AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Father’s Day 2022: ಅಪ್ಪ ಎಂಬ ಪದವೇ ಸುಂದರ, ಶಾಂತ ಸ್ವಭಾವದ ಗಂಗೆ ಅಪ್ಪ

ನೀನೆಂದೂ  ನನ್ನಿಂದ ದೂರಾಗಿಲ್ಲ ನನ್ನ ಆಲೋಚನೆ, ನನ್ನ ಪ್ರತಿ ಕ್ಷಣದಲ್ಲೂ ನೀನು ತುಂಬಿರುವೆ.  ಬದುಕಿನ ಪಯಣದ ಲೆಕ್ಕವಿಲ್ಲದ ತಿರುವುಗಳಲ್ಲಿ ಸಿಗುವಂತಹ ನೂರಾರು ಜನರು ಅಪ್ಪನ ಸಮಾನ ನಿಲ್ಲಲು ಸಾಧ್ಯವೇ?  ಹೆಣ್ಣೆಂದರೆ ದೂರ ಸರಿಯುವ ಜನರ ಮಧ್ಯೆ ತನ್ನೆಲ್ಲಾ ಬೇಕು ಬೇಡಗಳನ್ನು ಬದಿಗಿರಿಸಿ ತನ್ನ ಮಕ್ಕಳು ಕೇಳಿದ್ದನ್ನೆಲ್ಲಾ ನೀಡುವಂತಹ ತ್ಯಾಗಮಯಿ. ನಿನ್ನನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ.

Father’s Day 2022: ಅಪ್ಪ ಎಂಬ ಪದವೇ ಸುಂದರ, ಶಾಂತ ಸ್ವಭಾವದ ಗಂಗೆ ಅಪ್ಪ
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Jun 19, 2022 | 8:10 AM

Share

ಅಪ್ಪ ಎಂಬ ಪದವೇ ಸುಂದರ. ಅಪ್ಪ ಎಂದರೆ ತ್ಯಾಗ . ನೀನಿದ್ದರೆ ಕಷ್ಟಗಳೆಲ್ಲವೂ ದೂರ. ಮಗಳಿಗೆ ಅಪ್ಪನೇ ಪ್ರಪಂಚ. ಆತನಿಗೆ ತನ್ನ ಮಗಳೇ ಸರ್ವಸ್ವ ಮಗಳ ಜೊತೆ ತಾನೂ ಮಗುವಾಗುವ. ಮಗಳ ಜೀವನದಲ್ಲಿ ಒಬ್ಬ ಗುರುವಾಗಿ, ಸ್ನೇಹಿತನಾಗಿ, ತಂದೆಯಾಗಿ, ಅವಳ ಬಾಳಿನಲ್ಲಿ ಸಂತೋಷ , ಕಷ್ಟ ,ನೋವು ನಲಿವಿನ ಸಂದರ್ಭದಲ್ಲಿ ಸದಾ  ಹೆಗಲಾಗಿ ನಿಲ್ಲುವವನು ಅಪ್ಪ. ತನ್ನ ಮಗಳ ಸಂತೋಷ, ನಗು ನೋಡಿ ತನ್ನ ಕಷ್ಟಗಳನ್ನು ಮರೆಯುವವನು. ಇಂದು ನೀನು ಲೋಕದ ಕಣ್ಣಿಗೆ ನನ್ನೊಂದಿಗೆ ಜೀವಂತವಾಗಿ ಇಲ್ಲದಿದ್ದರೂ ಕಾಣದ ಲೋಕದಲ್ಲಿ ಸದಾ ನನ್ನೊಂದಿಗೆ ಜೀವಂತವಾಗಿರುವೆ.

ಹಣದಲ್ಲಿ ಬಡವನಾದರೂ ಪ್ರೀತಿಯಲ್ಲಿ ಅತೀ ಶ್ರೀಮಂತ. ಅವನ ಪ್ರೀತಿಗೆ ಬೆಲೆ ಕಟ್ಟಲು ಅಸಾಧ್ಯ. ನೀನೆಂದೂ  ನನ್ನಿಂದ ದೂರಾಗಿಲ್ಲ ನನ್ನ ಆಲೋಚನೆ, ನನ್ನ ಪ್ರತಿ ಕ್ಷಣದಲ್ಲೂ ನೀನು ತುಂಬಿರುವೆ.  ಬದುಕಿನ ಪಯಣದ ಲೆಕ್ಕವಿಲ್ಲದ ತಿರುವುಗಳಲ್ಲಿ ಸಿಗುವಂತಹ ನೂರಾರು ಜನರು ಅಪ್ಪನ ಸಮಾನ ನಿಲ್ಲಲು ಸಾಧ್ಯವೇ?  ಹೆಣ್ಣೆಂದರೆ ದೂರ ಸರಿಯುವ ಜನರ ಮಧ್ಯೆ ತನ್ನೆಲ್ಲಾ ಬೇಕು ಬೇಡಗಳನ್ನು ಬದಿಗಿರಿಸಿ ತನ್ನ ಮಕ್ಕಳು ಕೇಳಿದ್ದನ್ನೆಲ್ಲಾ ನೀಡುವಂತಹ ತ್ಯಾಗಮಯಿ. ನಿನ್ನನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ.

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಅಪ್ಪ ಎಂದರೆ ಅಪರಿಮಿತ ಶಕ್ತಿ

ಇದನ್ನೂ ಓದಿ
Image
Gallstone: ಶಸ್ತ್ರಚಿಕಿತ್ಸೆಯಿಲ್ಲದೆ ಪಿತ್ತಕೋಶದ ಕಲ್ಲುಗಳನ್ನು ತೆಗೆಯಲು ಸಾಧ್ಯವೆ! ಇಲ್ಲಿದೆ ಮನೆಮದ್ದು
Image
Ayurvedic tips: ನೀವು ತುರಿಕೆ ಮತ್ತು ಫಂಗಲ್ ಸೋಂಕನ್ನು ಎದುರಿಸುತ್ತಿದ್ದರೆ ಈ ಪದಾರ್ಥಗಳನ್ನು ತಿನ್ನಬೇಡಿ..!

ಒಡಲಲ್ಲಿ ಕೊಚ್ಚಿಕೊಂಡು ಹೋಗುವ ಪ್ರವಾಹವಿದ್ದರೂ ನೋಡಲು ಮಾತ್ರ ಶಾಂತ ಸ್ವಭಾವದ ಗಂಗೆಯಂತೆ. ನನ್ನ ಜೀವನದಲ್ಲಿ ನಾನೇಷ್ಟೇ ಕರೆದರೂ ಮರಳಿ ಬಾರದವ ನೀನು. ಸಮಯ ಎಲ್ಲವೂ ಎಲ್ಲರನ್ನೂ ಬದಲಿಸುವುದು, ಆದರೆ ನಿನ್ನ ನೆನಪು ಸದಾ ಜೀವಂತ. ಅದೆಷ್ಟೇ ಸಮಯ ಕಳೆದರೂ ನಿನ್ನ ನೆನಪುಗಳು ಜೀವಂತ… ಆದರೂ ಕಾಣದ ನಿನಗಾಗಿ ಹಂಬಲಿಸಿದೆ ಮನಸ್ಸು. ಮಿಸ್ ಯೂ ಅಪ್ಪಾ

ಕಾಣದ ನಿನಗಾಗಿ ಹಂಬಲಿಸಿದೆ ಮನ ಕಾಳಜಿ ಎಂಬ ಪದವ ಹುಟ್ಟುಹಾಕಿದ ಜನುಮದಾತ…. ಪ್ರೀತಿಯೆಂಬ ಪದಕೆ ಅವನೇ ಸ್ಫೂರ್ತಿಯ ಪರ್ವತ… ನಿನಗೆ ಕೋಟಿ ನಮನಗಳು ಅಪ್ಪಾ

ಪೂಜಾಶ್ರೀ

Published On - 6:30 am, Sun, 19 June 22

ಗಂಭೀರವಾಗಿ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್
ಗಂಭೀರವಾಗಿ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್
ಸೇನೆಯಿಂದ ಜಮ್ಮು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆ
ಸೇನೆಯಿಂದ ಜಮ್ಮು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆ
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
ಮೊದಲು ನನಗೆ ಬಾಸ್ ಅಂತಿದ್ರು, ಈಗ ಯಶ್​ಗೆ ಬಾಸ್ ಅಂತಾರೆ: ಪುಷ್ಪ
ಮೊದಲು ನನಗೆ ಬಾಸ್ ಅಂತಿದ್ರು, ಈಗ ಯಶ್​ಗೆ ಬಾಸ್ ಅಂತಾರೆ: ಪುಷ್ಪ
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ