AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್‌ನ ಷೇರುಗಳಲ್ಲಿ ಇಂದು ಶೇ.10 ರಷ್ಟು ಏರಿಕೆ

ಅಂಬುಜಾ ಸಿಮೆಂಟ್ಸ್ ಮತ್ತು ಅದರ ಅಂಗಸಂಸ್ಥೆ ಎಸಿಸಿ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಂಡ ಬೆನ್ನಲ್ಲೆ ಅದಾನಿ ಎಂಟರ್‌ಪ್ರೈಸಸ್, ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್‌ನ ಷೇರುಗಳು ಇಂದು ಶೇಕಡಾ 10 ರಷ್ಟು ಏರಿಕೆ ಕಂಡವು.

ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್‌ನ ಷೇರುಗಳಲ್ಲಿ ಇಂದು ಶೇ.10 ರಷ್ಟು ಏರಿಕೆ
ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್‌ನ ಷೇರುಗಳು ಇಂದು ಶೇಕಡಾ 10 ರಷ್ಟು ಏರಿಕೆ ಕಂಡವು (ಸಾಂದರ್ಭಿಕ ಚಿತ್ರ)
TV9 Web
| Edited By: Rakesh Nayak Manchi|

Updated on: Sep 19, 2022 | 4:27 PM

Share

ಅದಾನಿ ಎಂಟರ್‌ಪ್ರೈಸಸ್ (Adani Enterprises), ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್‌ (ACC Cement and Ambuja Cement)ನ ಷೇರುಗಳು ಇಂದು ಶೇಕಡಾ 10 ರಷ್ಟು ಏರಿಕೆ ಕಂಡವು. ಅದಾನಿ ಗ್ರೂಪ್ ಶುಕ್ರವಾರ ಅಂಬುಜಾ ಸಿಮೆಂಟ್ಸ್ ಮತ್ತು ಅದರ ಅಂಗಸಂಸ್ಥೆ ಎಸಿಸಿ ಲಿಮಿಟೆಡ್ ಅನ್ನು ಸ್ವಿಟ್ಜರ್ಲೆಂಡ್‌ನ ಹೋಲ್ಸಿಮ್ ಗ್ರೂಪ್‌ನಿಂದ 6.4 ಬಿಲಿಯನ್‌ಗೆ ಸ್ವಾಧೀನಪಡಿಸಿಕೊಂಡಿತು. ಅದರಂತೆ ಆದಿತ್ಯ ಬಿರ್ಲಾ ಗ್ರೂಪ್‌ (Aditya Birla Group)ನ ಅಲ್ಟ್ರಾಟೆಕ್ ಸಿಮೆಂಟ್‌ (Ultratech Cement)ನ ನಂತರ ಅದಾನಿಯ ಎಸಿಸಿ ಸಿಮೆಂಟ್ ಭಾರತದಲ್ಲಿ ಎರಡನೇ ಅತಿದೊಡ್ಡ ಸಿಮೆಂಟ್ ಕಂಪನಿಯಾಗಿದೆ. ಇದರ ಬೆನ್ನಲ್ಲೇ ಷೇರುಗಳು ಶೇಕಡಾ 10 ರಷ್ಟು ಏರಿಕೆ ಕಂಡಿವೆ.

ಸ್ವಾದೀನ ಪ್ರಕ್ರಿಯೆ ಪೂರ್ಣಗೊಂಡ ಬೆಳವಣಿಗೆಯಿಂದ ಉತ್ತೇಜಿತಗೊಂಡಿರುವ ಅಂಬುಜಾ ಸಿಮೆಂಟ್ಸ್ ಷೇರುಗಳು ದಾಖಲೆಯ ಗರಿಷ್ಠ 567.9 ರೂ.ಗೆ ತಲುಪಿ, ಬಿಎಸ್‌ಇಯಲ್ಲಿ ಹಿಂದಿನ 516.30 ರೂ.ಗೆ ಹೋಲಿಸಿದರೆ ಶೇ.9.99ರಷ್ಟು ಏರಿಕೆ ಕಂಡಿದೆ. ಅಂಬುಜಾ ಸಿಮೆಂಟ್ಸ್ ಸ್ಟಾಕ್ ಸರಾಸರಿಗಿಂತ ಹೆಚ್ಚಿನ ವಹಿವಾಟು ನಡೆಸುತ್ತಿದೆ. ಸ್ಟಾಕ್ ಒಂದು ವರ್ಷದಲ್ಲಿ 32.52 ರಷ್ಟು ಏರಿಕೆಯಾಗಿದೆ ಮತ್ತು 2022 ರಲ್ಲಿ 47.42 ಶೇಕಡಾವನ್ನು ಗಳಿಸಿದೆ. ಒಂದು ತಿಂಗಳಲ್ಲಿ ಸ್ಟಾಕ್ 32.49 ಶೇಕಡಾವನ್ನು ಗಳಿಸಿದೆ. ಬಿಎಸ್‌ಇಯಲ್ಲಿ 99.82 ಕೋಟಿ ವಹಿವಾಟು ನಡೆದಿದೆ. ಹೆಚ್ಚುವರಿಯಾಗಿ, ಅದಾನಿ ಗ್ರೂಪ್ ಷೇರುಗಳ ಆದ್ಯತೆಯ ಹಂಚಿಕೆಯ ಮೂಲಕ ಅಂಬುಜಾ ಸಿಮೆಂಟ್ಸ್‌ಗೆ 20,000 ಕೋಟಿ ರೂಪಾಯಿಗಳನ್ನು ತುಂಬಲಿದೆ ಎಂದು ವರದಿಗಳು ತಿಳಿಸಿವೆ.

ಅದಾನಿ ಕುಟುಂಬವು ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿಯ ಸ್ವಾಧೀನವನ್ನು ಪೂರ್ಣಗೊಳಿಸಿದೆ ಮತ್ತು ದೇಶದ ಎರಡನೇ ಅತಿದೊಡ್ಡ ಸಿಮೆಂಟ್ ಕಂಪನಿಯಾಗಿದೆ. ಎಸಿಸಿಯಲ್ಲಿ ಅದಾನಿಯವರ ಪಾಲು ಈಗ ಶೇ.56.7ರಷ್ಟಿದ್ದರೆ ಅಂಬುಜಾದಲ್ಲಿ ಶೇ.63.2ರಷ್ಟಿದೆ. ಸ್ವಾಧೀನದ ನಂತರ, ಎರಡೂ ಕಂಪನಿಗಳು ತಮ್ಮ ನಿರ್ವಹಣೆ ಮತ್ತು ಮಂಡಳಿಗಳನ್ನು ಬದಲಾಯಿಸಿವೆ ಮತ್ತು ಜನವರಿ-ಡಿಸೆಂಬರ್‌ನಿಂದ ಏಪ್ರಿಲ್-ಮಾರ್ಚ್‌ಗೆ ಹಣಕಾಸು ವರ್ಷದಲ್ಲಿ ಬದಲಾವಣೆಯನ್ನು ಘೋಷಿಸಿವೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು