Karnataka Rajyotsava: ಅನ್ಯಭಾಷೆ ಕಲಿಯುವುದು ಅನಿವಾರ್ಯ, ಹಾಗೆಂದು ಕನ್ನಡ ಮರೆಯುವುದು ಅನ್ಯಾಯ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 01, 2022 | 11:12 AM

ಬೇರೆ ಭಾಷೆಯನ್ನು ಕಲಿಯುವುದು ಅನಿವಾರ್ಯ ಆದರೆ ನಮ್ಮ ಕನ್ನಡವನ್ನು ಮರೆಯುವುದು ಉತ್ತಮವಲ್ಲ. ವಿದೇಶಕ್ಕೆ ಹೋದರೆ ಕನ್ನಡವನ್ನು ಸಂಪೂರ್ಣವಾಗಿ ಮರೆತುಬಿಡುವ ಜನ. ನಗರದವರಿಗಂತೂ ಕನ್ನಡವೇ ಬರೆಯಲು ಓದಲು ಬರುವುದಿಲ್ಲ. ನಮ್ಮ ಸಹಜೀವನದಲ್ಲಿ ಕನ್ನಡ ಯಶಸ್ಸನ್ನು ನೀಡುತ್ತದೆ ಎಂಬುದನ್ನು ಎಲ್ಲೆಡೆ ಹರಡಬೇಕು.

Karnataka Rajyotsava: ಅನ್ಯಭಾಷೆ ಕಲಿಯುವುದು ಅನಿವಾರ್ಯ, ಹಾಗೆಂದು ಕನ್ನಡ ಮರೆಯುವುದು ಅನ್ಯಾಯ
Karnataka Rajyotsava
Follow us on

ಪ್ರಸ್ತುತ ಕಾಲದಲ್ಲಿ ಕನ್ನಡವನ್ನು ಬಿಟ್ಟು ಬೇರೆ ಭಾಷೆಯನ್ನು ಹೆಚ್ಚಾಗಿ ಉಪಯೋಗಿಸುವುದನ್ನು ಕಾಣಬಹುದು. ಇದು ತಪ್ಪು, ನಮ್ಮ ಭಾಷೆಯನ್ನು ಬೆಳೆಸುವವರು ನಾವೇ ಅದನ್ನು ಬಿಟ್ಟು ಅನ್ಯ ಭಾಷೆಗೆ ಪ್ರೋತ್ಸಾಹ ನೀಡುವುದು ಶೋಚನೀಯ ಸಂಗತಿಯಾಗಿದೆ. ಪ್ರತಿಯೊಬ್ಬ ವ್ಯಕ್ತಿ ಹೃದಯದಲ್ಲೂ ಕನ್ನಡ ಪ್ರೇಮ ಇರಬೇಕು. ಆಗ ಮಾತ್ರ ಕನ್ನಡಾಂಬೆ ಸಂತೋಷವಾಗುವುದು.

ಕನ್ನಡಾಂಬೆಗೆ ಶಿರಬಾಗಿ ನಮಿಸಿದರೆ ಯಾವತ್ತೂ ಕೈಬಿಡುವುದಿಲ್ಲ. ಮಗುವಿಗೆ ಬಾಲ್ಯದಿಂದಲೇ ಡ್ಯಾಡಿ ಮಮ್ಮಿ ಎಂದು ಅನ್ಯ ಭಾಷೆಯನ್ನು ಹೇಳಿಕೊಟ್ಟು ಕನ್ನಡದ ಅಪ್ಪ ಅಮ್ಮ ಪದಕ್ಕೆ ಬೆಲೆ ಇಲ್ಲದಂತಾಗಿದೆ. ಕನ್ನಡ ಭಾಷೆಯನ್ನು ಮಾತಾಡಿದರೆ ಬೇರೆಯವರ ಎದುರು ಸಣ್ಣದಾಗಿ ಕಾಣುತ್ತೇವೆ ಎನ್ನುವ ಮನೋಭಾವನೆಯನ್ನು ಮೊದಲು ತೊಡೆದು ಹಾಕಬೇಕು. ವಿದ್ಯಾರ್ಥಿ ಜೀವನದಲ್ಲಿ ಕನ್ನಡವನ್ನು ಕಲಿಯಬೇಕೆಂಬುದನ್ನು ಕಡ್ಡಾಯ ಮಾಡಬೇಕು.

ಬೇರೆ ಭಾಷೆಯನ್ನು ಕಲಿಯುವುದು ಅನಿವಾರ್ಯ ಆದರೆ ನಮ್ಮ ಕನ್ನಡವನ್ನು ಮರೆಯುವುದು ಉತ್ತಮವಲ್ಲ. ವಿದೇಶಕ್ಕೆ ಹೋದರೆ ಕನ್ನಡವನ್ನು ಸಂಪೂರ್ಣವಾಗಿ ಮರೆತುಬಿಡುವ ಜನ. ನಗರದವರಿಗಂತೂ ಕನ್ನಡವೇ ಬರೆಯಲು ಓದಲು ಬರುವುದಿಲ್ಲ. ನಮ್ಮ ಸಹಜೀವನದಲ್ಲಿ ಕನ್ನಡ ಯಶಸ್ಸನ್ನು ನೀಡುತ್ತದೆ ಎಂಬುದನ್ನು ಎಲ್ಲೆಡೆ ಹರಡಬೇಕು. ಎರಡನೇ ಭಾಷೆಯಾಗಿ ಕನ್ನಡ ಭಾಷೆಯನ್ನು ಅಧಿಕೃತವಾಗಿ ಸರ್ಕಾರವು ಘೋಷಿಸಿದ್ದು, ಕನ್ನಡ ಭಾಷೆಯನ್ನು ಮಾತನಾಡಲು ಮುಜುಗರ ಪಡುವ ಜನರನ್ನು ಕಾಣಬಹುದು.

ಮುಜುಗರ ಪಡದೇ ಕನ್ನಡಿಗ ಎಂದು ಎದೆತಟ್ಟಿ ಹೇಳಬೇಕು. ಆಂಗ್ಲ ಭಾಷೆಯವರನ್ನು ಸಹ ಕನ್ನಡ ಮಾತನಾಡುವ ಹಾಗೆ ನಾವು ಮಾಡಬೇಕು ಎಲ್ಲವೂ ಸಾಧ್ಯ ನಮ್ಮಿಂದಲೇ. ಆಗ ಮಾತ್ರ ಪರಭಾಷೆಗಳಿಗೆ ನಮ್ಮ ಭಾಷೆಯ ಕುರಿತು ಗೌರವ ಬೆಳೆಯಲು ಸಾಧ್ಯ. ಕನ್ನಡವನ್ನು ಓದುವ ಮತ್ತು ಬರೆಯುವ ಸಂಸ್ಕೃತಿಯನ್ನು ಬಾಲ್ಯದಿಂದಲೇ ಅಳವಡಿಸಿಕೊಳ್ಳಬೇಕು. ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗಾಗಿ ಉಳಿಸುವುದೇ ನಮ್ಮ ಕರ್ತವ್ಯವಾಗಿರುತ್ತದೆ. ಕನ್ನಡ ಶಾಲೆಗಳು ದಿನೇ ದಿನೇ ಕಮ್ಮಿ ಆಗಿರುವುದು ಕಮ್ಮಿ ಆಗುತ್ತಿರುವುದು ವಿಷಾದವೇ ಸರಿ.

ಭೂ ನೆಲದ ಸಂಸ್ಕೃತಿ ಕನ್ನಡ ಭಾಷೆ ಅದನ್ನು ಅಳಿಯದ ಹಾಗೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಆಗಿರುತ್ತದೆ. ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿದ ಹೆಗ್ಗಳಿಕೆ ಕನ್ನಡದ ಕವಿಗಳಿಗೆ ಇವೆ. ಕನ್ನಡ ಭಾಷೆ ಸಾವಿರಾರು ಇತಿಹಾಸಗಳನ್ನು ಹೊಂದಿದ್ದು ಅದನ್ನು ಯುವಜನರಿಗೆ ತಿಳಿಸುವ ಹಾಗೂ ಪ್ರಚಾರ ಮಾಡುವ ಎಲ್ಲಾ ಕಾರ್ಯಗಳನ್ನು ಜಾರಿಗೊಳಿಸಬೇಕು. ಹಾಗಾಗಿ ನಮ್ಮ ಭಾಷೆಯನ್ನು ಮರೆಯದೆ ಪ್ರೀತಿಸುವುದು ನಮ್ಮ ಹಕ್ಕು.

ಕನ್ನಡವೇ ಸತ್ಯ.. ಕನ್ನಡವೇ ನಿತ್ಯ

ಜೈ ಕನ್ನಡಾಂಬೆ..

ಕೃತಿ ಬಲ್ಯಾಯ

Published On - 10:03 am, Tue, 1 November 22