AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಳ್ಮೆ, ಧೈರ್ಯ, ಸಹೃದಯತೆಗೆ ಒಲಿದ ಬಿಗ್​​ಬಾಸ್ ಮನೆಯ ಮೊದಲ ಕ್ಯಾಪ್ಟನ್ಸಿ ಪಟ್ಟ

ಬಿಗ್​ಬಾಸ್ ಮನೆಯ ಕ್ಯಾಪ್ಟನ್ ಆಗಲು ಮನೆಯ ಎಲ್ಲ ಮಂದಿ ಪ್ರಯತ್ನಿಸಿದರು. ಕೆಲವರು ಅಡ್ಡ ಹಾದಿ ಹಿಡಿದರು. ವಸ್ತುಗಳನ್ನು ಸಂಗ್ರಹಿಸುವ ಟಾಸ್ಕ್​ ಬಂದಾಗ ಕೆಲವರು ಕಳ್ಳತನ ಮಾಡಿದರೆ, ಕೆಲವರು ದೌರ್ಜನ್ಯ ಮಾಡಿದರು. ಕೆಲವರು ಬಿಗ್​​ಬಾಸ್​ ನಿಯಮವನ್ನೇ ಮುರಿದು, ತಮಗೆ ತೋಚಿದಂತೆ ಆಡಿದರು. ಆದರೆ ಸಂಗೀತಾ ಎಲ್ಲೂ ಸಹ ನಿಯಮ ಮುರಿಯದೆ, ಅಡ್ಡದಾರಿ ಹಿಡಿಯದೆ ಮುಖ್ಯವಾಗಿ ತಾಳ್ಮೆ ಕಳೆದುಕೊಳ್ಳದೆ, ನ್ಯಾಯಯುತವಾಗಿ ಆಟ ಆಡಿ ಫೈನಲ್ ಪ್ರವೇಶ ಮಾಡಿದರು.

ತಾಳ್ಮೆ, ಧೈರ್ಯ, ಸಹೃದಯತೆಗೆ ಒಲಿದ ಬಿಗ್​​ಬಾಸ್ ಮನೆಯ ಮೊದಲ ಕ್ಯಾಪ್ಟನ್ಸಿ ಪಟ್ಟ
Sangeetha Bhatt
ಮಂಜುನಾಥ ಸಿ.
|

Updated on: Sep 18, 2026 | 11:25 PM

Share

ಬಿಗ್​​ಬಾಸ್ ಮನೆಯಲ್ಲಿ ಕ್ಯಾಪ್ಟನ್​​ ಆಗುವುದು ಸಾಧನೆಯೆಂದೇ ಪರಿಗಣಿಸಲಾಗುತ್ತದೆ. ಕ್ಯಾಪ್ಟನ್ ಆಗಲು ಹಲವಾರು ಟಾಸ್ಕುಗಳನ್ನು ಗೆದ್ದು ಬರಬೇಕಾಗುತ್ತದೆ. ಅದರ ಜೊತೆಗೆ ಮನೆಯವರ ವಿಶ್ವಾಸ ಗಳಿಸಬೇಕು, ಕೆಲವರ ಸ್ನೇಹ ಗಳಿಸಿಕೊಂಡರೆ ಕೆಲವರ ವಿರೋಧ ಕಟ್ಟಿಕೊಳ್ಳಬೇಕು. ಅವುಗಳ ಜೊತೆಗೆ ಬಿಗ್​​ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವುದು ಬಿಗ್​​ಬಾಸ್​​ಗೆ ಅಥವಾ ಸುದೀಪ್​​ಗೆ ಉಪನಾಯಕ ಆದಂತೆ. ಬಿಗ್​​ಬಾಸ್ ಮನೆಯ ಕ್ಯಾಪ್ಟನ್​​ಗೆ ವಿಶೇಷ ಗೌರವ ಇರುತ್ತದೆ. ಸಂಗೀತಾ ಭಟ್ ಅವರು ಈ ಸೀಸನ್ನಿನ ಮೊದಲ ಕ್ಯಾಪ್ಟನ್ ಆಗಿದ್ದಾರೆ. ಅವರು ಕ್ಯಾಪ್ಟನ್ ಆಗಿದ್ದಕ್ಕಿಂತಲೂ ಕ್ಯಾಪ್ಟನ್ ಆದ ರೀತಿ ಬಹಳ ವಿಶೇಷವಾದುದು.

ಬಿಗ್​ಬಾಸ್ ಮನೆಯ ಕ್ಯಾಪ್ಟನ್ ಆಗಲು ಮನೆಯ ಎಲ್ಲ ಮಂದಿ ಪ್ರಯತ್ನಿಸಿದರು. ಕೆಲವರು ಅಡ್ಡ ಹಾದಿ ಹಿಡಿದರು. ವಸ್ತುಗಳನ್ನು ಸಂಗ್ರಹಿಸುವ ಟಾಸ್ಕ್​ ಬಂದಾಗ ಕೆಲವರು ಕಳ್ಳತನ ಮಾಡಿದರೆ, ಕೆಲವರು ದೌರ್ಜನ್ಯ ಮಾಡಿದರು. ಕೆಲವರು ಬಿಗ್​​ಬಾಸ್​ ನಿಯಮವನ್ನೇ ಮುರಿದು, ತಮಗೆ ತೋಚಿದಂತೆ ಆಡಿದರು. ಆದರೆ ಸಂಗೀತಾ ಎಲ್ಲೂ ಸಹ ನಿಯಮ ಮುರಿಯದೆ, ಅಡ್ಡದಾರಿ ಹಿಡಿಯದೆ ಮುಖ್ಯವಾಗಿ ತಾಳ್ಮೆ ಕಳೆದುಕೊಳ್ಳದೆ, ನ್ಯಾಯಯುತವಾಗಿ ಆಟ ಆಡಿ ಫೈನಲ್ ಪ್ರವೇಶ ಮಾಡಿದರು.

ಸಂಗೀತಾ ಅವರು ಬಹಳ ಮೃದು, ಸೂಕ್ಷ್ಮ ಎಂದೆಲ್ಲ ಮನೆಯ ಮಂದಿ ಅಂದುಕೊಂಡಿದ್ದರು. ಅದು ನಿಜವೂ ಆಗಿತ್ತು. ಸಂಗೀತಾ ಸಹ ಖುದ್ದು ಈ ಬಗ್ಗೆ ಹೇಳಿಕೊಂಡಿದ್ದರು. ಈ ರೀತಿಯ ಫಿಸಿಕಲ್ ಆಟಗಳು ತಮಗಲ್ಲ ಎಂಬ ಅಭಿಪ್ರಾಯ ಅವರಿಗೂ ಇತ್ತು. ಆದರೆ ಸಂಗೀತಾ ಖುದ್ದು ತಮ್ಮ ಅಧೈರ್ಯಗಳನ್ನು ದಾಟಿದರು. ಫೈನಲ್​​ನಲ್ಲಿ ಭಯವಾದರೂ ಸಹ ಧೈರ್ಯ ಮಾಡಿ ಏಣಿಯನ್ನು ಹತ್ತಿದರು. ಗೆಲುವಿನ ಗುರಿ ತಲುಪಿದರು. ತಮ್ಮ ಬಲ ಹೀನತೆಗಳನ್ನು ಮೀರಿ ಹೊರಬಂದು ಸಂಗೀತಾ ಗೆದ್ದರು. ಆ ಮೂಲಕ ಈ ಸೀಸನ್ನಿನ ಮೊಟ್ಟ ಮೊದಲ ಕ್ಯಾಪ್ಟನ್ ಎನಿಸಿಕೊಂಡರು.

ಇದನ್ನೂ ಓದಿ:Thandav Ram Profile: ಧಾರಾವಾಹಿ, ಸಿನಿಮಾ, ವಿವಾದ ಈಗ ಬಿಗ್​ಬಾಸ್: ತಾಂಡವ್ ರಾಮ್ ಹಿನ್ನೆಲೆಯೇನು?

ಫೈನಲ್​ನಲ್ಲಿ ಸಂಗೀತಾ ಎದುರಿಗೆ ಆಸಿಯಾ ಪ್ರತಿಸ್ಪರ್ಧಿ ಆಗಿದ್ದರು. ಅವರೂ ಸಹ ತಮ್ಮ ಶಕ್ತಿಮೀರಿ ಪ್ರಯತ್ನ ಮಾಡಿದರು. ಆದರೆ ಅವರಿಗೆ ತಮ್ಮ ಬೆಂಬಲಿಗರಿಂದ ಸರಿಯಾದ ಬೆಂಬಲ ಸಿಗಲಿಲ್ಲ. ಆದರೆ ಸಂಗೀತಾ ಅವರು ಆಯ್ಕೆ ಮಾಡಿಕೊಂಡಿದ್ದ ಅವಿನಾಶ್ ಹಾಗೂ ಇತರರು ಬಹಳ ಚೆನ್ನಾಗಿ ಆಡಿ ಸಂಗೀತಾ ಅವರನ್ನು ದಡ ತಲುಪಿಸಿದರು. ಸೋತರು ಸಹ ಆಸಿಯಾ ಅವರು ಸಂಗೀತಾ ಅವರ ಗೆಲುವನ್ನು ಸಂಭ್ರಮಿಸಿದರು. ಕ್ರೀಡಾ ಸ್ಪೂರ್ತಿ ಮೆರೆದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಚಿರತೆ ಮರಿಗಳ ಜನನ
ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಚಿರತೆ ಮರಿಗಳ ಜನನ
ಯಾದಗಿರಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: 6 ಜನರ ವಿರುದ್ಧ ಕೇಸ್​​
ಯಾದಗಿರಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: 6 ಜನರ ವಿರುದ್ಧ ಕೇಸ್​​
ಟಿ.ನರಸೀಪುರದಲ್ಲಿ ಶೋಭಾಯಾತ್ರೆಗೆ ಪ್ರತಿಯಾಗಿ ಸೌಹಾರ್ದ ಭೀಮಯಾತ್ರೆ
ಟಿ.ನರಸೀಪುರದಲ್ಲಿ ಶೋಭಾಯಾತ್ರೆಗೆ ಪ್ರತಿಯಾಗಿ ಸೌಹಾರ್ದ ಭೀಮಯಾತ್ರೆ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ
ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ
ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ