ಧ್ರುವಂತ್ನ ಸೀಕ್ರೆಟ್ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್ಗೆ ಕಾಡ್ತಿದೆ ತಪ್ಪಿತಸ್ಥ ಭಾವನೆ?
ಬಿಗ್ ಬಾಸ್ ಮನೆಯಲ್ಲಿ ಸೀಕ್ರೆಟ್ ರೂಂ ಟಾಸ್ಕ್ ಈ ವಾರ ಆರಂಭ ಆಗಿದೆ. ರಕ್ಷಿತಾ ಹಾಗೂ ಧ್ರುವಂತ್ನ ಬಿಗ್ ಬಾಸ್ನ ಸೀಕ್ರೆಟ್ ರೂಂನಲ್ಲಿ ಇರಿಸಲಾಗಿದೆ. ಈ ನಿರ್ಧಾರದ ಬಗ್ಗೆ ಬಿಗ್ ಬಾಸ್ಗೆ ತಪ್ಪಿತಸ್ಥ ಭಾವನೆ ಕಾಡುತ್ತಿದೆ ಎಂದು ಧ್ರುವಂತ್ ಅವರು ಹೇಳಿದ್ದಾರೆ. ಆ ಬಗ್ಗೆ ಇಲ್ಲಿ ಇದೆ ವಿವರ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಈ ವಾರ ಸೀಕ್ರೆಟ್ ರೂಂ ಟಾಸ್ಕ್ ನಡೆಯುತ್ತಿದೆ. ರಕ್ಷಿತಾ ಹಾಗೂ ಧ್ರುವಂತ್ ಈ ರಹಸ್ಯ ಕೋಣೆ ಸೇರಿದ್ದಾರೆ. ಒಬ್ಬರು ಎಣ್ಣೆಯಾದರೆ ಮತ್ತೊಬ್ಬರು ನೀರು. ಹೀಗಾಗಿ, ಬೆರೆಯುವ ಮಾತೇ ಇಲ್ಲ. ಇಬ್ಬರ ಮಧ್ಯೆ ಕಿರಕ್ಗಳು ಆಗುತ್ತಲೇ ಇವೆ. ಈ ಮಧ್ಯೆ ಧ್ರುವಂತ್ ಅವರನ್ನು ರಕ್ಷಿತಾ ಟೀಕಿಸಿದ್ದಾರೆ. ‘ನಿಮ್ಮನ್ನು ಸೀಕ್ರೆಟ್ ರೂಂಗೆ ಬಿಟ್ಟು ತಪ್ಪು ಮಾಡಿದೆ ಎಂದು ಬಿಗ್ ಬಾಸ್ಗೂ ಅನಿಸುತ್ತಿದೆ’ ಎಂಬುದಾಗಿ ರಕ್ಷಿತಾ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Dec 16, 2025 08:20 AM

