Ganesh Chaturthi
ವಿನಾಯಕ ಚೌತಿ..ಭಾರತದಲ್ಲಿ ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಇದೂ ಕೂಡ ಒಂದು. ಶಿವ ಪಾರ್ವತಿಯ ಪುತ್ರ ವಿನಾಯಕನ ಜನ್ಮದಿನದಂದು ವಿನಾಯಕ ಚೌತಿಯನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಚತುರ್ಥಿಯಂದು ವಿನಾಯಕ ಚೌತಿಯನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ವಿನಾಯಕ ಚತುರ್ಥಿ ಮತ್ತು ಗಣೇಶ ಚತುರ್ಥಿ ಎಂದೂ ಕರೆಯುತ್ತಾರೆ. ವಿನಾಯಕ ಚೌತಿ ಆಚರಣೆಯ ಅಂಗವಾಗಿ 11 ದಿನಗಳ ಕಾಲ ಗಣೇಶ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ನಿಮಜ್ಜನಕ್ಕೆ ಮೆರವಣಿಗೆಯಲ್ಲಿ ತೆರಳಲಾಗುತ್ತದೆ. ವಿಗ್ರಹ ನಿಮಜ್ಜನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲಾಗುತ್ತದೆ.
ಹಳ್ಳಿಗಳು, ಪಟ್ಟಣಗಳು, ಕಾಲೋನಿಗಳು ಮತ್ತು ನಗರಗಳಲ್ಲಿನ ಅಪಾರ್ಟ್ಮೆಂಟ್ಗಳಲ್ಲಿ ವಿನಾಯಕ ಚೌತಿ ಆಚರಣೆಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ವಿನಾಯಕ ಚೌತಿ ಮಹೋತ್ಸವಗಳು ಬ್ರಿಟಿಷ್ ಆಡಳಿತಗಾರರ ವಿರುದ್ಧ ಸ್ವಾತಂತ್ರ್ಯ ಚಳವಳಿಯಲ್ಲಿ ಎಲ್ಲ ಜನರಲ್ಲಿ ರಾಷ್ಟ್ರೀಯ ಮನೋಭಾವವನ್ನು ಬೆಳಗಿಸುವಲ್ಲಿ ಪ್ರಮುಖ ಪಾತ್ರವಹಿಸಿದವು. 1892 ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ತಿಲಕರು ದೇಶದ ಜನರಲ್ಲಿ ರಾಷ್ಟ್ರೀಯ ಮನೋಭಾವವನ್ನು ಬೆಳಗಿಸಲು ಗಣಪತಿ ಉತ್ಸವಗಳನ್ನು ಪ್ರಾರಂಭಿಸಿದರು.
ಬೆಂಗಳೂರು: ಗಣೇಶೋತ್ಸವ ಮೆರವಣಿಗೆ ವೇಳೆ ಹೂಹಾರ ಹಾಕಿ ಭಾವೈಕ್ಯತೆ ಮೆರೆದ ಮುಸ್ಲಿಮರು!
ಕೆಆರ್ ಪುರಂನ ದೇವಸಂದ್ರದ ಗಣೇಶ ವಿಸರ್ಜನೆಯ ವೇಳೆ ಸ್ಥಳೀಯ ಮುಸಲ್ಮಾನರು ಹೂ ಹಾರ ಹಾಕಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೇ ಶ್ರೀ ವಿನಾಯಕ ಗೆಳೆಯರ ಬಳಗದಿಂದ ನಡೆದ ಗಣಪತಿ ಉತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ ಜನರಿಗೆ ತಂಪು ಪಾನೀಯ ವಿತರಿಸುವ ಮೂಲಕ ಹಿಂದೂ-ಮುಸ್ಲಿಮ್ ಬಾಂಧವ್ಯವನ್ನು ತೋರಿಸಿಕೊಟ್ಟಿದ್ದಾರೆ.
- Bhavana Hegde
- Updated on: Sep 16, 2025
- 5:43 pm
ಅಬ್ಬಬ್ಬಾ..! ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಏನ್ ಜನ ಗುರು
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ಬೈಪಾಸ್ ವಿದ್ಯಾಗಣಪತಿ ಗೆಳೆಯರು ಬಳಗ ಪ್ರತಿಷ್ಠಪನೆ ಮಾಡಿದ್ದ 22 ಅಡಿ ವಿಶೇಷ ಗಣೇಶ ವಿಸರ್ಜನೆ ಮೆರವಣಿಗೆ ನಡೆಯುತ್ತಿದ್ದು, ಮೆರವಣಿಗೆಯಲ್ಲಿ ಭಾರೀ ಜನ ಸಮೂಹ ಸೇರಿದೆ. ನಗರದ ನಗರ ಪೊಲೀಸ್ ಠಾಣೆ, ಗೌರಿಬಿದನೂರು ನಗರದ ಎಂಜಿ ವೃತ್ತ, ಅಂಬೇಡರ್ ಸರ್ಕಲ್,. ನಾಗಯ್ಯರೆಡ್ಡಿ ಸರ್ಕಲ್, ನ್ಯಾಷನಲ್ ಕಾಲೇಜು ರಸ್ತೆ ಮೂಲಕ ಗಣೇಶನ ಮೆರವಣಿಗೆ ಸಾಗಿದ್ದು, ಸಾವಿರರಾರು ಯುವಕ ಯುವತಿಯರು ಡಿ.ಜೆ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದರು.
- Ramesh B Jawalagera
- Updated on: Sep 14, 2025
- 6:43 pm
ಸಾವಿರಾರು ಜನರಿದ್ದ ಗಣೇಶ ಮೆರವಣಿಗೆಗೆ ಯಮನಂತೆ ನುಗ್ಗಿದ ಟ್ರಕ್: ಭಯಾನಕ ವಿಡಿಯೋ ಇಲ್ಲಿದೆ
ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಭೀಕರ ದುರಂತ ಸಂಭವಿಸಿದೆ. ಮೊಸಳೆಹೊಸಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಒಂದು ಬದಿಯಲ್ಲಿ ಗಣೇಶ ಮೆರವಣಿಗೆ ಹೋಗುತ್ತಿದ್ದು, ಈ ವೇಳೆ ಟ್ರಂಕ್ ವೊಂದು ಯಮನಂತೆ ಬಂದು ಸಾವಿರಾರರು ಜನರಿದ್ದ ಮೆರಣಿಗೆಗೆ ನುಗ್ಗಿದೆ. ಪರಿಣಾಮ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದ್ದು, ಗಾಯಗೊಂಡರಿಗೆ ಚಿಕಿತ್ಸೆ ಮುಂದುರೆದಿದೆ.
- Ramesh B Jawalagera
- Updated on: Sep 12, 2025
- 10:31 pm
ಹಾಸನದಲ್ಲಿ ಘೋರ ದುರಂತ: ಗಣಪತಿ ಮೆರವಣಿಗೆ ವೇಳೆ ಜನರ ಮೇಲೆ ಹರಿದ ಟ್ರಕ್, ಸಾವಿನ ಸಂಖ್ಯೆ 8ಕ್ಕೆ ಏರಿಕೆ
ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಯುವಕರು ಸೇರಿಕೊಂಡು ಗಣೇಶ ಪ್ರತಿಷ್ಠಾಪನೆ ಮಾಡಿದ್ದು, ಇಂದು ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಅದ್ಧೂರಿಯಾಗಿ ನಡೆದಿತ್ತು. ಆದ್ರೆ, ಈ ವೇಳೆ ಘೋರ ದುರಂತವೊಂದು ಸಂಭವಿಸಿದ್ದು, ಮೆರವಣಿಗೆ ವೇಳೆ ಜನರ ಮೇಲೆ ಏಕಾಏಕಿ ಟ್ರಕ್ ಹರಿದಿದೆ. ಪರಿಣಾಮ ಸಾವಿನ ಸಂಖ್ಯೆ 8ಕ್ಕೆ ಏರಿಯಾಗಿದೆ.
- Manjunath KB
- Updated on: Sep 12, 2025
- 11:07 pm
ಚಿತ್ರದುರ್ಗ ಹಿಂದೂ ಮಹಾಗಣಪತಿಯ ಡಿಜೆ ಜಪ್ತಿ, ಡೀಸೆಲ್ ಟ್ಯಾಂಕಿಗೆ ನೀರು ಸುರಿದ್ರಾ ಪೊಲೀಸ್ರು?
ಕೋಟೆನಾಡು ಚಿತ್ರದುರ್ಗದ ಹಿಂದೂ ಮಹಾಗಣತಿಯ ಶೋಭಾಯಾತ್ರೆ ನಾಳೆ(ಸೆ.13) ನಡೆಯಲಿದೆ.ಹೀಗಾಗಿ ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಫುಲ್ ಕೇಸರಿಮಯವಾಗಿದೆ. ಹಾಗೇ ಬೀದಿ ಬೀದಿಯಲ್ಲಿ ದೀಪಾಲಂಕಾರ ಕಂಗೊಳಿಸುತ್ತಿದೆ. ಆದ್ರೆ, ಗಣೇಶ ವಿಸರ್ಜನೆಗೆ ಮೆರಗು ನೀಡುವ ಡಿಜೆಯನ್ನೇ ಪೊಲೀಸರು ಜಪ್ತಿ ಮಾಡಿದ್ದಾರೆ. ಹೌದು...ಗಣೇಶ ಶೋಭಾಯಾತ್ರೆಗೆಂದು ತರಲಾಗಿದ್ದ ಡಿಜೆಯನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಸೀಜ್ ಮಾಡಿದ್ದಾರೆ. ಅಲ್ಲದೇ ಡಿಜೆ ವಾಹನದ ಡೀಸೆಲ್ ಟ್ಯಾಂಕ್ ಗೆ ನೀರು ಸುರಿದು ಆನ್ ಆಗದಂತೆ ಮಾಡಿದ್ದಾರ ಎಂದು ಮ್ಯಾನೇಜರ್ ಹಾಗೂ ಚಾಲಕ ಆರೋಪ ಮಾಡಿದ್ದಾರೆ.
- Ramesh B Jawalagera
- Updated on: Sep 12, 2025
- 6:13 pm
ಮದ್ದೂರು ಗಲಭೆ: ಕಲ್ಲು ತೂರಿದ ಸ್ಥಳದಲ್ಲೇ ಹಿಂದೂ ಕಾರ್ಯಕರ್ತರ ಅಬ್ಬರ ಹೇಗಿದೆ ನೋಡಿ
ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದ ಬಳಿಕ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಬೂದಿ ಮುಚ್ಚಿದ ಕೆಂಡಂತಿದ್ದು, ಇದಕ್ಕೆ ಪ್ರತಿಯಾಗಿ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ಸಾಮೂಹಿಕ ಗಣೇಶ ವಿಸರ್ಜನೆ ಮೆರವಣಿಗೆ ನಡೆಸಿದ್ದಾರೆ. ಸದ್ಯ ಮೆರವಣಿಗೆ ಮೊನ್ನೆ ಕಲ್ಲು ತೂರಿದ್ದ ಮದ್ದೂರಿನ ಕೆಮ್ಮಣ್ಣು ನಾಲೆ ಸರ್ಕಲ್ ನಲ್ಲಿರುವ ಜಾಮಿಯಾ ಮಸೀದಿ ಬಳಿ ಬಂದಿದ್ದು, ಹಿಂದೂ ಕಾರ್ಯಕರ್ತರು ಕೈಯಲ್ಲಿ ಕೇಸರಿ ಹಾಗೂ ಕನ್ನಡದ ಧ್ವಜ ಹಿಡಿದ ಡಿಜೆ ಸಾಂಗ್ ಗೆ ಕುಣಿದು ಕುಪ್ಪಳಿಸಿದರು.
- Ramesh B Jawalagera
- Updated on: Sep 10, 2025
- 4:44 pm
ಮದ್ದೂರಿನಲ್ಲಿ ಕೇಸರಿ ರಣಕಹಳೆ: 28 ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಜನವೋ ಜನ
ಮೊನ್ನೆ ಗಣೇಶ ಮೂರ್ತಿ ವಿಸರ್ಜನೆ ವೇಳೆ ನಡೆದಿದ್ದ ಕಲ್ಲು ತೂರಾಟ ಪ್ರಕರಣದ ಬಳಿಕ ಬೂದಿ ಮುಚ್ಚಿದ ಕೆಂಡದಂತಿರುವ ಮಂಡ್ಯದ ಮದ್ದೂರಿನಲ್ಲಿವತ್ತು ಕೇಸರಿ ಪಡೆ ಗರ್ಜಿಸಿದೆ. ಮೊನ್ನೆಯಷ್ಟೇ ಒಂದು ಗಣೇಶ ಮೆರವಣಿಗೆಯನ್ನ ಅಡ್ಡಿಪಡಿಸಿದ್ದಕ್ಕೆ ಇವತ್ತು ಬರೋಬ್ಬರಿ 28 ಸಾಮೂಹಿಕ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯುತ್ತಿದ್ದು, ಮದ್ದೂರಿಗೆ ಮದ್ದೂರೇ ಕೇಸರಿಮಯವಾಗಿದೆ.
- Ramesh B Jawalagera
- Updated on: Sep 10, 2025
- 3:11 pm
ಮದ್ದೂರು ಕಲ್ಲು ತೂರಾಟ ಕೇಸ್: ನಾನೇ ಖುದ್ದು ಬರ್ತಿನಿ ಏನಾಗುತ್ತೆ ನೋಡೋಣ, ಸರ್ಕಾರಕ್ಕೆ ಜೋಶಿ ಸವಾಲ್
ಮದ್ದೂರು ಗಣೇಶ ವಿಸರ್ಜನೆ ಮೆರವಣಿಗೆ (Ganesha Procession) ವೇಳೆ ಕಲ್ಲು ತೂರಾಟ (Stone Pelting) ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಇನ್ನು ಬಿಜೆಪಿ ನಿಯೋಗ ನಾಳೆ(ಸೆಪ್ಟೆಂಬರ್ 08) ಘಟನಾ ಸ್ಥಳಕ್ಕೆ ಭೇಟಿ ನೀಡಲಿದೆ. ಮತ್ತೊಂದೆಡೆ ಹಿಂದೂ ಮುಖಂಡರು ನಾಳೆ ಮದ್ದೂರು ಬಂದ್ಗೆ ಕರೆ ನೀಡಿದ್ದಾರೆ. ಈ ಘಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
- Ramesh B Jawalagera
- Updated on: Sep 8, 2025
- 6:27 pm
ಮದ್ದೂರು ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ: ಯತ್ನಾಳ್ ಗೆ ಫುಲ್ ಡಿಮ್ಯಾಂಡ್
ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಇದರಿಂದ ಮಂಡ್ಯದ ಮದ್ದೂರು ಪಟ್ಟಣ ಉದ್ವಿಗ್ನವಾಗಿದ್ದು, ಕಲ್ಲು ತೂರಾಟ ಖಂಡಿಸಿ ಹಿಂದೂ ಪರ ಸಂಘಟನೆಗಳು ನಾಳೆ (ಸೆಪ್ಟೆಂಬರ್ 09) ಮದ್ದೂರು ಬಂದ್ ಗೆ ಕರೆ ನೀಡಿವೆ. ಇನ್ನು ಇದಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಸಹ ಬೆಂಬಲ ಸೂಚಿಸಿದೆ. ಇನ್ನು ಮದ್ದೂರಿನಲ್ಲಿ ಠಿಕಾಣಿ ಹೂಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಪ್ರತಿಭಟನಾ ಸಭೆಯಲ್ಲಿ ಕಲ್ಲು ತೂರಿದವರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಕಾರ್ಯಕರ್ತರು ಯತ್ನಾಳ್ ಯತ್ನಾಳ್ ಎಂದು ಕೂಗಿದ್ದಾರೆ. ಈ ವೇಳೆ ಸಿಂಹ, ಯತ್ನಾಳ್ ಅವರನ್ನು ಇಲ್ಲಿಗೆ ಕರೆಸೋಣ ಎಂದು ಸಮಾಧಾನಪಡಿಸಿದರು.
- Ramesh B Jawalagera
- Updated on: Sep 8, 2025
- 4:21 pm
ಮದ್ದೂರು ಗಣೇಶ ಕಲ್ಲು ತೂರಾಟ: 21 ಮುಸ್ಲಿಮರ ಬಂಧನ, ಇಲ್ಲಿದೆ ಬಂಧಿತರ ಪಟ್ಟಿ
Maddur Ganesh Stone Pelting Case: ಮಂಡ್ಯದ ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಇದರಿಂದ ಮದ್ದೂರಿನಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇನ್ನು ಈ ಪ್ರಕರಣ ಪೂರ್ವ ನಿಯೋಜಿತ ಕೃತ್ಯ ಎಂದು ತಿಳಿದುಬಂದಿದ್ದು, ಸದ್ಯ 21 ಮುಸ್ಲಿಮರನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಪಟ್ಟಿ ಈ ಕೆಳಗಿನಂತಿದೆ.
- Dileep CP
- Updated on: Sep 8, 2025
- 3:49 pm