
Ganesh Chaturthi
ವಿನಾಯಕ ಚೌತಿ..ಭಾರತದಲ್ಲಿ ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಇದೂ ಕೂಡ ಒಂದು. ಶಿವ ಪಾರ್ವತಿಯ ಪುತ್ರ ವಿನಾಯಕನ ಜನ್ಮದಿನದಂದು ವಿನಾಯಕ ಚೌತಿಯನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಚತುರ್ಥಿಯಂದು ವಿನಾಯಕ ಚೌತಿಯನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ವಿನಾಯಕ ಚತುರ್ಥಿ ಮತ್ತು ಗಣೇಶ ಚತುರ್ಥಿ ಎಂದೂ ಕರೆಯುತ್ತಾರೆ. ವಿನಾಯಕ ಚೌತಿ ಆಚರಣೆಯ ಅಂಗವಾಗಿ 11 ದಿನಗಳ ಕಾಲ ಗಣೇಶ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ನಿಮಜ್ಜನಕ್ಕೆ ಮೆರವಣಿಗೆಯಲ್ಲಿ ತೆರಳಲಾಗುತ್ತದೆ. ವಿಗ್ರಹ ನಿಮಜ್ಜನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲಾಗುತ್ತದೆ.
ಹಳ್ಳಿಗಳು, ಪಟ್ಟಣಗಳು, ಕಾಲೋನಿಗಳು ಮತ್ತು ನಗರಗಳಲ್ಲಿನ ಅಪಾರ್ಟ್ಮೆಂಟ್ಗಳಲ್ಲಿ ವಿನಾಯಕ ಚೌತಿ ಆಚರಣೆಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ವಿನಾಯಕ ಚೌತಿ ಮಹೋತ್ಸವಗಳು ಬ್ರಿಟಿಷ್ ಆಡಳಿತಗಾರರ ವಿರುದ್ಧ ಸ್ವಾತಂತ್ರ್ಯ ಚಳವಳಿಯಲ್ಲಿ ಎಲ್ಲ ಜನರಲ್ಲಿ ರಾಷ್ಟ್ರೀಯ ಮನೋಭಾವವನ್ನು ಬೆಳಗಿಸುವಲ್ಲಿ ಪ್ರಮುಖ ಪಾತ್ರವಹಿಸಿದವು. 1892 ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ತಿಲಕರು ದೇಶದ ಜನರಲ್ಲಿ ರಾಷ್ಟ್ರೀಯ ಮನೋಭಾವವನ್ನು ಬೆಳಗಿಸಲು ಗಣಪತಿ ಉತ್ಸವಗಳನ್ನು ಪ್ರಾರಂಭಿಸಿದರು.
ನಾಗಮಂಗಲ ಕೋಮುಗಲಭೆ ಕೇಸ್: ದೂರು ನೀಡಿದ್ದ ಪೊಲೀಸ್ ಅಧಿಕಾರಿಯೇ ಸಸ್ಪೆಂಡ್
Nagamangala Violence: ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಕೋಮುಗಲಭೆ ನಡೆದಿತ್ತು. ಮುಸ್ಲಿಮರು ಮೆರವಣಿಗೆ ವೇಳೆ ಕಲ್ಲುತೂರಿದ್ದರು. ಅಲ್ಲದೇ, ಕೆಲ ಅಂಗಡಿಗಳಿಗೂ ಬೆಂಕಿ ಹಾಕಲಾಗಿತ್ತು. ಈ ಗಲಭೆ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಕೋಮುಗಲಭೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
- Prashantha B
- Updated on: Oct 8, 2024
- 10:25 am
Lalbaugcha Raja Ganeshotsav Auction: ಲಾಲ್ಬಾಗ್ಚ ರಾಜ ಗಣಪ; ಭಕ್ತರ ಚಿನ್ನಾಭರಣ ಕಾಣಿಕೆಗಳ ಹರಾಜು; ಸಿಕ್ಕ ಆದಾಯ ಎಷ್ಟು?
Mumbai's Lalbaughcha Raja Ganeshotsav: ಮುಂಬೈನ ವಿಖ್ಯಾತ ಲಾಲ್ಬಾಗ್ಚ ರಾಜ ಗಣೇಶೋತ್ಸವದಲ್ಲಿ ಎರಡು ವಾರದಲ್ಲಿ 4.16 ಕಿಲೋ ಚಿನ್ನ, 64 ಕಿಲೋಗೂ ಹೆಚ್ಚು ಬೆಳ್ಳಿ ವಸ್ತುಗಳನ್ನು ಭಕ್ತರು ಕಾಣಿಕೆಯಾಗಿ ನೀಡಿದ್ದಾರೆ. ಅನಂತ ಅಂಬಾನಿ ನೀಡಿದ ಕಿರೀಟವೂ ಸೇರಿಸಿದರೆ ಕಾಣಿಕೆಗೆ ಬಿದ್ದ ಚಿನ್ನದ ತೂಕ 24 ಕಿಲೋ ದಾಟುತ್ತದೆ. ಐದು ಕೋಟಿ ರೂಗೂ ಅಧಿಕ ಮೌಲ್ಯದ ನಗದು ಹಣವನ್ನೂ ಭಕ್ತರು ಈ ಬಾರಿ ಕಾಣಿಕೆಯಾಗಿ ಅರ್ಪಿಸಿದ್ದಾರೆ.
- Vijaya Sarathy SN
- Updated on: Sep 23, 2024
- 2:21 pm
ನಾಗಮಂಗಲ: ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ಒಟ್ಟಾಗಿ ಗಣೇಶ ವಿಸರ್ಜನೆ
ಅಪರೂಪದ ಘಟನೆಗೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಪಟ್ಟಣ ಸಾಕ್ಷಿಯಾಗಿದೆ. ಹಿಂದೂ ಮುಸ್ಲಿಂ ಯುವಕರು ಒಟ್ಟಾಗಿ ಸೇರಿ ಗಣೇಶನ ವಿಸರ್ಜನೆ ಮಾಡಿದ್ದಾರೆ. ಗಣೇಶನ ವಿಸರ್ಜನೆ ವೇಳೆ ಮುಸ್ಲಿಂ ಯುವಕರು ಕೂಡ ಭಾಗಿಯಾಗಿದ್ದು ಪರಸ್ಪರ ಟೋಪಿ, ಶಾಲು ಹಾಕಿ ಸಾಮರಸ್ಯ ತೋರಿದ್ದಾರೆ.
- Prashantha B
- Updated on: Sep 21, 2024
- 1:14 pm
ಇದೆಂತಾ ಅವ್ಯವಸ್ಥೆ; ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ನಗರದ ಹಲಸೂರು, ಹೆಬ್ಬಾಳ, ಯಡಿಯೂರು, ಸ್ಯಾಂಕಿ ಟ್ಯಾಂಕಿ ಕರೆಗಳ ಕಲ್ಯಾಣಿಗಳಲ್ಲಿ ಗಣೇಶ ವಿಸರ್ಜನೆ ಮಾಡಲಾಗಿದ್ದು ಗಣೇಶ ಮೂರ್ತಿಗಳು ಕರಗದೆ ತೇಲುತ್ತಿವೆ. ಈ ವರ್ಷ ನಿರೀಕ್ಷೆಗಿಂತ ಹೆಚ್ಚು ಗಣೇಶ ವಿಸರ್ಜನೆ ಮಾಡಲಾಗಿದೆ. ಪಿಒಪಿ ಗಣೇಶ ಮೂರ್ತಿಗಳಿಂದ ಕಲ್ಯಾಣಿಗಳ ನೀರು ಕಲುಷಿತವಾಗಿದೆ.
- Poornima Agali Nagaraj
- Updated on: Sep 18, 2024
- 1:02 pm
ಬೆಳಗಾವಿ: ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಹಿಂಸಾಚಾರ, ಮೂವರು ವಿದ್ಯಾರ್ಥಿಗಳಿಗೆ ಚಾಕು ಇರಿತ
ಬೆಳಗಾವಿಯಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಹಿಂಸಾಚಾರ ನಡೆದಿದೆ. ದುಷ್ಕರ್ಮಿಗಳು ಮೂವರು ವಿದ್ಯಾರ್ಥಿಗಳ ಮೇಲೆ ಅಟ್ಯಾಕ್ ಮಾಡಿದ್ದು ಚಾಕುವಿನಿಂದ ಇರಿದಿದ್ದಾರೆ. ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುವಾಗ ಕಾಲು ತಾಕಿದಕ್ಕೆ ಈ ಘಟನೆ ನಡೆದಿದೆ. ಸದ್ಯ ಪೊಲೀಸರು ಚೇಸ್ ಮಾಡಿ ಪರಾರಿಯಾಗುತ್ತಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
- Sahadev Mane
- Updated on: Sep 18, 2024
- 8:00 am
ಗಣೇಶ ಹಬ್ಬ ಮುಗಿಯುತ್ತಿದ್ದಂತೆ ಚಿಕನ್-ಮಟನ್ಗೆ ಫುಲ್ ಡಿಮ್ಯಾಂಡ್; ಬೇಡಿಕೆಗೆ ತಕ್ಕಂತೆ ಬೆಲೆ ಏರಿಕೆ
ಒಂದು ತಿಂಗಳ ಶ್ರಾವಣ ಮಾಸ ಮುಗಿಸಿ ಅದ್ದೂರಿಯಿಂದ ಗಣೇಶ ಚತುರ್ಥಿಯನ್ನ ಆಚಾರಿಸಿ, ಸಿಲಿಕಾನ್ ಮಂದಿ ವರ್ಷದ ತೊಡಕನ್ನ ಅದ್ದೂರಿಯಿಂದ ಬರಮಾಡಿಕೊಂಡಿದ್ದಾರೆ. ಹೀಗಾಗಿ ಚಿಕನ್ ಹಾಗೂ ಮಟನ್ ಬೆಲೆ ದಿಡೀರನೆ ಏರಿಕೆಯಾಗಿದೆ. ಕಳೆದ ವಾರ ಚಿಕನ್ ಬೆಲೆ 100 ರಿಂದ 150 ರ ಗಡಿಯಲ್ಲಿತ್ತು. ಈ ವಾರ 250 ರಿಂದ 260 ರುಪಾಯಿಗೆ ಚಿಕನ್ ಬೆಲೆ ಏರಿಕೆಯಾಗಿದ್ದು, ಮಟನ್ ಬೆಲೆಯು 800 ರಿಂದ 900 ರೂಗೆ ಏರಿಕೆಯಾಗಿದೆ.
- Poornima Agali Nagaraj
- Updated on: Sep 17, 2024
- 7:04 am
ಗಣಪತಿ ಮೂರ್ತಿಗೆ ನಮಸ್ಕರಿಸಿದ ಕರೀನಾ ಮಕ್ಕಳು ತೈಮೂರ್, ಜೇಹ್ ಅಲಿ ಖಾನ್
ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ಗಣಪತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಅವರ ಮಕ್ಕಳಾದ ಜೇಹ್ ಅಲಿ ಖಾನ್ ಹಾಗೂ ತೈಮೂರ್ ಅಲಿ ಖಾನ್ ಕೂಡ ಇದರಲ್ಲಿ ಭಾಗಿ ಆಗಿದ್ದಾರೆ. ಗಣೇಶನಿಗೆ ನಮಿಸಿ ಆಶೀರ್ವಾದ ಪಡೆಯುತ್ತಿರುವ ಮಕ್ಕಳ ಫೋಟೋವನ್ನು ಕರೀನಾ ಅವರು ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.
- Madan Kumar
- Updated on: Sep 15, 2024
- 9:52 pm
ಮುಖ್ಯಮಂತ್ರಿ ಮನೆಯ ಗಣೇಶ ಚತುರ್ಥಿ ಸಂಭ್ರಮದಲ್ಲಿ ಭಾಗಿಯಾದ ಸಲ್ಮಾನ್ ಖಾನ್
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಮನೆಯಲ್ಲಿ ಗಣೇಶನ ಹಬ್ಬವನ್ನು ಆಚರಿಸಲಾಗಿದೆ. ಇದರಲ್ಲಿ ಸಲ್ಮಾನ್ ಖಾನ್ ಅವರು ಭಾಗಿ ಆಗಿದ್ದಾರೆ. ಅವರಿಗೆ ಸಹೋದರಿ ಅರ್ಪಿತಾ ಖಾನ್ ಕೂಡ ಸಾಥ್ ನೀಡಿದ್ದಾರೆ. ಸಲ್ಮಾನ್ ಖಾನ್ ಅವರು ಗಣೇಶನ ಮೂರ್ತಿಗೆ ಕೈಮುಗಿದ ಫೋಟೋಗಳನ್ನು ಏಕನಾಥ್ ಶಿಂಧೆ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
- Madan Kumar
- Updated on: Sep 15, 2024
- 8:40 pm
ಬೆಂಗಳೂರಿನಲ್ಲಿ ಪ್ರತಿಭಟನಾಕಾರರ ಕೈಯಿಂದ ಪೊಲೀಸ್ ಜೀಪ್ ಸೇರಿದ ಗಣೇಶನ ವಿಗ್ರಹ; ವಿಡಿಯೋಗೆ ಭಾರೀ ವಿರೋಧ
ಮಂಡ್ಯದ ನಾಗಮಂಗಲದಲ್ಲಿ ಗಣೇಶ ಉತ್ಸವದ ವೇಳೆ ನಡೆದ ಕೋಮುಗಲಭೆಯನ್ನು ವಿರೋಧಿಸಿ ಹಿಂದೂ ಕಾರ್ಯಕರ್ತರು ಬೆಂಗಳೂರಿನಲ್ಲಿ ಗಣೇಶನ ವಿಗ್ರಹವನ್ನು ಹಿಡಿದು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾಕಾರರನ್ನು ಚದುರಿಸಿದ ಪೊಲೀಸರು ಅವರ ಕೈಯಲ್ಲಿದ್ದ ಗಣೇಶನನ್ನು ಹೊತ್ತುಕೊಂಡು ಹೋಗಿ ಪೊಲೀಸ್ ಜೀಪ್ನಲ್ಲಿಟ್ಟುಕೊಂಡಿದ್ದಾರೆ. ಈ ವಿಡಿಯೋ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರಿಂದಾಗಿ ಬೆಂಗಳೂರು ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದಾರೆ.
- Sushma Chakre
- Updated on: Sep 14, 2024
- 5:44 pm
ಅಕ್ಷರಧಾಮ ದೇವಾಲಯದಲ್ಲಿ ವಿಜೃಂಭಣೆಯಿಂದ ಜಲಝುಲ್ನಿ ಹಬ್ಬ ಆಚರಣೆ, ಗಣೇಶನ ವಿಸರ್ಜನೆ
ಅಕ್ಷರಧಾಮ ದೇವಸ್ಥಾನದಲ್ಲಿ ಜಲಝುಲ್ನಿ ಮತ್ತು ಗಣಪತಿ ವಿಸರ್ಜನ ಉತ್ಸವವನ್ನು ಆಯೋಜಿಸಲಾಗಿತ್ತು. ಅಕ್ಷರಧಾಮ ದೇವಾಲಯದಲ್ಲಿ ಜಲಝುಲ್ನಿ ಏಕಾದಶಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ವೇಳೆ ಗಣೇಶನ ಮೂರ್ತಿಯನ್ನೂ ವಿಸರ್ಜನೆ ಮಾಡಲಾಯಿತು. ದೇವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ದೇವಸ್ಥಾನದಲ್ಲಿಯೇ ಮೆರವಣಿಗೆ ನಡೆಸಿ ನಂತರ ನಿಮಜ್ಜನ ಮಾಡಲಾಯಿತು.
- Sushma Chakre
- Updated on: Sep 14, 2024
- 4:07 pm