇವೆ, ಇದು ಬಲವಾದ ಹಬ್ಬದ ಬೇಡಿಕೆಯಿಂದಾಗಿ” ಎಂದರು.

ಇದನ್ನೂ ಓದಿ
Image
ಫ್ಲಿಪ್‌ಕಾರ್ಟ್​ನಲ್ಲಿ ಐಫೋನ್‌ಗಿಂತ ಎಲೆಕ್ಟ್ರಿಕ್ ಸ್ಕೂಟರ್ ಅಗ್ಗ
Image
ಕಾರುಗಳ ಬೆಲೆ ನಗರದಿಂದ ನಗರಕ್ಕೆ ಏಕೆ ಬದಲಾಗುತ್ತದೆ ಗೊತ್ತೇ?
Image
ಆಲ್ಟೊ ಕೆ10 ಅಲ್ಲ: ಜಿಎಸ್‌ಟಿ ಕಡಿತದ ನಂತರ ಅತಿ ಅಗ್ಗದ ಕಾರು ಇದುವೇ ನೋಡಿ
Image
GST 2.0: ಶೋ ರೂಂಗಳಿಗೆ ಮುಗಿಬಿದ್ದ ಗ್ರಾಹಕರು, ಹೊಸ ದಾಖಲೆ ಸೃಷ್ಟಿ

Flipkart Sale: ಐಫೋನ್‌ಗಿಂತ ಎಲೆಕ್ಟ್ರಿಕ್ ಸ್ಕೂಟರ್ ಅಗ್ಗ: ಫ್ಲಿಪ್‌ಕಾರ್ಟ್​ನಲ್ಲಿ ಈ ಸ್ಕೂಟಿ ಮೇಲೆ ಬಂಪರ್ ಆಫರ್

ಸೆಪ್ಟೆಂಬರ್ 2025 ರಲ್ಲಿ ಮಹೀಂದ್ರಾ & ಮಹೀಂದ್ರಾ ದೇಶೀಯ ಮಾರುಕಟ್ಟೆಯಲ್ಲಿ 56,233 ವಾಹನಗಳನ್ನು ಮಾರಾಟ ಮಾಡಿದೆ ಮತ್ತು ಈ ಅಂಕಿ ಅಂಶವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 10 ರಷ್ಟು ಹೆಚ್ಚಾಗಿದೆ. ರಫ್ತು ಸಂಖ್ಯೆಗಳನ್ನು ಸೇರಿಸಿದರೆ, ಈ ಅಂಕಿ ಅಂಶವು 58,174 ಯೂನಿಟ್‌ಗಳನ್ನು ತಲುಪುತ್ತದೆ. ವಾಣಿಜ್ಯ ವಾಹನಗಳ ದೇಶೀಯ ಮಾರಾಟವೂ ಹೆಚ್ಚಾಗಿದೆ. ಕಂಪನಿಯು ವಾಣಿಜ್ಯ ವಾಹನ ವಿಭಾಗದಲ್ಲಿ 26,728 ವಾಹನಗಳನ್ನು ಮಾರಾಟ ಮಾಡಿದೆ, ಇದು ಕಳೆದ ವರ್ಷಕ್ಕಿಂತ ಶೇಕಡಾ 18 ರಷ್ಟು ಹೆಚ್ಚಾಗಿದೆ.

ಮಹೀಂದ್ರಾ ಸೆಪ್ಟೆಂಬರ್‌ನಲ್ಲಿ ಒಟ್ಟು 4,320 ಸಿವಿಗಳನ್ನು ರಫ್ತು ಮಾಡಿದೆ, ಇದು ವಾರ್ಷಿಕ ಆಧಾರದ ಮೇಲೆ ಶೇಕಡಾ 43 ರಷ್ಟು ಹೆಚ್ಚಾಗಿದೆ. ಕಂಪನಿಯ ಮಾರಾಟವು 3-ಚಕ್ರ ವಾಹನಗಳ ವಿಭಾಗದಲ್ಲಿಯೂ ಹೆಚ್ಚಾಗಿದೆ ಮತ್ತು ಇದರಲ್ಲಿ ಎಲೆಕ್ಟ್ರಿಕ್ ಮಾದರಿಗಳು ಸಹ ಸೇರಿವೆ. ಎಂ & ಎಂ ದೇಶೀಯ ಮಾರುಕಟ್ಟೆಯಲ್ಲಿ 13,017 ಯುನಿಟ್ ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ, ಇದು ಕಳೆದ ವರ್ಷಕ್ಕಿಂತ ಶೇಕಡಾ 30 ರಷ್ಟು ಹೆಚ್ಚಾಗಿದೆ.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:53 pm, Wed, 1 October 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ