AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್‌ನ ಷೇರುಗಳಲ್ಲಿ ಇಂದು ಶೇ.10 ರಷ್ಟು ಏರಿಕೆ

ಅಂಬುಜಾ ಸಿಮೆಂಟ್ಸ್ ಮತ್ತು ಅದರ ಅಂಗಸಂಸ್ಥೆ ಎಸಿಸಿ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಂಡ ಬೆನ್ನಲ್ಲೆ ಅದಾನಿ ಎಂಟರ್‌ಪ್ರೈಸಸ್, ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್‌ನ ಷೇರುಗಳು ಇಂದು ಶೇಕಡಾ 10 ರಷ್ಟು ಏರಿಕೆ ಕಂಡವು.

ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್‌ನ ಷೇರುಗಳಲ್ಲಿ ಇಂದು ಶೇ.10 ರಷ್ಟು ಏರಿಕೆ
ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್‌ನ ಷೇರುಗಳು ಇಂದು ಶೇಕಡಾ 10 ರಷ್ಟು ಏರಿಕೆ ಕಂಡವು (ಸಾಂದರ್ಭಿಕ ಚಿತ್ರ)
TV9 Web
| Edited By: Rakesh Nayak Manchi|

Updated on: Sep 19, 2022 | 4:27 PM

Share

ಅದಾನಿ ಎಂಟರ್‌ಪ್ರೈಸಸ್ (Adani Enterprises), ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್‌ (ACC Cement and Ambuja Cement)ನ ಷೇರುಗಳು ಇಂದು ಶೇಕಡಾ 10 ರಷ್ಟು ಏರಿಕೆ ಕಂಡವು. ಅದಾನಿ ಗ್ರೂಪ್ ಶುಕ್ರವಾರ ಅಂಬುಜಾ ಸಿಮೆಂಟ್ಸ್ ಮತ್ತು ಅದರ ಅಂಗಸಂಸ್ಥೆ ಎಸಿಸಿ ಲಿಮಿಟೆಡ್ ಅನ್ನು ಸ್ವಿಟ್ಜರ್ಲೆಂಡ್‌ನ ಹೋಲ್ಸಿಮ್ ಗ್ರೂಪ್‌ನಿಂದ 6.4 ಬಿಲಿಯನ್‌ಗೆ ಸ್ವಾಧೀನಪಡಿಸಿಕೊಂಡಿತು. ಅದರಂತೆ ಆದಿತ್ಯ ಬಿರ್ಲಾ ಗ್ರೂಪ್‌ (Aditya Birla Group)ನ ಅಲ್ಟ್ರಾಟೆಕ್ ಸಿಮೆಂಟ್‌ (Ultratech Cement)ನ ನಂತರ ಅದಾನಿಯ ಎಸಿಸಿ ಸಿಮೆಂಟ್ ಭಾರತದಲ್ಲಿ ಎರಡನೇ ಅತಿದೊಡ್ಡ ಸಿಮೆಂಟ್ ಕಂಪನಿಯಾಗಿದೆ. ಇದರ ಬೆನ್ನಲ್ಲೇ ಷೇರುಗಳು ಶೇಕಡಾ 10 ರಷ್ಟು ಏರಿಕೆ ಕಂಡಿವೆ.

ಸ್ವಾದೀನ ಪ್ರಕ್ರಿಯೆ ಪೂರ್ಣಗೊಂಡ ಬೆಳವಣಿಗೆಯಿಂದ ಉತ್ತೇಜಿತಗೊಂಡಿರುವ ಅಂಬುಜಾ ಸಿಮೆಂಟ್ಸ್ ಷೇರುಗಳು ದಾಖಲೆಯ ಗರಿಷ್ಠ 567.9 ರೂ.ಗೆ ತಲುಪಿ, ಬಿಎಸ್‌ಇಯಲ್ಲಿ ಹಿಂದಿನ 516.30 ರೂ.ಗೆ ಹೋಲಿಸಿದರೆ ಶೇ.9.99ರಷ್ಟು ಏರಿಕೆ ಕಂಡಿದೆ. ಅಂಬುಜಾ ಸಿಮೆಂಟ್ಸ್ ಸ್ಟಾಕ್ ಸರಾಸರಿಗಿಂತ ಹೆಚ್ಚಿನ ವಹಿವಾಟು ನಡೆಸುತ್ತಿದೆ. ಸ್ಟಾಕ್ ಒಂದು ವರ್ಷದಲ್ಲಿ 32.52 ರಷ್ಟು ಏರಿಕೆಯಾಗಿದೆ ಮತ್ತು 2022 ರಲ್ಲಿ 47.42 ಶೇಕಡಾವನ್ನು ಗಳಿಸಿದೆ. ಒಂದು ತಿಂಗಳಲ್ಲಿ ಸ್ಟಾಕ್ 32.49 ಶೇಕಡಾವನ್ನು ಗಳಿಸಿದೆ. ಬಿಎಸ್‌ಇಯಲ್ಲಿ 99.82 ಕೋಟಿ ವಹಿವಾಟು ನಡೆದಿದೆ. ಹೆಚ್ಚುವರಿಯಾಗಿ, ಅದಾನಿ ಗ್ರೂಪ್ ಷೇರುಗಳ ಆದ್ಯತೆಯ ಹಂಚಿಕೆಯ ಮೂಲಕ ಅಂಬುಜಾ ಸಿಮೆಂಟ್ಸ್‌ಗೆ 20,000 ಕೋಟಿ ರೂಪಾಯಿಗಳನ್ನು ತುಂಬಲಿದೆ ಎಂದು ವರದಿಗಳು ತಿಳಿಸಿವೆ.

ಅದಾನಿ ಕುಟುಂಬವು ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿಯ ಸ್ವಾಧೀನವನ್ನು ಪೂರ್ಣಗೊಳಿಸಿದೆ ಮತ್ತು ದೇಶದ ಎರಡನೇ ಅತಿದೊಡ್ಡ ಸಿಮೆಂಟ್ ಕಂಪನಿಯಾಗಿದೆ. ಎಸಿಸಿಯಲ್ಲಿ ಅದಾನಿಯವರ ಪಾಲು ಈಗ ಶೇ.56.7ರಷ್ಟಿದ್ದರೆ ಅಂಬುಜಾದಲ್ಲಿ ಶೇ.63.2ರಷ್ಟಿದೆ. ಸ್ವಾಧೀನದ ನಂತರ, ಎರಡೂ ಕಂಪನಿಗಳು ತಮ್ಮ ನಿರ್ವಹಣೆ ಮತ್ತು ಮಂಡಳಿಗಳನ್ನು ಬದಲಾಯಿಸಿವೆ ಮತ್ತು ಜನವರಿ-ಡಿಸೆಂಬರ್‌ನಿಂದ ಏಪ್ರಿಲ್-ಮಾರ್ಚ್‌ಗೆ ಹಣಕಾಸು ವರ್ಷದಲ್ಲಿ ಬದಲಾವಣೆಯನ್ನು ಘೋಷಿಸಿವೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ