ಇನ್ಸ್ಪೆಕ್ಟರ್ ಧಮ್ಕಿ ನಡುವೆಯೇ ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ಟಿ.ನರಸೀಪುರ ಗಣೇಶೋತ್ಸವ ಆಯೋಜಕರಿಗೆ ಇನ್ಸ್ಪೆಕ್ಟರ್ ಧನಂಜಯ್ ಧಮ್ಕಿ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ವಿಪಕ್ಷಗಳು ಧನಂಜಯ್ ಅಮಾನತಿಗೆ ಆಗ್ರಹಿಸಿದರೆ, ಇತ್ತೊಂದೆಡೆ ಸಿಎಂ ಆದಿಯಾಗಿ ಸಚಿವರು ಇನ್ಸ್ಪೆಕ್ಟರ್ ಬೆನ್ನಿಗೆ ನಿಂತಿದ್ದಾರೆ. ಇದರ ಮಧ್ಯೆ ಇನ್ಸ್ಪೆಕ್ಟರ್ ಧನಂಜಯ್ ಸವಾಲನ್ನ ಹಿಂದೂ ಜಾಗರಣ ವೇದಿಕೆ ಸ್ವೀಕರಿಸಿದ್ದು, ಟಿ. ನರಸೀಪುರದಲ್ಲಿ ಮೊದಲ ಬಾರಿಗೆ ಪೊಲೀಸ್ ಠಾಣೆಯ 200 ಮೀಟರ್ ದೂರದಲ್ಲೇ ಗಣಪತಿ ಪ್ರತಿಷ್ಟಾಪನೆ ಮಾಡಲಾಗಿದೆ. ಅಷ್ಟೇ ಅಲ್ಲ, ಮಸೀದಿ ಇರುವ ಲಿಂಕ್ ರಸ್ತೆಯಲ್ಲೇ ಸೆಪ್ಟೆಂಬರ್ 18ರಂದು ಗಣೇಶ ಮೂರ್ತಿ ಭವ್ಯ ಮೆರವಣಿಗೆಗೆ ಕರೆ ಕೊಟ್ಟಿದ್ದರು. ಅದರಂತೆ ಟಿ.ನರಸೀಪುರ ಗಣೇಶನ ಬೃಹತ್ ಶೋಭಾಯಾತ್ರೆಯ ನೇರಪ್ರಸಾರ ಇಲ್ಲಿದೆ.
ಮೈಸೂರು, (ಸೆಪ್ಟೆಂಬರ್ 18): ಟಿ.ನರಸೀಪುರ ಗಣೇಶೋತ್ಸವ ಆಯೋಜಕರಿಗೆ ಇನ್ಸ್ಪೆಕ್ಟರ್ ಧನಂಜಯ್ ಧಮ್ಕಿ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ವಿಪಕ್ಷಗಳು ಧನಂಜಯ್ ಅಮಾನತಿಗೆ ಆಗ್ರಹಿಸಿದರೆ, ಇತ್ತೊಂದೆಡೆ ಸಿಎಂ ಆದಿಯಾಗಿ ಸಚಿವರು ಇನ್ಸ್ಪೆಕ್ಟರ್ ಬೆನ್ನಿಗೆ ನಿಂತಿದ್ದಾರೆ. ಇದರ ಮಧ್ಯೆ ಇನ್ಸ್ಪೆಕ್ಟರ್ ಧನಂಜಯ್ ಸವಾಲನ್ನ ಹಿಂದೂ ಜಾಗರಣ ವೇದಿಕೆ ಸ್ವೀಕರಿಸಿದ್ದು, ಟಿ. ನರಸೀಪುರದಲ್ಲಿ ಮೊದಲ ಬಾರಿಗೆ ಪೊಲೀಸ್ ಠಾಣೆಯ 200 ಮೀಟರ್ ದೂರದಲ್ಲೇ ಗಣಪತಿ ಪ್ರತಿಷ್ಟಾಪನೆ ಮಾಡಲಾಗಿದೆ. ಅಷ್ಟೇ ಅಲ್ಲ, ಮಸೀದಿ ಇರುವ ಲಿಂಕ್ ರಸ್ತೆಯಲ್ಲೇ ಸೆಪ್ಟೆಂಬರ್ 18ರಂದು ಗಣೇಶ ಮೂರ್ತಿ ಭವ್ಯ ಮೆರವಣಿಗೆಗೆ ಕರೆ ಕೊಟ್ಟಿದ್ದರು. ಅದರಂತೆ ಟಿ.ನರಸೀಪುರ ಗಣೇಶನ ಬೃಹತ್ ಶೋಭಾಯಾತ್ರೆಯ ನೇರಪ್ರಸಾರ ಇಲ್ಲಿದೆ.
Follow Us
Latest Videos

