AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Money Plant Vastu: ಮನೆಯಲ್ಲಿ ಮನಿ ಪ್ಲಾಂಟ್ ನೆಡುತ್ತಿದ್ದೀರಾ? ವಾಸ್ತು ಪ್ರಕಾರ ಈ ತಪ್ಪು ಮಾಡಬೇಡಿ!

ಮನಿ ಪ್ಲಾಂಟ್ ಮನೆಗೆ ಸಕಾರಾತ್ಮಕ ಶಕ್ತಿ ಮತ್ತು ಸಮೃದ್ಧಿ ತರುತ್ತದೆ ಎಂದು ನಂಬಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ ಇಡುವ ದಿಕ್ಕು, ಬೆಳೆಸುವ ವಿಧಾನ ಮತ್ತು ಅದರ ಆರೈಕೆ ಬಹಳ ಮುಖ್ಯ. ಆಗ್ನೇಯ ದಿಕ್ಕಿನಲ್ಲಿ ಇಡುವುದು ಶುಭ. ಒಣಗಿದ ಎಲೆಗಳನ್ನು ತೆಗೆಯುವುದು, ಬಳ್ಳಿಗಳು ಮೇಲಕ್ಕೆ ಬೆಳೆಯುವಂತೆ ನೋಡಿಕೊಳ್ಳುವುದು ಮುಖ್ಯ. ಸಣ್ಣ ತಪ್ಪುಗಳು ಅದರ ಶುಭ ಪರಿಣಾಮಗಳನ್ನು ಕಡಿಮೆ ಮಾಡಬಹುದು. ಸರಿಯಾದ ಆರೈಕೆಯಿಂದ ಗರಿಷ್ಠ ಲಾಭ ಪಡೆಯಿರಿ.

Money Plant Vastu: ಮನೆಯಲ್ಲಿ ಮನಿ ಪ್ಲಾಂಟ್ ನೆಡುತ್ತಿದ್ದೀರಾ? ವಾಸ್ತು ಪ್ರಕಾರ ಈ ತಪ್ಪು ಮಾಡಬೇಡಿ!
ಮನೆಯಲ್ಲಿ ಮನಿ ಪ್ಲಾಂಟ್ ನೆಡುತ್ತಿದ್ದೀರಾ?
ಅಕ್ಷತಾ ವರ್ಕಾಡಿ
|

Updated on: Aug 06, 2026 | 7:56 AM

Share

ಸಾಕಷ್ಟು ಜನರು ಮನೆಗಳನ್ನು ಸುಂದರಗೊಳಿಸಲು ವಿವಿಧ ರೀತಿಯ ಸಸ್ಯಗಳನ್ನು ನೆಡುತ್ತಾರೆ. ಇವುಗಳಲ್ಲಿ ಮನಿ ಪ್ಲಾಂಟ್ ಅತ್ಯಂತ ಜನಪ್ರಿಯವಾದದ್ದು. ಅನೇಕ ಜನರು ಇದನ್ನು ಮನೆಯಲ್ಲಿ ಸಕಾರಾತ್ಮಕ ಶಕ್ತಿ, ಸಂತೋಷ, ಸಮೃದ್ಧಿ ಮತ್ತು ಆರ್ಥಿಕ ಪ್ರಗತಿಯ ಸಂಕೇತವೆಂದು ನಂಬುತ್ತಾರೆ. ವಾಸ್ತು ಶಾಸ್ತ್ರದಲ್ಲೂ ಮನಿ ಪ್ಲಾಂಟ್‌ಗೆ ವಿಶೇಷ ಸ್ಥಾನ ನೀಡಲಾಗಿದೆ. ಆದಾಗ್ಯೂ, ಮನಿ ಪ್ಲಾಂಟ್ ನೆಡುವಾಗ ಅಥವಾ ಇಡುವಾಗ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡಿದರೆ, ವಾಸ್ತು ಪ್ರಕಾರ ಅದರ ಶುಭ ಪರಿಣಾಮಗಳು ಕಡಿಮೆಯಾಗಬಹುದು. ಮನಿ ಪ್ಲಾಂಟ್‌ಗೆ ಸಂಬಂಧಿಸಿದಂತೆ ನೆನಪಿಡಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ.

ಮನಿ ಪ್ಲಾಂಟ್ ಇಡಲು ಸೂಕ್ತವಾದ ದಿಕ್ಕು ಯಾವುದು?

ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ ಇಡುವ ದಿಕ್ಕಿಗೆ ವಿಶೇಷ ಪ್ರಾಮುಖ್ಯತೆ ಇದೆ. ಮನೆಯ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಡುವುದು ಅತ್ಯಂತ ಶುಭ. ಈ ದಿಕ್ಕು ಸಮೃದ್ಧಿ ಮತ್ತು ಅಭಿವೃದ್ಧಿಗೆ ಸಂಬಂಧಸಿದ್ದಾಗಿದೆ. ಕೆಲವರು ಮನಿ ಪ್ಲಾಂಟ್ ಅನ್ನು ಈಶಾನ್ಯ ದಿಕ್ಕಿನಲ್ಲಿ ಇಡುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡುತ್ತಾರೆ. ಏಕೆಂದರೆ ವಾಸ್ತು ಪ್ರಕಾರ ಈ ದಿಕ್ಕಿಗೆ ವಿಭಿನ್ನ ನಿಯಮಗಳನ್ನು ಹೇಳಲಾಗಿದೆ.

ಬಳ್ಳಿಗಳು ಮೇಲಕ್ಕೆ ಬೆಳೆಯಲಿ, ನೆಲಕ್ಕೆ ತಾಕದಿರಲಿ:

ವಾಸ್ತು ನಂಬಿಕೆಗಳ ಪ್ರಕಾರ, ಮನಿ ಪ್ಲಾಂಟ್ ಅನ್ನು ನೇರವಾಗಿ ನೆಲದ ಮೇಲೆ ಇಡುವ ಬದಲು ಸ್ವಲ್ಪ ಎತ್ತರದಲ್ಲಿ ಇಡುವುದು ಹೆಚ್ಚು ಸೂಕ್ತ. ಗಿಡದ ಬಳ್ಳಿಗಳು ನೆಲದ ಮೇಲೆ ಹರಡುವ ಬದಲು ಮೇಲ್ಮುಖವಾಗಿ (ಮೇಲಕ್ಕೆ) ಬೆಳೆಯುವಂತೆ ಬೆಂಬಲ ನೀಡುವುದು ಶುಭ ತರುತ್ತದೆ ಎಂದು ನಂಬಲಾಗಿದೆ.

ಒಣಗಿದ ಎಲೆಗಳನ್ನು ತಕ್ಷಣವೇ ತೆಗೆದುಹಾಕಿ:

ಮನಿ ಪ್ಲಾಂಟ್‌ನ ಒಣಗಿದ ಅಥವಾ ಹಾಳಾದ ಎಲೆಗಳು ಮನೆಯೊಳಗೆ ನಕಾರಾತ್ಮಕತೆಯನ್ನು ತರುತ್ತವೆ ಎಂಬುದು ವಾಸ್ತು ನಂಬಿಕೆ. ಸಸ್ಯವನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಮತ್ತು ಹಾನಿಗೊಳಗಾದ ಎಲೆಗಳನ್ನು ತಕ್ಷಣವೇ ತೆಗೆದುಹಾಕಬೇಕು. ಸಸ್ಯವು ಆರೋಗ್ಯಕರವಾಗಿ ಉಳಿಯಲು ಸರಿಯಾದ ಬೆಳಕು ಮತ್ತು ಅಗತ್ಯವಿರುವಷ್ಟು ನೀರನ್ನು ಒದಗಿಸುವುದು ಮುಖ್ಯ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಗಿಡವನ್ನು ಕದ್ದು ನೆಡುವುದು ಸರಿಯೇ?

ಕೆಲವು ವಾಸ್ತು ನಂಬಿಕೆಗಳ ಪ್ರಕಾರ, ಬೇರೆಯವರ ಮನೆಯಿಂದ ಮನಿ ಪ್ಲಾಂಟ್‌ನ ಕೊಂಬೆಗಳನ್ನು ಕದ್ದು ತಂದು ನೆಡುವುದು ಸೂಕ್ತವಲ್ಲ. ಸಸ್ಯವನ್ನು ಪ್ರೀತಿಯಿಂದ, ಸರಿಯಾದ ಮಾರ್ಗದಲ್ಲಿ ಪಡೆದುಕೊಳ್ಳಬೇಕು ಎಂದು ನಂಬಲಾಗುತ್ತದೆ. ಏನೇ ಆದರೂ, ಸಸ್ಯದ ಸರಿಯಾದ ಆರೈಕೆ ಮತ್ತು ನಿರ್ವಹಣೆ ಅದರ ಬೆಳೆವಣಿಗೆಗೆ ಅತ್ಯಂತ ಮುಖ್ಯ.

ಮನಿ ಪ್ಲಾಂಟ್‌ನ ಸರಿಯಾದ ಆರೈಕೆ ಹೇಗೆ?

ಮನಿ ಪ್ಲಾಂಟ್ ಸುಲಭವಾಗಿ ಬೆಳೆಯುವ ಸಸ್ಯವಾದರೂ, ಅದಕ್ಕೆ ಸೂಕ್ತ ಆರೈಕೆಯ ಅಗತ್ಯವಿದೆ. ಅತಿಯಾಗಿ ನೀರು ಹಾಕುವುದರಿಂದ ಗಿಡದ ಬೇರುಗಳು ಕೊಳೆಯಬಹುದು. ನೀರು ಕಡಿಮೆಯಾದರೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಒಣಗಬಹುದು. ಸಸ್ಯಕ್ಕೆ ಸರಿಯಾದ ಪ್ರಮಾಣದ ಬೆಳಕು, ಸೀಮಿತ ನೀರು ಹಾಗೂ ಸಮಯಕ್ಕೆ ಸರಿಯಾಗಿ ಸಮರುವಿಕೆ (Pruning) ಮಾಡಿದರೆ, ಅದು ದೀರ್ಘಕಾಲದವರೆಗೆ ಸುಂದರವಾಗಿ ಮತ್ತು ಹಸಿರಾಗಿ ಉಳಿಯುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us