AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rajyotsava: ಅನ್ಯಭಾಷೆ ಕಲಿಯುವುದು ಅನಿವಾರ್ಯ, ಹಾಗೆಂದು ಕನ್ನಡ ಮರೆಯುವುದು ಅನ್ಯಾಯ

ಬೇರೆ ಭಾಷೆಯನ್ನು ಕಲಿಯುವುದು ಅನಿವಾರ್ಯ ಆದರೆ ನಮ್ಮ ಕನ್ನಡವನ್ನು ಮರೆಯುವುದು ಉತ್ತಮವಲ್ಲ. ವಿದೇಶಕ್ಕೆ ಹೋದರೆ ಕನ್ನಡವನ್ನು ಸಂಪೂರ್ಣವಾಗಿ ಮರೆತುಬಿಡುವ ಜನ. ನಗರದವರಿಗಂತೂ ಕನ್ನಡವೇ ಬರೆಯಲು ಓದಲು ಬರುವುದಿಲ್ಲ. ನಮ್ಮ ಸಹಜೀವನದಲ್ಲಿ ಕನ್ನಡ ಯಶಸ್ಸನ್ನು ನೀಡುತ್ತದೆ ಎಂಬುದನ್ನು ಎಲ್ಲೆಡೆ ಹರಡಬೇಕು.

Karnataka Rajyotsava: ಅನ್ಯಭಾಷೆ ಕಲಿಯುವುದು ಅನಿವಾರ್ಯ, ಹಾಗೆಂದು ಕನ್ನಡ ಮರೆಯುವುದು ಅನ್ಯಾಯ
Karnataka Rajyotsava
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Nov 01, 2022 | 11:12 AM

Share

ಪ್ರಸ್ತುತ ಕಾಲದಲ್ಲಿ ಕನ್ನಡವನ್ನು ಬಿಟ್ಟು ಬೇರೆ ಭಾಷೆಯನ್ನು ಹೆಚ್ಚಾಗಿ ಉಪಯೋಗಿಸುವುದನ್ನು ಕಾಣಬಹುದು. ಇದು ತಪ್ಪು, ನಮ್ಮ ಭಾಷೆಯನ್ನು ಬೆಳೆಸುವವರು ನಾವೇ ಅದನ್ನು ಬಿಟ್ಟು ಅನ್ಯ ಭಾಷೆಗೆ ಪ್ರೋತ್ಸಾಹ ನೀಡುವುದು ಶೋಚನೀಯ ಸಂಗತಿಯಾಗಿದೆ. ಪ್ರತಿಯೊಬ್ಬ ವ್ಯಕ್ತಿ ಹೃದಯದಲ್ಲೂ ಕನ್ನಡ ಪ್ರೇಮ ಇರಬೇಕು. ಆಗ ಮಾತ್ರ ಕನ್ನಡಾಂಬೆ ಸಂತೋಷವಾಗುವುದು.

ಕನ್ನಡಾಂಬೆಗೆ ಶಿರಬಾಗಿ ನಮಿಸಿದರೆ ಯಾವತ್ತೂ ಕೈಬಿಡುವುದಿಲ್ಲ. ಮಗುವಿಗೆ ಬಾಲ್ಯದಿಂದಲೇ ಡ್ಯಾಡಿ ಮಮ್ಮಿ ಎಂದು ಅನ್ಯ ಭಾಷೆಯನ್ನು ಹೇಳಿಕೊಟ್ಟು ಕನ್ನಡದ ಅಪ್ಪ ಅಮ್ಮ ಪದಕ್ಕೆ ಬೆಲೆ ಇಲ್ಲದಂತಾಗಿದೆ. ಕನ್ನಡ ಭಾಷೆಯನ್ನು ಮಾತಾಡಿದರೆ ಬೇರೆಯವರ ಎದುರು ಸಣ್ಣದಾಗಿ ಕಾಣುತ್ತೇವೆ ಎನ್ನುವ ಮನೋಭಾವನೆಯನ್ನು ಮೊದಲು ತೊಡೆದು ಹಾಕಬೇಕು. ವಿದ್ಯಾರ್ಥಿ ಜೀವನದಲ್ಲಿ ಕನ್ನಡವನ್ನು ಕಲಿಯಬೇಕೆಂಬುದನ್ನು ಕಡ್ಡಾಯ ಮಾಡಬೇಕು.

ಬೇರೆ ಭಾಷೆಯನ್ನು ಕಲಿಯುವುದು ಅನಿವಾರ್ಯ ಆದರೆ ನಮ್ಮ ಕನ್ನಡವನ್ನು ಮರೆಯುವುದು ಉತ್ತಮವಲ್ಲ. ವಿದೇಶಕ್ಕೆ ಹೋದರೆ ಕನ್ನಡವನ್ನು ಸಂಪೂರ್ಣವಾಗಿ ಮರೆತುಬಿಡುವ ಜನ. ನಗರದವರಿಗಂತೂ ಕನ್ನಡವೇ ಬರೆಯಲು ಓದಲು ಬರುವುದಿಲ್ಲ. ನಮ್ಮ ಸಹಜೀವನದಲ್ಲಿ ಕನ್ನಡ ಯಶಸ್ಸನ್ನು ನೀಡುತ್ತದೆ ಎಂಬುದನ್ನು ಎಲ್ಲೆಡೆ ಹರಡಬೇಕು. ಎರಡನೇ ಭಾಷೆಯಾಗಿ ಕನ್ನಡ ಭಾಷೆಯನ್ನು ಅಧಿಕೃತವಾಗಿ ಸರ್ಕಾರವು ಘೋಷಿಸಿದ್ದು, ಕನ್ನಡ ಭಾಷೆಯನ್ನು ಮಾತನಾಡಲು ಮುಜುಗರ ಪಡುವ ಜನರನ್ನು ಕಾಣಬಹುದು.

ಮುಜುಗರ ಪಡದೇ ಕನ್ನಡಿಗ ಎಂದು ಎದೆತಟ್ಟಿ ಹೇಳಬೇಕು. ಆಂಗ್ಲ ಭಾಷೆಯವರನ್ನು ಸಹ ಕನ್ನಡ ಮಾತನಾಡುವ ಹಾಗೆ ನಾವು ಮಾಡಬೇಕು ಎಲ್ಲವೂ ಸಾಧ್ಯ ನಮ್ಮಿಂದಲೇ. ಆಗ ಮಾತ್ರ ಪರಭಾಷೆಗಳಿಗೆ ನಮ್ಮ ಭಾಷೆಯ ಕುರಿತು ಗೌರವ ಬೆಳೆಯಲು ಸಾಧ್ಯ. ಕನ್ನಡವನ್ನು ಓದುವ ಮತ್ತು ಬರೆಯುವ ಸಂಸ್ಕೃತಿಯನ್ನು ಬಾಲ್ಯದಿಂದಲೇ ಅಳವಡಿಸಿಕೊಳ್ಳಬೇಕು. ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗಾಗಿ ಉಳಿಸುವುದೇ ನಮ್ಮ ಕರ್ತವ್ಯವಾಗಿರುತ್ತದೆ. ಕನ್ನಡ ಶಾಲೆಗಳು ದಿನೇ ದಿನೇ ಕಮ್ಮಿ ಆಗಿರುವುದು ಕಮ್ಮಿ ಆಗುತ್ತಿರುವುದು ವಿಷಾದವೇ ಸರಿ.

ಭೂ ನೆಲದ ಸಂಸ್ಕೃತಿ ಕನ್ನಡ ಭಾಷೆ ಅದನ್ನು ಅಳಿಯದ ಹಾಗೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಆಗಿರುತ್ತದೆ. ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿದ ಹೆಗ್ಗಳಿಕೆ ಕನ್ನಡದ ಕವಿಗಳಿಗೆ ಇವೆ. ಕನ್ನಡ ಭಾಷೆ ಸಾವಿರಾರು ಇತಿಹಾಸಗಳನ್ನು ಹೊಂದಿದ್ದು ಅದನ್ನು ಯುವಜನರಿಗೆ ತಿಳಿಸುವ ಹಾಗೂ ಪ್ರಚಾರ ಮಾಡುವ ಎಲ್ಲಾ ಕಾರ್ಯಗಳನ್ನು ಜಾರಿಗೊಳಿಸಬೇಕು. ಹಾಗಾಗಿ ನಮ್ಮ ಭಾಷೆಯನ್ನು ಮರೆಯದೆ ಪ್ರೀತಿಸುವುದು ನಮ್ಮ ಹಕ್ಕು.

ಕನ್ನಡವೇ ಸತ್ಯ.. ಕನ್ನಡವೇ ನಿತ್ಯ

ಜೈ ಕನ್ನಡಾಂಬೆ..

ಕೃತಿ ಬಲ್ಯಾಯ

Published On - 10:03 am, Tue, 1 November 22

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ