AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vasthu Tips: ವಾರದ ಈ ಎರಡು ದಿನ ಮಣ್ಣಿನ ಮಡಕೆ ಖರೀದಿಸಲೇಬೇಡಿ; ವಾಸ್ತು ನಿಯಮ ಇಲ್ಲಿದೆ

ಇತ್ತೀಚಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಮಣ್ಣಿನ ಮಡಕೆ ಬಳಸುವುದು ಸಾಮಾನ್ಯವಾಗಿದೆ. ಮನೆಯಲ್ಲಿ ಬಳಸುವ ಮಣ್ಣಿನ ಮಡಕೆ ಖರೀದಿಸಲು ಕೆಲವು ವಾಸ್ತು ನಿಯಮಗಳಿವೆ. ಭಾನುವಾರ, ಮಂಗಳವಾರ ಹಾಗೂ ಸೂರ್ಯಾಸ್ತದ ನಂತರ ಮಣ್ಣಿನ ಪಾತ್ರೆ ಖರೀದಿಸುವುದು ಅಶುಭ ಏಕೆ? ಜೊತೆಗೆ ಆರೋಗ್ಯಕರ ಮತ್ತು ಗಟ್ಟಿಮುಟ್ಟಾದ ಮಡಕೆಯನ್ನು ಆರಿಸುವ ಸರಿಯಾದ ವಿಧಾನ ಇಲ್ಲಿದೆ.

Vasthu Tips: ವಾರದ ಈ ಎರಡು ದಿನ ಮಣ್ಣಿನ ಮಡಕೆ ಖರೀದಿಸಲೇಬೇಡಿ; ವಾಸ್ತು ನಿಯಮ ಇಲ್ಲಿದೆ
ಮಣ್ಣಿನ ಮಡಕೆ Image Credit source: theboholab
ಅಕ್ಷತಾ ವರ್ಕಾಡಿ
|

Updated on:Aug 05, 2026 | 10:41 AM

Share

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಬೇಸಿಗೆಯಲ್ಲಷ್ಟೇ ಅಲ್ಲದೆ, ವರ್ಷವಿಡೀ ಕುಡಿಯುವ ನೀರಿಗಾಗಿ ಮಣ್ಣಿನ ಮಡಕೆಗಳನ್ನು ಬಳಸುವುದು ಸಾಮಾನ್ಯವಾಗಿದೆ. ಮಣ್ಣಿನ ಪಾತ್ರೆಯ ನೀರು ಆರೋಗ್ಯಕ್ಕೆ ಅತ್ಯಂತ ಹಿತಕರ. ಆದರೆ, ವಾಸ್ತು ಶಾಸ್ತ್ರ ಮತ್ತು ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಹೊಸ ಮಣ್ಣಿನ ಮಡಕೆಯನ್ನು ಯಾವಾಗ ಖರೀದಿಸಬೇಕು, ಯಾವ ದಿನಗಳಲ್ಲಿ ಖರೀದಿಸಬಾರದು ಮತ್ತು ಅದನ್ನು ಆಯ್ಕೆ ಮಾಡುವ ಸರಿಯಾದ ವಿಧಾನ ಯಾವುದು ಎಂಬುದು ಅತ್ಯಂತ ಮುಖ್ಯವಾಗಿದೆ.

ಮಣ್ಣಿನ ಮಡಕೆ ಖರೀದಿಸಲು ಈ ದಿನಗಳು ಅಶುಭವೇ?

ವಾಸ್ತು ಶಾಸ್ತ್ರದ ಪ್ರಕಾರ ಭಾನುವಾರ ಮತ್ತು ಮಂಗಳವಾರದಂದು ಜೇಡಿಮಣ್ಣು, ಮಣ್ಣಿನ ಪಾತ್ರೆಗಳು ಅಥವಾ ಯಾವುದೇ ಮಣ್ಣಿನ ವಸ್ತುಗಳನ್ನು ಖರೀದಿಸುವುದು ಶುಭವಲ್ಲ. ಮಂಗಳ ಗ್ರಹವು ಮಣ್ಣಿನ ತತ್ತ್ವವನ್ನು ಪ್ರತಿನಿಧಿಸುವುದರಿಂದ, ಮಂಗಳವಾರ ಮಣ್ಣಿನ ವಸ್ತುಗಳನ್ನು ಮನೆಗೆ ತರುವುದು ಸೂಕ್ತವಲ್ಲ ಎಂಬ ನಂಬಿಕೆ ಇದೆ. ಇದರ ಜೊತೆಗೆ ಕೆಲವೊಂದು ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ ಶನಿವಾರದಂದೂ ಕೂಡ ಮಣ್ಣಿನ ಮಡಕೆಗಳನ್ನು ಖರೀದಿಸುವುದನ್ನು ತಪ್ಪಿಸುವುದು ಒಳಿತು.

ಸೂರ್ಯಾಸ್ತದ ನಂತರ ಮಡಕೆ ಖರೀದಿಸಬಾರದು ಏಕೆ?

ಸೂರ್ಯಾಸ್ತದ ನಂತರ ಅಂದರೆ ಸಂಜೆ ಅಥವಾ ರಾತ್ರಿಯ ಸಮಯದಲ್ಲಿ ಮಣ್ಣಿನ ಪಾತ್ರೆಗಳನ್ನು ಮನೆಗೆ ಖರೀದಿಸಿ ತರುವುದು ಅಶುಭ ತರುತ್ತದೆ ಎಂದು ಹೇಳಲಾಗುತ್ತದೆ. ಮಣ್ಣಿನ ಮಡಕೆಯನ್ನು ಯಾವಾಗಲೂ ಹಗಲಿನ ವೇಳೆಯಲ್ಲಿ, ಸೂರ್ಯನ ಬೆಳಕಿದ್ದಾಗ ಮಾತ್ರ ಖರೀದಿಸಬೇಕು. ಹಳೆಯ ಮಡಕೆ ಒಡೆದು ಹೋದಾಗ ಅಥವಾ ಹೊಸ ಮಡಕೆ ಬೇಕಾದಾಗ ಈ ಕಾಲಮಾನದ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಖರೀದಿಸುವುದು ಉತ್ತಮ.

ಅತಿಯಾಗಿ ಹೊಳೆಯುವ ಅಥವಾ ಬಣ್ಣದ ಮಡಕೆಗಳಿಂದ ದೂರವಿರಿ:

ಮಡಕೆಯನ್ನು ಆಯ್ಕೆ ಮಾಡುವಾಗ ಕೇವಲ ವಾಸ್ತು ಮಾತ್ರವಲ್ಲದೆ ಆರೋಗ್ಯದ ಕಡೆಯೂ ಗಮನ ಹರಿಸುವುದು ಅಗತ್ಯ. ಮಾರುಕಟ್ಟೆಯಲ್ಲಿ ಸಿಗುವ ಅತಿಯಾಗಿ ಹೊಳೆಯುವ ಅಥವಾ ಆಕರ್ಷಕ ಬಣ್ಣ ಬಳಿದಿರುವ ಮಡಕೆಗಳನ್ನು ಖರೀದಿಸಬೇಡಿ. ಇವುಗಳ ಮೇಲೆ ರಾಸಾಯನಿಕ ಬಣ್ಣ (Chemical colors) ಅಥವಾ ವಾರ್ನಿಷ್ ಲೇಪಿಸಿರುತ್ತಾರೆ. ಇಂತಹ ಮಡಕೆಯಲ್ಲಿ ನೀರನ್ನು ಸಂಗ್ರಹಿಸಿ ಕುಡಿಯುವುದರಿಂದ ರಾಸಾಯನಿಕಗಳು ನೀರಿಗೆ ಸೇರಿ ಆರೋಗ್ಯಕ್ಕೆ ತೀವ್ರ ಹಾನಿ ಉಂಟಾಗಬಹುದು.

ಮಣ್ಣಿನ ಮಡಕೆಯನ್ನು ಸರಿಯಾಗಿ ಪರೀಕ್ಷಿಸಿ ಖರೀದಿಸುವ ವಿಧಾನ:

ಉತ್ತಮ ಮಡಕೆಯನ್ನು ಆರಿಸಲು ಅದನ್ನು ಲಘುವಾಗಿ ಬೆರಳಿನಿಂದ ತಟ್ಟಿ ನೋಡಿ. ತಟ್ಟಿದಾಗ ಮಂದವಾದ ಅಥವಾ ಸಣ್ಣ ಶಬ್ದ ಬಂದರೆ ಅದು ಮಡಕೆ ಸರಿಯಾಗಿ ಬೇಯದೇ ಕಚ್ಚಾ ಆಗಿರಬಹುದು ಎಂದರ್ಥ. ಬಲವಾದ ಮತ್ತು ಸ್ಪಷ್ಟವಾದ ‘ಖಣ’ ಎಂಬ ನಾದ ಬರುವ ಮಡಕೆಯನ್ನು ಆಯ್ಕೆ ಮಾಡಿ. ಕೊನೆಯದಾಗಿ, ಖರೀದಿಸುವ ಮುನ್ನವೇ ಅದಕ್ಕೆ ನೀರು ತುಂಬಿಸಿ, ಎಲ್ಲಾದರೂ ನೀರು ಸೋರುತ್ತಿದೆಯೇ (Leakage) ಎಂಬುದನ್ನು ಖಚಿತಪಡಿಸಿಕೊಂಡು ಮನೆಗೆ ತರುವುದು ಒಳ್ಳೆಯದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:40 am, Wed, 5 August 26

Follow Us
ಸುಬ್ಬಾರೆಡ್ಡಿ ಬೆಂಬಲಿಸಿ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಸ್ತಬ್ಧ
ಸುಬ್ಬಾರೆಡ್ಡಿ ಬೆಂಬಲಿಸಿ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಸ್ತಬ್ಧ
ಕೊಪ್ಪಳ ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಗೊಂಡಬಾಳ್ ರಾಜೀನಾಮೆ!
ಕೊಪ್ಪಳ ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಗೊಂಡಬಾಳ್ ರಾಜೀನಾಮೆ!
ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಯಾರಿಗೂ ಅನುಮಾನ ಬಾರದಂತೆ ಐಫೋನ್ ಕದ್ದ ಯುವತಿ! ಕಳ್ಳತನದ ವಿಡಿಯೋ ವೈರಲ್
ಯಾರಿಗೂ ಅನುಮಾನ ಬಾರದಂತೆ ಐಫೋನ್ ಕದ್ದ ಯುವತಿ! ಕಳ್ಳತನದ ವಿಡಿಯೋ ವೈರಲ್
ಮಳೆಯಾರ್ಭಟಕ್ಕೆ ಕುಸಿದ ಖಾಸಗಿ ಶಾಲೆಯ ಗೋಡೆ: ತಪ್ಪಿದ ಭಾರೀ ಅನಾಹುತ
ಮಳೆಯಾರ್ಭಟಕ್ಕೆ ಕುಸಿದ ಖಾಸಗಿ ಶಾಲೆಯ ಗೋಡೆ: ತಪ್ಪಿದ ಭಾರೀ ಅನಾಹುತ
ಸಚಿವ ಸಂಪುಟದಲ್ಲಿ 2-3 ಮಹಿಳಾ ಶಾಸಕರಿಗೆ ಸ್ಥಾನ ನೀಡಬೇಕಿತ್ತು: ರಮ್ಯಾ
ಸಚಿವ ಸಂಪುಟದಲ್ಲಿ 2-3 ಮಹಿಳಾ ಶಾಸಕರಿಗೆ ಸ್ಥಾನ ನೀಡಬೇಕಿತ್ತು: ರಮ್ಯಾ
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್