AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dhanurmasa 2025: ಇಂದಿನಿಂದ ‘ಧನುರ್ಮಾಸ’ ಆರಂಭ; ಈ ಸಮಯದಲ್ಲಿ ಶುಭಕಾರ್ಯ ಯಾಕೆ ನಿಷಿದ್ಧ?

ಡಿಸೆಂಬರ್ 16 ರಿಂದ ಆರಂಭವಾಗುವ ಧನುರ್ಮಾಸದಲ್ಲಿ ಸೂರ್ಯನು ಧನು ರಾಶಿಗೆ ಪ್ರವೇಶಿಸುತ್ತಾನೆ. ಈ ಸಮಯದಲ್ಲಿ ಮದುವೆ, ಗೃಹ ಪ್ರವೇಶ ಮುಂತಾದ ಶುಭ ಕಾರ್ಯಗಳನ್ನು ಮಾಡುವುದು ನಿಷಿದ್ಧವಾಗಿರುತ್ತದೆ. ಈ ಅವಧಿಯಲ್ಲಿ ಶುಭ ಕಾರ್ಯಗಳನ್ನು ಏಕೆ ಮಾಡಬಾರದು ಎಂಬ ಸಾಮಾನ್ಯ ಪ್ರಶ್ನೆ ಅನೇಕರಲ್ಲಿ ಉದ್ಭವಿಸುತ್ತದೆ. ಇದಕ್ಕೆ ಉತ್ತರವನ್ನು ಇಲ್ಲಿ ತಿಳಿದುಕೊಳ್ಳಿ.

Dhanurmasa 2025: ಇಂದಿನಿಂದ ‘ಧನುರ್ಮಾಸ’ ಆರಂಭ; ಈ ಸಮಯದಲ್ಲಿ ಶುಭಕಾರ್ಯ ಯಾಕೆ ನಿಷಿದ್ಧ?
ಧನುರ್ಮಾಸ
ಅಕ್ಷತಾ ವರ್ಕಾಡಿ
|

Updated on:Dec 16, 2025 | 10:19 AM

Share

ಇಂದಿನಿಂದ (ಡಿಸೆಂಬರ್ 16) ಧನುರ್ಮಾಸ ಆರಂಭವಾಗುತ್ತಿದೆ. ಈ ದಿನ ಸೂರ್ಯನು ಧನು ರಾಶಿಗೆ ಪ್ರವೇಶಿಸುವುದರಿಂದ ಒಂದು ತಿಂಗಳ ವರೆಗೆ ಧನುರ್ಮಾಸವಿರುತ್ತದೆ. ಇದನ್ನು ಧನು ಸಂಕ್ರಮಣಎಂದೂ ಕೂಡ ಕರೆಯಲಾಗುತ್ತದೆ. ಈ ಸಮಯದಲ್ಲಿ ಮದುವೆ, ಗೃಹ ಪ್ರವೇಶ ಮುಂತಾದ ಶುಭ ಕಾರ್ಯಗಳನ್ನು ಮಾಡುವುದು ನಿಷಿದ್ಧವಾಗಿರುತ್ತದೆ. ಈ ಅವಧಿಯಲ್ಲಿ ಶುಭ ಕಾರ್ಯಗಳನ್ನು ಏಕೆ ಮಾಡಬಾರದು ಎಂಬ ಸಾಮಾನ್ಯ ಪ್ರಶ್ನೆ ಅನೇಕರಲ್ಲಿ ಉದ್ಭವಿಸುತ್ತದೆ. ಇದಕ್ಕೆ ಉತ್ತರವನ್ನು ಇಲ್ಲಿ ತಿಳಿದುಕೊಳ್ಳಿ.

ಈ ಮಾಸದಲ್ಲಿ ವಿವಾಹ, ಗೃಹಪ್ರವೇಶ, ಹೊಸ ವಾಹನ ಖರೀದಿ, ಅಥವಾ ಆಸ್ತಿ ಕೊಂಡುಕೊಳ್ಳುವುದು ಮುಂತಾದ ಪ್ರಮುಖ ಶುಭ ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಗುರುಗ್ರಹದ ಬಲ. ಎಲ್ಲಾ ಶುಭ ಕಾರ್ಯಗಳಿಗೆ ಅಧಿಪತಿ ಗುರುಗ್ರಹ. ಮನೆ ಖರೀದಿಸಲು, ವಾಹನ ಖರೀದಿಸಲು ಅಥವಾ ವಿವಾಹಕ್ಕೆ ಗುರುಬಲ ಅತ್ಯಗತ್ಯ. ಗುರುಬಲ ಇದ್ದಾಗ, ಪ್ರಯತ್ನಿಸಿದರೆ ಅಲ್ಪ ಹಣವಿದ್ದರೂ ಕಾರ್ಯಗಳು ಸಲೀಸಾಗಿ ನೆರವೇರುತ್ತವೆ ಎಂದು ನಂಬಿಕೆ.

ಗುರು ಗ್ರಹವು ಧನು ರಾಶಿ ಮತ್ತು ಮೀನ ರಾಶಿಗಳ ಅಧಿಪತಿಯಾಗಿದೆ. ಧನುರ್ಮಾಸದಲ್ಲಿ ಸೂರ್ಯನು (ರವಿ) ಗುರುಗ್ರಹದ ಧನುರ್ ರಾಶಿಗೆ ಪ್ರವೇಶಿಸುತ್ತಾನೆ. ಈ ಸಮಯದಲ್ಲಿ, ಸೂರ್ಯನು ಗುರುವಿನ ಮನೆಯಲ್ಲಿ ಇರುವಾಗ, ಆ ಮನೆಯ ಅಧಿಪತಿಯಾದ ಗುರುವಿನ ಬಲ ಅಥವಾ ಶಕ್ತಿಯು ಕಡಿಮೆಯಾಗುತ್ತದೆ. ಗುರುವಿನ ಶಕ್ತಿ ಕಡಿಮೆ ಇದ್ದಾಗ ಕೈಗೊಳ್ಳುವ ಯಾವುದೇ ಕಾರ್ಯಗಳು ವಿಘ್ನಗಳಿಗೆ ಕಾರಣವಾಗಬಹುದು ಎಂದು ಜ್ಯೋತಿಷ್ಯ ಹೇಳುತ್ತದೆ. ಇದರಿಂದ ಕಾರ್ಯಗಳಲ್ಲಿ ಅಡೆತಡೆಗಳು, ಅನಿರೀಕ್ಷಿತ ಸಮಸ್ಯೆಗಳು ಉಂಟಾಗಬಹುದು.

ಇದನ್ನೂ ಓದಿ: ಮದುವೆಯಲ್ಲಿ ಹೆಚ್ಚಾಗಿ ವಧು ಕೆಂಪು ಬಣ್ಣದ ಸೀರೆ ಉಡೋದು ಯಾಕೆ ಗೊತ್ತಾ?

ಆದರೆ ಧನುರ್ಮಾಸವು ಪೂಜೆ, ಪುನಸ್ಕಾರ, ವಿಷ್ಣುವಿನ ಆರಾಧನೆ, ದಾನ ಮತ್ತು ಧರ್ಮ ಕಾರ್ಯಗಳಿಗೆ ವಿಶೇಷ ಮಹತ್ವವನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ ಸೂರ್ಯೋದಯಕ್ಕೆ ಮುಂಚೆಯೇ ಎದ್ದು, ತಣ್ಣೀರು ಸ್ನಾನ ಮಾಡಿ (ಶಾಸ್ತ್ರಗಳ ಪ್ರಕಾರ, ಆದರೂ ಇದನ್ನು ಎಲ್ಲರೂ ಪಾಲಿಸುವುದಿಲ್ಲ), ಲಕ್ಷ್ಮಿ, ವಿಷ್ಣು ಮತ್ತು ಇತರ ದೇವತೆಗಳಿಗೆ ಅಷ್ಟೋತ್ತರ ಅಥವಾ ಷೋಡಶೋಪಚಾರ ಪೂಜೆಗಳನ್ನು ಮಾಡುವುದು ಶ್ರೇಷ್ಠ. ವಿಶೇಷವಾಗಿ, ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ತುಳಸಿಯನ್ನು ಅರ್ಪಿಸಿ ಪೂಜಿಸುವುದರಿಂದ ಸಕಲ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲದೆ, ಅರಳೀಮರವನ್ನು ದರ್ಶನ ಮಾಡಿ, ಸ್ಪರ್ಶಿಸಿ ನಮಸ್ಕಾರ ಮಾಡುವುದರಿಂದ ಪುಣ್ಯ ಪ್ರಾಪ್ತವಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ವೃಕ್ಷೋ ರಕ್ಷತಿ ರಕ್ಷಿತಃ ಎಂಬಂತೆ ಅರಳೀಮರವು ದೈವಿಕ ವೃಕ್ಷವೆಂದು ಪೂಜಿಸಲ್ಪಡುತ್ತದೆ.

ಆದ್ದರಿಂದ, ಧನುರ್ಮಾಸವನ್ನು ಜಪ, ತಪ, ವಿಷ್ಣು ಮತ್ತು ಲಕ್ಷ್ಮಿ ಆರಾಧನೆಗಳಂತಹ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ. ಈ ಅವಧಿಯಲ್ಲಿ ಸಣ್ಣಪುಟ್ಟ ಕಾರ್ಯಗಳಾದ ನಾಮಕರಣಗಳನ್ನು ಮಾಡಬಹುದಾದರೂ, ಪ್ರಮುಖ ಮತ್ತು ಬೃಹತ್ ಶುಭ ಕಾರ್ಯಗಳನ್ನು ಮುಂದೂಡುವುದು ಹಿಂದೂ ಪರಂಪರೆಯ ಭಾಗವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:19 am, Tue, 16 December 25

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು