AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Keerthana Balyaya: ತಮ್ಮ ಕೈ ಚಳಕದ ಮೂಲಕ ಕಲೆಗೆ ಜೀವ ತುಂಬುವ ಕಲೆಗಾರ್ತಿ ಕೀರ್ತನಾ ಬಲ್ಯಾಯ

ಚಿತ್ರಕಲೆಯಲ್ಲಿ ಯಾವುದೇ ತರಬೇತಿಯನ್ನು ಪಡೆಯದೆ ತಮ್ಮ ಹವ್ಯಾಸಿ ಚಿತ್ರಕಲೆಯನ್ನು ಇಲ್ಲಿಯವರೆಗೂ ಬೆಳೆಸಿಕೊಂಡು ಬಂದಿರುವುದು ಇವರ ವಿಶೇಷತೆ.

Keerthana Balyaya: ತಮ್ಮ ಕೈ ಚಳಕದ ಮೂಲಕ ಕಲೆಗೆ ಜೀವ ತುಂಬುವ ಕಲೆಗಾರ್ತಿ ಕೀರ್ತನಾ ಬಲ್ಯಾಯ
Artist Keerthana
TV9 Web
| Updated By: ಅಕ್ಷತಾ ವರ್ಕಾಡಿ|

Updated on: Nov 01, 2022 | 11:50 AM

Share

ಕಲೆಗಾರರ ಕೈಯಲ್ಲಿ ಒಂದು ಪೆನ್ನು , ಹಾಳೆ ಇದ್ದರೆ ಸಾಕು ಏನೋ ಗೀಚಿ ಅದಕ್ಕೆ ಜೀವ ತುಂಬುವ ಶಕ್ತಿ ಅವರ ಕಲೆಗೆ ಇದೆ. ಅಂಥದೊಂದು ನಿದರ್ಶನ ಇಲ್ಲಿದೆ. ತಮ್ಮ ಕೈಚಳಕದ ಮೂಲಕ ಸಾಕಷ್ಟು ಚಿತ್ರಗಳಿಗೆ ಜೀವ ನೀಡಿದ್ದಾರೆ ಕೀರ್ತನಾ ಬಲ್ಯಾಯ.

ಮೂಲತಃ ಮಂಗಳೂರಿನವರಾದ ಇವರು ಎಂ ಎಸ್ ಸಿ ಮುಗಿಸಿದ್ದು, ಇದೀಗ ಸೈನಿಕನ ಪತ್ನಿಯಾಗಿ ಅಹಮದಾಬಾದ್ ನಲ್ಲಿ ನೆಲೆಸಿದ್ದಾರೆ. ಚಿತ್ರಕಲೆಯಲ್ಲಿ ಯಾವುದೇ ತರಬೇತಿಯನ್ನು ಪಡೆಯದೆ ತಮ್ಮ ಹವ್ಯಾಸಿ ಚಿತ್ರಕಲೆಯನ್ನು ಇಲ್ಲಿಯವರೆಗೂ ಬೆಳೆಸಿಕೊಂಡು ಬಂದಿರುವುದು ಇವರ ವಿಶೇಷತೆ.

ಚಿತ್ರಕಲೆ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದ ಇವರು ತಮ್ಮ ಶಾಲಾ ದಿನಗಳಲ್ಲೇ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು. ನಂತರದ ದಿನಗಳಲ್ಲಿ ತಮ್ಮ ಚಿತ್ರಕಲೆಗೆ ಪೂರಕವಾಗುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಕೆಲವೊಂದು ಆರ್ಟ್​ ಟಿಪ್ಸ್ ವಿಡಿಯೊಗಳು, ಪೋಸ್ಟ್ ಗಳನ್ನು ನೋಡಿ ತಮ್ಮ ಹವ್ಯಾಸಿ ಚಿತ್ರಕಲೆಯನ್ನು ಇನಷ್ಟು ಬೆಳೆಸಿದ್ದಾರೆ.

ನನ್ನ ಈ ಚಿತ್ರಕಲೆಗೆ ನನ್ನ ತಾಯಿಯೇ ಸ್ಫೂರ್ತಿ. ಅವರಿಂದಲೇ ನನಗೆ ಈ ಕಲೆ ಬಂದಿದೆ. ಹಾಗೆ ಪ್ರತಿಯೊಂದು ಸಂದರ್ಭದಲ್ಲಿಯೂ ನನ್ನ ಅಮ್ಮ ನನಗೆ ಜೊತೆಯಾಗಿ ನಿಲ್ಲುತ್ತಾರೆ ಎಂದು ಹೇಳುತ್ತಾರೆ ಕೀರ್ತನಾ.

ಇದನ್ನು ಓದಿ: ಅನ್ಯಭಾಷೆ ಕಲಿಯುವುದು ಅನಿವಾರ್ಯ, ಹಾಗೆಂದು ಕನ್ನಡ ಮರೆಯುವುದು ಅನ್ಯಾಯ

ಮುಂಚೆ ನನ್ನ ಚಿತ್ರಕಲೆಯು ಕೇವಲ ಕೆಲವೊಂದು ಇಷ್ಟು ಜನರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ನಾನಿವಾಗ ಸಾಮಾಜಿಕ ಜಾಲತಾಣಗಳಲ್ಲೂ ನನ್ನ ಚಿತ್ರಕಲೆಯನ್ನು ಪೋಸ್ಟ್ ಮಾಡುವುದರಿಂದ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿರುವ ಖುಷಿ ತಂದಿದೆ ಎಂದು ಇವರು ಹೇಳುತ್ತಾರೆ.

ಇವರ ಈ ಕಲೆ ಮುಂದೆ ಇನ್ನಷ್ಟು ಬೆಳೆದು ಸಾಕಷ್ಟು ಜನರಿಗೆ ಸ್ಪೂರ್ತಿಯಾಗಲಿ. ಇವರ ಈ ಕಲೆಯನ್ನು ಗುರುತಿಸಿ ಸಾಕಷ್ಟು ಅವಕಾಶಗಳು ಒದಗಿ ಬರಲು ಎಂದು ಆಶೀಸೋಣ.

Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!